ದೇವರನ್ನು ಹೆಚ್ಚು ನಂಬದ ಸಿದ್ದರಾಮಯ್ಯ ಈಗ ಒಂದು ಕಡೆ ನಿಲ್ಲುತ್ತಾರಾ..? ಎರಡು ಕಡೆನಾ..?

suddionenews
1 Min Read

ಮಾಜಿ ಸಿಎಂ ಸಿದ್ದರಾಮಯ್ಯ ಅವರು ದೇವಸ್ಥಾನಕ್ಕೆ ಹೋಗುತ್ತಾರೆ, ಪೂಜೆಯನ್ನು ಮಾಡಿಸುತ್ತಾರೆ. ಆದರೆ ಅತಿ ಹೆಚ್ಚಾಗಿ ನಂಬುವುದಿಲ್ಲ. ಅಲ್ಲೊಂದು ಮೂಢನಂಬಿಕೆಯಿದೆ ಎಂದರೆ ಅದನ್ನು ಮುರಿದಿರುವ ಉದಾಹರಣೆಯೂ ಇದೆ. ಹೀಗಿರುವಾಗ ಚುನಾವಣೆಯಲ್ಲಿ ಯಾವ ಥರದ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದೇ ಕುತೂಹಲದ ವಿಚಾರವಾಗಿದೆ.

ಯಾಕಂದ್ರೆ ಸಿದ್ದರಾಮಯ್ಯ ಅವರ ಮನೆ ದೇವರಾದ ಚಿಕ್ಕಮ್ಮದೇವಿ, ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಭವಿಷ್ಯ ನುಡಿದಿದೆ. ಒಂದು ಕಡೆ ನಿಂತರೆ ಸೋಲು, ಎರಡು ಕಡೆ ನಿಲ್ಲಬೇಕು ಎಂದು ಸೂಚನೆ ನೀಡಿದೆ. ಈ ಸೂಚನೆಯನ್ನು ಸಿದ್ದರಾಮಯ್ಯ ಅವರು ಅನುಕರಣೆ ಮಾಡುತ್ತಾರಾ ಎಂಬ ಪ್ರಶ್ನೆ ಕಾಡುತ್ತಿದೆ.

ಈಗಾಗಲೇ ಕೋಲಾರದಿಂದಾನೇ ಸ್ಪರ್ಧೆ ಮಾಡುತ್ತೀನಿ ಎಂದು ಘೋಷಣೆ ಮಾಡಿರುವ ಸಿದ್ದರಾಮಯ್ಯ, ಮಂಡ್ಯ ಜಿಲ್ಲೆಯ ಚೊಟ್ಟನಹಳ್ಳಿಯಲ್ಲಿರುವ ಆದಿನಾಡು ಚಿಕ್ಕಮ್ಮದೇವಿಗೆ ವಿಶೇಷ ಪೂಜೆ ಮಾಡಿಸಲು ಹೋಗಿದ್ದರು. ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರು ಕೂಡ ಜೊತೆಗೆ ಇದ್ದರು. ಈ ವೇಳೆ ಅರ್ಚಕ ಲಿಂಗಣ್ಣ ಅವರ ಮೈಮೇಲೆ ದೇವರು ಬಂದಿದೆ. ಆಗ ನಿಮಗೆ ಪ್ರಬಲ ಶಕ್ತಿಗಳ ವಿರೋಧವಿದೆ. ಒಂದು ಕಡೆ ಬಾಹುಬಲ ಚಾಚಿದ್ರೆ ಪ್ರಯೋಜವಾಗಲ್ಲ, ಎರಡು ಕಡೆ ಬಾಹುಬಲ ಚಾಚಬೇಕು. ಅರ್ಥ ಆಯ್ತೇನಪ್ಪ ಎಂದು ಮೈಮೇಲೆ ಬಂದ ದೇವರು ಸೂಚನೆ ನೀಡಿದೆ.

Share This Article
Leave a Comment

Leave a Reply

Your email address will not be published. Required fields are marked *