Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಸಿಎಂ ಮನೆ ಹಾಳಾಗ ಎಂದ ಸಿದ್ದರಾಮಯ್ಯ : ಮೊದಲೆಲ್ಲಾ ಚೆನ್ನಾಗಿಯೇ ಇದ್ದರು ಎಂದ ಸೋಮಣ್ಣ

---Advertisement---

ಮೈಸೂರು: ಚುನಾವಣೆ ಹತ್ತಿರವಾಗುತ್ತಿದ್ದಂತೆ ಜನರಿಗೆ ರಾಜಕೀಯ ಪಕ್ಷಗಳು ಭರವಸೆಯನ್ನು ನೀಡುವುದಕ್ಕೆ ಆರಂಭಿಸಿವೆ. ಹೋದಲ್ಲಿ ಬಂದಲ್ಲಿ ನಮ್ಮನ್ನ ನೀವೂ ಗೆಲ್ಲಿಸಿದ್ರೆ ಇದನ್ನ ಕೊಡ್ತೀವಿ, ಅದನ್ನು ಕೊಡ್ತೀವಿ ಅಂತಿದ್ದಾರೆ. ಅದರಂತೆ ಕಾಂಗ್ರೆಸ್ ಪಕ್ಷ ಕೂಡ ಈ ಬಾರಿ ಅಧಿಕಾರ ಹಿಡಿಯುವುದಕ್ಕೆ ಹಲವು ರೀತಿಯಲ್ಲಿ ಸಾಹಸ ಮಾಡುತ್ತಿದೆ. ಈ ಬಾರಿ ಅಧಿಕಾರಕ್ಕೆ ಬಂದರೆ ಉಚಿತವಾಗಿ ವಿದ್ಯುತ್ ನೀಡುವುದಾಗಿ ಭರವಸೆ ನೀಡಿದೆ.

ಕಾಂಗ್ರೆಸ್ ನವರ ಉಚಿತ ವಿದ್ಯುತ್ ಹೇಳಿಕೆಗೆ ಪ್ರತಿಜ್ರಿಯೆ ನೀಡಿರುವ ಸಚಿವ ಸೋಮಣ್ಣ, ಕೈ ನಾಯಕರು ಫ್ರೀ ವಿದ್ಯುತ್ ಕೊಡ್ತೀನಿ ಅಂತಾರೆ. ಜನರಿಗೆ ಆಸೆ ಹುಟ್ಟಿಸುವುದು ಭರವಸೆ ನೀಡುವುದು ಸರಿಯಲ್ಲ. ಇದು ಸಾಧ್ಯವಿಲ್ಲ ಅಂತ ಸಿದ್ದುಗೂ ಗೊತ್ತಿದೆ. ಜೆಡಿಎಸ್ ಭರವಸೆ ನೀಡಿದ್ರೆ ಏನೂ ಅನ್ನಿಸುತ್ತಾ ಇರಲಿಲ್ಲ. ಸಿದ್ದರಾಮಯ್ಯ ಸಿಎಂ ಆಗಿದ್ದವರು. ಸಿದ್ದು 13 ಬಾರಿ ಬಜೆಟ್ ಮಂಡಿಸಿದ್ದವರು. ಜನರಿಗೆ ಈ ರೀತಿ ಆಸೆ ಹುಟ್ಟಿಸುವುದು ಸರಿಯಲ್ಲ ಎಂದಿದ್ದಾರೆ.

ಬೊಮ್ಮಾಯಿ ಮನೆ ಹಾಳಾಗ ಎಂಬ ಸಿದ್ದು ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದು, ಸಿದ್ದು ಈ ರೀತಿ ಯಾಕೆ ಮಾತನಾಡುತ್ತಾರೋ ಗೊತ್ತಿಲ್ಲ. ಸಿದ್ದು ಮೊದಲೆಲ್ಲಾ ಚೆನ್ನಾಗಿಯೇ ಇದ್ರು. ಈಗ ಏನಾಗಿದ್ಯೋ ಗೊತ್ತಿಲ್ಲ. ಏನಾದರೂ ಕೇಳಿದ್ರೆ ಗ್ರಾಮೀಣ ಪದ ಅಂತಾರೆ. ಸಿದ್ದರಾಮಯ್ಯ ಹೇಳಿಕೆ ಸರಿಯಲ್ಲ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...