ಸಿದ್ದರಾಮಯ್ಯ ಅವರಿಗೆ ನಾನು ಯಾರಂತ ಗೊತ್ತಿಲ್ಲದೆ ಇರಬಹುದು : ಶಾಸಕ ರಘುಪತಿ ಭಟ್ ಅಸಮಾಧಾನ

suddionenews
1 Min Read

ಉಡುಪಿ: ಹಿಜಾಬ್ ವಿಚಾರವಾಗಿ ಶಾಸಕ ರಘುಪತಿ ಭಟ್ ನೀಡಿದ್ದ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದರು. ಯಾರು ಆ ರಘುಪತಿ ಭಟ್ ಎಂದು ಕೇಳಿದ್ದರು. ಆ ವಿಚಾರವಾಗಿ ಇದೀಗ ಗರಂ ಆಗಿರುವ ಶಾಸಕ ರಘುಪತಿ ಭಟ್, ಸಿದ್ದರಾಮಯ್ಯ ಅವರಿಗೆ ಖಾರವಾಗಿಯೇ ಉತ್ತರ ಕೊಟ್ಟಿದ್ದಾರೆ.

ನಾನು ಕೂಡ ಅವರದ್ದೇ ದಾಟಿಯಲ್ಲಿ ಮಾತನಾಡಬಹುದು. ಏಕವಚನದಲ್ಲಿ ಮಾತನಾಡಿದ್ದಕ್ಕೆ ಸಿಂಪತಿ ಇದೆ. ನಾನು ಕೂಡ ಅದೇ ದಾಟಿಯಲ್ಲಿ ಮಾತನಾಡಿದ್ರೆ ಶೋಭೆ ತರಲ್ಲ. ರಘುಪತಿ ಭಟ್ ಯಾರು ಅನ್ನೋದನ್ನ ಉಡುಪಿ ಮತದಾರರನ್ನ ಕೇಳಲಿ. ಸಿದ್ದರಾಮಯ್ಯ ಅವರಿಗೆ ನಾನು ಯಾರು ಅಂತ ಗೊತ್ತಿಲ್ಲದೇ ಇರಬಹುದು. ಅವರ ಅಭ್ಯರ್ಥಿ ಎದುರೇ ಮೂರು ಬಾರಿ ಗೆದ್ದಿದ್ದೇನೆ.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗಲೇ ಸಮವಸ್ತ್ರ ಸಂಹಿತೆ ಇತ್ತು. ಜಿಲ್ಲೆಯ ಎಲ್ಲಾ ಸರ್ಕಾರಿ ಶಾಲೆಯಲ್ಲೂ ಸಮವಸ್ತ್ರ ಧರಿಸುತ್ತಿದ್ದರು. ಹಿಜಾಬ್ ಧರಿಸದೇನೆ ತರಗತಿಗಳಿಗೆ ಹಾಜರಾಗುತ್ತಿದ್ದರು. ಸಿದ್ದರಾಮಯ್ಯ ಅವರ ಕಾಲದಲ್ಲಿದ್ದ ಪದ್ಧತಿಯನ್ನ ಮುಂದುವರೆಸಲು ಕ್ರಮ ತೆಗೆದುಕೊಂಡಿದ್ದೇವೆ. ಇದನ್ನ ಅವರು ಅರಿಯಬೇಕು ಎಂದು ಸಿದ್ದರಾಮಯ್ಯ ಅವರ ಹೇಳಿಕೆಗೆ ಶಾಸಕ ರಘುಪತಿ ಭಟ್ ತಿರುಗೇಟು ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *