ಕೋಲಾರ ಕ್ಷೇತ್ರವನ್ನು ಘೋಷಿಸಿ ಬಿಡಿ ಎಂದವರಿಗೆ ರಿಸ್ಕ್ ಬೇಡ ಎಂದ ಸಿದ್ದರಾಮಯ್ಯ..!

suddionenews
1 Min Read

 

ಕೋಲಾರ : 2023ರ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಸಿದ್ದರಾಮಯ್ಯ ಕ್ಷೇತ್ರ ಹುಡುಕಾಟದಲ್ಲಿದ್ದಾರೆ. ಹಲವು ಕ್ಷೇತ್ರಗಳಿಂದ ಬೆಂಬಲಿಗರು ಮತ್ತು ಆಪ್ತರು ನಮ್ಮಲ್ಲಿಯೇ ಸ್ಪರ್ಧಿಸಿ, ಗೆಲ್ಲಿಸಿಕೊಡುತ್ತೀವಿ ಎಂದು ಹೇಳುತ್ತಿದ್ದಾರೆ. ಆದ್ರೆ ಸಿದ್ದರಾಮಯ್ಯ ಅವರು ಸಾಕಷ್ಟು ಯೋಚನೆ ಮಾಡಿ ಕ್ಷೇತ್ರ ಆರಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಬಾದಾಮಿಯಲ್ಲಿ ಕಳೆದ ಬಾರಿ ಸೋಲು ಅನುಭವಿಸಿದ್ದರು. ಈ ಬಾರಿ ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಅಂತ ಈಗಾಗಲೇ ಕಟ್ಟುನಿಟ್ಟಾಗಿ ಹೇಳಿದ್ದಾರೆ. ಹೀಗಾಗಿ ಬೇರೆ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಇನ್ನು ಇತ್ತಿಚೆಗಷ್ಟೆ ಕೋಲಾರಕ್ಕೆ ಭೇಟಿ ನೀಡಿದ್ದರು. ಈ ಹಿನ್ನೆಲೆ ಆಪ್ತರೊಬ್ಬರು ಕೋಲಾರದಿಂದ ಸ್ಪರ್ಧೆ ಎಂದು ಘೋಷಿಸಿ ಬಿಡಿ ಎಂದಾಗ, ಬೇಡ ಬೇಡ ರಿಸ್ಕ್ ಬೇಡ ಎಂದಿದ್ದಾರೆ.

ಇದು ನನ್ನ ಕೊನೆ ಚುನಾವಣೆ. ಹೀಗಾಗಿ ರಿಸ್ಕ್ ತೆಗೆದುಕೊಳ್ಳುವುದು ಬೇಡ. ನೀವೂ ಸುಮ್ಮನೆ ಇರಿ ಎಂದು ಕಿವಿ ಮಾತು ಹೇಳಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಯತೀಂದ್ರ ಅವರ ಕ್ಷೇತ್ರವನ್ನು ಇನ್ನು ಫೈನಲ್ ಮಾಡಿಲ್ಲ. ವಿರೋಧಿಗಳಿಗೆ ದಾರಿ ಮಾಡಿಕೊಡಬಾರದು, ಅವರು ಅಲರ್ಟ್ ಆಗಿ ಸ್ಟ್ರಾಂಗ್ ಇರುವಂತ ಕ್ಯಾಂಡಿಡೇಟ್ ನಿಲ್ಲಿಸಬಾರದು ಎಂಬ ಲೆಕ್ಕಚಾರದಲ್ಲಿ ಸಿದ್ದರಾಮಯ್ಯ ಇದ್ದಾರೋ ಏನೋ. ಆದ್ರೆ ಅವರು ನಿಲ್ಲುವ ಕ್ಷೇತ್ರ ತಿಳಿದುಕೊಳ್ಳುವ ಕುತೂಹಲವಂತು ಎಲ್ಲರಲ್ಲೂ ಇದೆ.

Share This Article
Leave a Comment

Leave a Reply

Your email address will not be published. Required fields are marked *