Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಜೀವನದಲ್ಲಿ ಬಸವತತ್ವ ಮತ್ತು ವಚನಸಾಹಿತ್ಯದ ಮಹತ್ವ ತಿಳಿಸಿದ ಶ್ರೀ ಬಸವಪ್ರಭು ಸ್ವಾಮೀಜಿ

---Advertisement---

 

ಸುದ್ದಿಒನ್, ಚಿತ್ರದುರ್ಗ,ಸೆ. 11 : ಜೀವನವೆಂದರೆ ಮುಳ್ಳಿನ ಹಾಸಿಗೆ. ಅದು ಊಟದ ತಟ್ಟೆ ಇದ್ದ ಹಾಗೆ. ಅದರಲ್ಲಿ ಏನಿದ್ದರೂ ಅನುಭವಿಸಬೇಕು ಎಂದು ಶ್ರೀ ಬಸವಪ್ರಭು ಸ್ವಾಮಿಗಳು ನುಡಿದರು.

ವಿದ್ಯಾನಗರದಲ್ಲಿ ಸೋಮವಾರ ನಡೆದ ನಿತ್ಯಕಲ್ಯಾಣ ಮನೆ ಮನೆಗೆ ಚಿಂತನ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು, ಜೀವನ ಅಂದ ಮೇಲೆ ಸನ್ಮಾನ ಅವಮಾನ ಇರುತ್ತದೆ. ಸೋಲು-ಗೆಲವು ಸಹಜ. ಸಂತರು, ಶರಣರು, ಮಹಾಂತರು ಸುಖ-ದುಃಖವನ್ನು ಸಮನಾಗಿ ಸ್ವೀಕರಿಸಿದರು. ಅಪ್ಪಟ ವೈಚಾರಿಕತೆಯ ವಾಸ್ತವವಾದಿಗಳು. ಬದುಕಿನಲ್ಲಿ ಬರುವ ಕಷ್ಟಗಳನ್ನು ಧೈರ್ಯವಾಗಿ ಎದುರಿಸಿದವರು ಬಸವಾದಿ ಶರಣರು. ಕೆಲವರು ಸಮಸ್ಯೆ ಬಂತೆಂದರೆ ಆತ್ಮಹತ್ಯೆಗೆ ಒಳಗಾಗುತ್ತಾರೆ.‌ಅದು ಜೀವನ ಅಲ್ಲ.

ಈ ಹಿನ್ನೆಲೆಯಲ್ಲಿ ಕೂಡಲಸಂಗನ ಶರಣರು ಧೀರರು. ಧೈರ್ಯ ಇರುವವರಿಗೆ ಬಸವತತ್ವ ಒಲಿಯುತ್ತದೆ. ಸಮಸ್ಯೆಗಳು ಬಂದಾಗ ಮೌನ ವಹಿಸಬೇಕು. ಕಷ್ಟಗಳು ದೇವರ ಪರೀಕ್ಷೆ ಎನ್ನಬೇಕು. ತಾಳ್ಮೆಯಿಂದ ಎಲ್ಲನ್ನು ನಿಭಾಯಿಸಲು ಸಾಧ್ಯ. ತಾಳ್ಮೆ ಬೇಕು ಎಂದರೆ ವಚನಸಾಹಿತ್ಯವನ್ನು ಓದಬೇಕೆಂದರು.

ಜೆ. ಪರಶುರಾಮ್ ಮಾತನಾಡಿ, ಭೂಮಿ ಸಮತೋಲನ ತಪ್ಪಿದರೆ ಭೂಕಂಪಗಳು ಸೃಷ್ಟಿಯಾಗುತ್ತವೆ. ದುಃಖ ಬಂದಾಗ ಬೌದ್ಧಿಕ ಮಟ್ಟ ಕುಸಿಯುತ್ತದೆ. ಅದನ್ನು ತಾಳ್ಮೆಯಿಂದ ಸ್ವೀಕರಿಸಬೇಕು. ಸುಖ ಬಂದರೆ ಹಿಗ್ಗದೆ ಮುಂದುವರಿಯಬೇಕೆಂದರು.

ಲಿಂಗಸಗೂರು ವಾಲ್ಮೀಕಿ ಗುರುಪೀಠದ ಶ್ರೀ ವರದಾನೇಶ್ವರ ಸ್ವಾಮಿಗಳು ಮಾತನಾಡಿ, ಕಷ್ಟ ಎಲ್ಲ ಪ್ರಾಣಿಗಳಿಗೂ ಇದೆ. ಕಷ್ಟ ಜೀವನವನ್ನು ಕಲಿಸುತ್ತದೆ. ಸಮಾಜಮುಖಿ ಕಾರ್ಯಗಳನ್ನು ಮಾಡತ್ತ, ವಿಚಾರವಂತಿಕೆಯನ್ನು ಮೈಗೂಡಿಸಿಕೊಳ್ಳಬೇಕೆಂದರು.

ಸುರೇಶ್‍ಬಾಬು ಮಾತನಾಡಿದರು. ಗ್ರಾ.ಪಂ. ಅಧ್ಯಕ್ಷ  ಜಯರಾಮರೆಡ್ಡಿ, ಉಪಾಧ್ಯಕ್ಷೆ ಶ್ರೀಮತಿ ಲೀಲಾವತಿ ಶಿವಮೂರ್ತಿ, ಸದಸ್ಯರಾದ ಶ್ರೀಮತಿ ವನಜಾಕ್ಷಿ, ನಿರಂಜನ, ಶ್ರೀಮತಿ ಸುಲೋಚನ ಶಂಕರ್, ಶ್ರೀಮತಿ ಪ್ರತಿಭಾ ಮಂಜುನಾಥ ಇದ್ದರು. ಜಮುರಾ ಕಲಾವಿದರು ವಚನ ಪ್ರಾರ್ಥನೆ ಮಾಡಿದರು. ಮಂಜುನಾಥ್ ಸ್ವಾಗತಿಸಿದರು. ಟಿ.ಪಿ. ಜ್ಞಾನಮೂರ್ತಿ ನಿರೂಪಿಸಿದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...