ಪಕ್ಷದಿಂದ ಶೋಕಾಸ್ ನೋಟೀಸ್.. ತಮ್ಮ ಶಿಷ್ಯಗೆ ಕಿವಿ ಮಾತು ಹೇಳಿದ ಬಿಎಸ್ವೈ..!

suddionenews
1 Min Read

ಬೆಂಗಳೂರು: ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಇತ್ತೀಚೆಗೆ ಬಿಜೆಪಿ ಮೇಲೆ ಬಹಿರಂಗವಾಗಿಯೇ ಹೌಹಾರಿದ್ದಾರೆ. ಇದು ಬಿಜೆಪಿ ನಾಯಕರಿಗೆ ಮುಜುಗರ ತಂದಿದೆ. ಹೀಗಾಗಿ ಬಿಎಸ್ ಯಡಿಯೂರಪ್ಪ ಮೂಲಕ ಅವರನ್ನು ಸರಿದಾರಿಗೆ ತರುವುದಕ್ಕೆ ಯತ್ನಿಸಿದ್ದಾರೆ. ಅದರಂತೆ ಇಂದು ಮಾಜಿ ಸಿಎಂ ಬಿಎಸ್ವೈ, ರೇಣುಕಾಚಾರ್ಯ ಅವರನ್ನು ಕರೆದು ಬುದ್ದಿ ಮಾತು ಹೇಳಿದ್ದಾರೆ.

ತಮ್ಮ ಮನೆಗೆ ರೇಣುಕಾಚಾರ್ಯ ಅವರನ್ನು ಕರೆಸಿಕೊಂಡ ಬಿಎಸ್ ಯಡಿಯೂರಪ್ಪ ಅವರು ಕಿವಿ ಮಾತು ಹೇಳಿದ್ದಾರೆ. ಚುನಾವಣೆಯಲ್ಲಿ ನಮಗೆ ಸೋಲಾಗಿರೋದು ನಿಜ. ಪಕ್ಷದಲ್ಲಿ ಸಣ್ಣಪುಟ್ಟ ಆಂತರಿಕ ಸಮಸ್ಯೆಗಳು ಇರೋದು ನಿಜ. ಆದರೆ ನಾವು ಅದನ್ನು ಪಕ್ಷದ ವೇದಿಕೆಯಲ್ಲಿ ಕೂತು ಸರಿಪಡಿಸಿಕೊಳ್ಳಬೇಕೇ ವಿನಃ ಬಹಿರಂಗವಾಗಿ ಹೇಳಿಕೆ ನೀಡಬಾರದು. ಇದರಿಂದ ಪಕ್ಷಕ್ಕೆ ಮುಜುಗರ ಆಗಲಿದೆ ಎಂದು ಯಡಿಯೂರಪ್ಪ ಕಿವಿ ಮಾತು ಹೇಳಿದ್ದಾರೆ ಎನ್ನಲಾಗಿದೆ.

ಇನ್ನು ಮಾಜಿ ಶಾಸಕ ರೇಣುಕಾಚಾರ್ಯ ಬಸವರಾಜ್ ಬೊಮ್ಮಾಯಿ, ಅಣ್ಣಾಮಲೈ ವಿರುದ್ಧ ವಾಗ್ದಾಳಿ ನಡೆಸಿದ್ದರು. ಹೀಗಾಗಿ ಪಕ್ಷದ ಶಿಸ್ತು ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ಶೋಕಾಸ್ ನೋಟೀಸ್ ಜಾರಿ‌ ಮಾಡಲಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *