ಬೆಂಗಳೂರು: ಖುರ್ಚಿ ಕದನದ ವಿಚಾರ ಇನ್ನು ಕೂಡ ಬೂದಿ ಮುಚ್ಚಿದ ಕೆಂಡದಂತೆ ಇದೆ. ಇಂದು ವಿಧಾನಸಭೆಯ ವಿಶೇಷ ಅಧಿವೇಶನದ ಸಮಯದಲ್ಲೂ ಈ ಕುರ್ಚಿ ಕದನದ ವಿಚಾರ ಸದ್ದು ಮಾಡಿದೆ. ಆದರೂ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯ ಅವರು ಒಗ್ಗಟ್ಟನ್ನ ಪ್ರದರ್ಶನ ಮಾಡಿದ್ದಾರೆ. ನಾನು ಹಾಗೂ ಸಿಎಂ ಪರಸ್ಪರರ ಕಷ್ಟದಲ್ಲಿ ಜೊತೆಯಾಗಿ ನಿಂತವರು ಎಂದಿದ್ದಾರೆ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಮುಂದೆಯೂ ಕಷ್ಟದಲ್ಲಿ ಪರಸ್ಪರ ಜೊತೆಯಾಗ್ತೇವೆ. ಸಿದ್ದರಾಮಯ್ಯ ನನ್ನ ಪರ ಇದ್ದಾರೆ. ನಾವಿಬ್ರೂ ಹೀಗೆ ಜೊತೆಯಾಗಿಯೇ ಇರ್ತೀವಿ. ಏನೇ ತೀರ್ಮಾನ ಇದ್ದರೂ ಪಕ್ಷ ಮಾಡುತ್ತೆ. 2028ಕ್ಕೆ ಏನಾಗುತ್ತೆ ಎಂಬುದನ್ನ ನೋಡೋಣಾ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಇದೇ ವೇಳೆ ಡಿಕೆಶಿಯನ್ನು ಬಿಟ್ಟು ಕೊಡದ ಸಿಎಂ ಸಿದ್ದರಾಮಯ್ಯ, ಡಿಕೆಶಿ ವೈರಾಗ್ಯದ ಮಾತನ್ನಾಡಿಲ್ಲ. ವಾಸ್ತವಿಕ ಮಾತನ್ನಾಡಿದ್ದಾರೆ. ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆಗೆ ಉತ್ತರ ಕೊಡುವಾಗ ಸಿಎಂ ಸಿದ್ದರಾಮಯ್ಯ ಅವರು ಸಿಎಂ ಹಾಗೂ ಡಿಕೆಶಿ ನಡುವೆ ಜಗಳ ಇದೆ ಅಂತ ಅಶೋಕ್ ಆರೋಪ ಮಾಡಿದ್ದರು. ಅದನ್ನು ಪ್ರಸ್ತಾಪಿಸಿದ ಸಿಎಂ ಸಿದ್ದರಾಮಯ್ಯ ಅವರು, ನನ್ನ ಮತ್ತು ಡಿಕೆಶಿ ಮಧ್ಯೆ ಜಗಳ ಇದೆ ಎಂದು ಆರೋಪಿಸಿದ್ದಾರೆ. ನಿನಗೂ ನನಗೂ ಕೋಲಾಹಲವಿದೆಯಂತೆ ಕಣಯ್ಯ ಎಂದು ಪಕ್ಕದಲ್ಲಿಯೇ ಕೂತಿದ್ದ ಡಿಕೆ ಶಿವಕುಮಾರ್ ಅವರಿಗೆ ಹೇಳಿದರು. ಈ ಮಾತಿನ ನಡುವೆ ಆರ್ ಅಶೋಕ್ ಅವರು ಮಾತನಾಡುತ್ತಾ, ಒಂದು ಮಾತು ನೂರು ಅರ್ಥ. ಸಮಯ ಯಾವಾಗ ಬರುತ್ತೆ ಅಂತ ಹೇಳಲಿ ಎಂದರು. ಅದೇನೆ ಇರಲಿ, ಅದೆಷ್ಟೇ ಭಿನ್ನಾಭಿಪ್ರಾಯಗಳು ಇರಲಿ ಸಾರ್ವಜನಿಕವಾಗಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಮಾತ್ರ ಮನಸ್ತಾಪ ತೋರಿಸಿಲ್ಲ.

