ಮದರಸ ಮಕ್ಕಳು ಔರಂಗಜೇಬ್‌ನಂತೆ ಅಲ್ಲ ಶ್ರೀರಾಮನಂತೆ ಆಗಬೇಕು : ವಕ್ಫ್ ಬೋರ್ಡ್ ಅಧ್ಯಕ್ಷ

 

ಸುದ್ದಿಒನ್ : ಇತ್ತಿಚೆಗಷ್ಟೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿದೆ. ಇಡೀ ದೇಶದ ಹಿಂದೂಗಳ ರಾಮನನ್ನು ನೋಡುವುದಕ್ಕೆ ಕ್ಯೂ ನಿಲ್ಲುತ್ತಿದ್ದಾರೆ. ರಾಮಜನ್ಮ ಭೂಮಿಗೆ ಹೋಗುತ್ತಿರುವವರ ಸಂಖ್ಯೆ ಕಡಿಮೆ ಏನು ಇಲ್ಲ. ಇಷ್ಟು ಖ್ಯಾತಿ ಪಡೆಯುತ್ತಿರುವುದರ ನಡುವೆ ವಕ್ಫ್ ಬೋರ್ಡ್ ಅಧ್ಯಕ್ಷ ಶಾದಾಬ್ ಶಾಮ್ಸ್ ಅವರು, ರಾಮನ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದಾರೆ. ಮದರಸದಲ್ಲಿ ಓದುತ್ತಿರುವ ಮಕ್ಕಳು ಔರಂಗಜೇಬನಂತೆ ಆಗುವುದು ಬೇಡ. ಶ್ರೀರಾಮನಂತೆ ಆಗಬೇಕೆಂದು ಹೇಳಿಕೆ ನೀಡಿದ್ದಾರೆ.

ಮುಂಬರುವ ಮಾರ್ಚ್‌ನಲ್ಲಿ ಹೊಸ ಅಧಿವೇಶನದ ಬಳಿಕ ಉತ್ತರಾಖಂಡ್ ವಕ್ಫ್ ಮಂಡಳಿಯೊಂದಿಗೆ ಸಂಯೋಜಿತವಾಗಿರುವ ಮದರಸಗಳಲ್ಲಿ ಭಗವಾನ್ ಶ್ರೀ ರಾಮನ ಕಥೆಯನ್ನು ಹೊಸ ಪಠ್ಯಕ್ರಮದ ಭಾಗವಾಗಿ ಮಾಡಲಾಗುವುದು. ಮದರಸಾಗಳಲ್ಲಿ ಓದುತ್ತಿರುವ ಮಕ್ಕಳು ಔರಂಗಜೇಬ್‌ನಂತೆ ಆಗಬಾರದು ಬದಲಾಗಿ ಭಗವಾನ್ ಶ್ರೀರಾಮನಂತೆ ಆಗಬೇಕೆಂದು ನಾವು ಬಯಸುತ್ತೇವೆ ಎಂದು ವಕ್ಫ್ ಬೋರ್ಡ್ ಅಧ್ಯಕ್ಷ ಶಾದಾಬ್ ಶಾಮ್ಸ್ ಹೇಳಿದ್ದಾರೆ.

ಮದರಸಾ ವಿದ್ಯಾರ್ಥಿಗಳಿಗೆ ಪ್ರವಾದಿ ಮೊಹಮ್ಮದ್ ಮತ್ತು ಭಗವಾನ್ ರಾಮನ ಜೀವನ ಕಥೆಯನ್ನು ಕಲಿಸಲಾಗುವುದು ಎಂದು ಅವರು ಹೇಳಿದರು. ಅನುಭವಿ ಮುಸ್ಲಿಂ ಧರ್ಮಗುರುಗಳು ಕೂಡ ಈ ಕ್ರಮವನ್ನು ಅನುಮೋದಿಸಿದ್ದಾರೆ. ಶಾದಾಬ್ ಶಾಮ್ಸ್ . ಶ್ರೀರಾಮನು ತೋರಿಸಿದ ಮೌಲ್ಯಗಳು ಅವರ ಧರ್ಮ ಅಥವಾ ನಂಬಿಕೆಯನ್ನು ಲೆಕ್ಕಿಸದೆ ಎಲ್ಲರೂ ಅನುಸರಿಸಲು ಅರ್ಹವಾಗಿವೆ. ವಕ್ಫ್ ಬೋರ್ಡ್ ಅಡಿಯಲ್ಲಿ 117 ಮದರಸಾಗಳಿವೆ ಮತ್ತು ಆಧುನಿಕ ಪಠ್ಯಕ್ರಮವನ್ನು ಡೆಹ್ರಾಡೂನ್, ಹರಿದ್ವಾರ, ಉಧಮ್ ಸಿಂಗ್ ನಗರ ಮತ್ತು ನೈನಿತಾಲ್ ಜಿಲ್ಲೆಗಳ ಮದರಸಗಳಲ್ಲಿ ಆರಂಭದಲ್ಲಿ ಪ್ರಾರಂಭಿಸಲಾಗುವುದು ಎಂದು ಅವರು ಹೇಳಿದರು. ಈ ವರ್ಷದ ಮಾರ್ಚ್‌ನಿಂದ ನಮ್ಮ ಮದರಸಾ ಆಧುನೀಕರಣ ಕಾರ್ಯಕ್ರಮದ ಅಂಗವಾಗಿ ವಕ್ಫ್ ಬೋರ್ಡ್‌ಗೆ ಸಂಯೋಜಿತವಾಗಿರುವ ಮದರಸಾಗಳಲ್ಲಿ ಶ್ರೀರಾಮನ ಅಧ್ಯಯನವನ್ನು ಪ್ರಾರಂಭಿಸಲಾಗುವುದು ಎಂದು ಶಮ್ಸ್ ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *