ಜನ ಒಪ್ಪಿಕೊಳ್ಳುವುದಾದರೆ ರಾಜಕೀಯ ಮಾಡಲಿ : ಕುಟುಂಬ ರಾಜಕಾರಣದ ಬಗ್ಗೆ ಸಿದ್ದರಾಮಯ್ಯ ಮಾತು

suddionenews
1 Min Read

ರಾಜಸ್ಥಾನ: ಕಾಂಗ್ರೆಸ್ ಶಿಬಿರದಲ್ಲಿ ಒಂದು ಕುಟುಂಬಕ್ಕೆ ಒಂದು ಟಿಕೆಟ್ ಎಂಬ ಬಗ್ಗೆ ತೀರ್ಮಾನ ಮಾಡಲಾಗಿದೆ. ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದು, ನಾನಿದ್ದೀನಿ, ನನ್ನ ಮಗ ಎಂಎಲ್ಎ ಆಗಿದ್ದಾನೆ. ಜನ ಅವರನ್ನು ಅಕ್ಸೆಪ್ಟ್ ಮಾಡಿಕೊಂಡಿದ್ದಾರೆ. ನನಗೆ ಬರೀ 30 ಸಾವಿರ ಲೀಡ್ ಕೊಟ್ಟಿದ್ದರು, ಅವನಿಗೆ 58 ಸಾವಿರ ಲೀಡ್ ಕೊಟ್ಟಿದ್ದಾರೆ. ಜನ ಒಪ್ಪಿಕೊಳ್ಳುವುದಾದರೆ ರಾಜಕೀಯ ಮಾಡಲಿ ಎಂದಿದ್ದಾರೆ.

ಅಪ್ಪ ನಿಂತುಕೊಂಡ ಮಗ ನಿಲ್ಲಬಾರದು ಆ ಮಾತೆಲ್ಲಾ ಫ್ಯಾಮಿಲಿ ರಾಜಕಾರಣವಾದರೆ, ಬಲತ್ಕಾರದಲ್ಲಿ ಇಂದು ಫ್ಯಾಮಿಲಿ ರಾಜಕಾರಣ ಮಾಡಿದರೆ ಅದು ಆಗಬಾರದು ಎಂದಿದ್ದಾರೆ. ಆಯಾ ವ್ಯಕ್ತಿ ಆರೋಗ್ಯವಾಗಿದ್ದರೆ ರಾಜಕೀಯ ಮಾಡುವುದಕ್ಕೆ ತೊಂದರೆ ಇಲ್ಲ. ಯಾರು ವಯಸ್ಸಾಗಿ, ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಅವರು ರಿಟೈರ್ಮೆಂಟ್ ತೆಗೆದುಕೊಳ್ಳಬಹುದು. ಬಲತ್ಕಾರವಾಗಿ ರಿಟೈರ್ ಆಗಿ ಅಂತ ಹೇಳುವುದು ಬೇಡ ಎಂದು 70 ವರ್ಷದವರಿಗೆ ಕೋಕ್ ನೀಡುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಕಾಂಗ್ರೆಸ್ ಪಕ್ಷ ಹೋರಾಟ ಮಾಡುತ್ತಿದೆ. ಇನ್ನಷ್ಟು ತೀವ್ರಗೊಳಿಸಲಾಗುತ್ತದೆ. ಅಕ್ಟೋಬರ್ 2ರಿಂದ ಕನ್ಯಾಕುಮಾರಿ ಟು ಕಾಶ್ಮೀರಿ ತನಕ ಯಾತ್ರೆ ನಡೆಯುತ್ತದೆ. ಇದೆಲ್ಲವೂ ಜನಗಳಿಗೆ ಕನೆಕ್ಟ್ ಆಗುವುದು ಮತ್ತು ಸರ್ಕಾರದ ಫೇಲ್ಯೂರ್ಸ್ ಅನ್ನು, ಬಿಜೆಪಿ ಅವರ ಹಿಡನ್ ಅಜೆಂಡಾ ಏನಿದೆ ಅದನ್ನೆಲ್ಲಾ ತಿಳಿಸುವ ಕೆಲಸವಾಗುತ್ತೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *