ಟಿಪ್ಪು ಹೊಡೆದಂತೆ ಹೊಡೆಯಿರಿ ಎಂದ ಅಶ್ವತ್ಥ್ ನಾರಾಯಣ್ ವಿರುದ್ಧ ಜನರಿಗೆ ಕರೆಕೊಟ್ಟ ಸಿದ್ದರಾಮಯ್ಯ..!

suddionenews
1 Min Read

ಕೊಪ್ಪಳ: ಚುನಾವಣೆ ಹತ್ತಿರವಾಗುತ್ತಿರುವಾಗಲೆ ವಿರೋಧ ಪಕ್ಷದವರಿಗೆ ಗುರಿಯಾಗುತ್ತಿದ್ದಾರೆ ಆಡಳಿತ ಪಕ್ಷದ ನಾಯಕರು. ಇತ್ತಿಚೆಗೆ ಸಚಿವ ಅಶ್ವತ್ಥ್ ನಾರಾಯಣ್ ಅವರು ಮಂಡ್ಯದಲ್ಲಿ ಮಾತನಾಡುವಾಗ ಟಿಪ್ಪು ಹೊಡೆದಂತೆ ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಬೇಕು ಎಂಬ ಮಾತು ಹೇಳಿದ್ದರು. ಈ ವಿಚಾರವನ್ನು ಸ್ವತಃ ಆಡಳಿತ ಪಲ್ಷದವರು ಕೂಡ ವಿರೋಧಿಸಿದ್ದರು. ಇದೀಗ ಇದನ್ನೇ ಅಸ್ತ್ರವಾಗಿಟ್ಟುಕೊಂಡು ಸಿದ್ದರಾಮಯ್ಯ ವೋಟು ಕೇಳುತ್ತಿದ್ದಾರೆ.

ಕೊಪ್ಪಳದಲ್ಲಿ ಪ್ರಜಾಧ್ವನಿ ಯಾತ್ರೆಯಲ್ಲಿ ತೊಡಗಿರುವ ಸಿದ್ದರಾಮಯ್ಯ ಅವರು ಅಶ್ವತ್ಥ್ ನಾರಾಯಣ್ ಬಗ್ಗೆ ಹರಿಹಾಯ್ದಿದ್ದಾರೆ. ಅಶ್ವತ್ಥ್ ನಾರಾಯಣ್ ಅಸ್ವಸ್ಥನಾಗಿದ್ದಾನೆ. ಟಿಪ್ಪು ಸುಲ್ತಾನ್ ನನ್ನು ಮುಗಿಸಿದಂತೆ ಸಿದ್ದರಾಮಯ್ಯ ಅವರನ್ನು ಮುಗಿಸಿ ಎಂದು ಹೇಳುತ್ತಾನೆ‌‌. ಇಂಥವರೆಲ್ಲಾ ರಾಜಕೀಯದಲ್ಲಿ ಇರುವುದಕ್ಕೆ ಲಾಯಕ್ಕಾ..? ಇಂತಹವರನ್ನು ಸೋಲಿಸಿ ಮನೆಗೆ ಕಳುಹಿಸಿ. ಚುನಾವಣೆಯಲ್ಲಿ ಚರ್ಚೆಯಾಗಬೇಕಿರುವುದು ಅಭಿವೃದ್ಧಿ.

ಅದನ್ನು ಬಿಟ್ಟು ಲವ್ ಜಿಹಾದ್ ಬಗ್ಗೆ ಮಾತನಾಡಿ ಅಂತ ಬಿಜೆಪಿಗರಿಗೆ ಕಟೀಲು ಹೇಳುತ್ತಾನೆ. ಟಿಪ್ಪು ಸುಲ್ತಾನ್ ವರ್ಸಸ್ ಅಬ್ಬಕ್ ಅಂತ ಅಮಿತ್ ಶಾ ಹೇಳುತ್ತಾನೆ. ಯಾವುದೇ ಕಾರಣಕ್ಕೂ ಬಿಜೆಪಿ ಜೆಡಿಎಸ್ ಅಧಿಕಾರಕ್ಕೆ ಬರಬಾರದು. ರಾಜ್ಯವನ್ನು ಹಾದಿ ತಪ್ಪಿಸುತ್ತಿರುವ ಕೋಮುವಾದಿ ಪಕ್ಷ ಬಿಜೆಪಿಯನ್ನು ಮುಂದಿನ ಚುನಾವಣೆಯಲ್ಲಿ ಸೋಲಿಸಿ ಎಂದು ಕರೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *