ಬೆಕ್ಕು ದಾರಿ ದಾಟಿದರೆ ನಿಂತು ಹೋಗಬೇಕೆ? ಶಕುನ ಶಾಸ್ತ್ರ ಹೇಳುವುದೇನು

1 Min Read

ನಾವು ಯಾವುದೋ ಕೆಲಸಕ್ಕೆ ಹೊರಟಾಗ ಬೆಕ್ಕು ಅಡ್ಡ ಬಂದರೆ ಸಾಕು, ಅಲ್ಲಿಗೆ ಒಂದು ನಿಮಿಷ ನಿಂತು ಅಥವಾ ದಾರಿ ಬದಲಿಸಿ ಹೋಗುವವರೇ ಹೆಚ್ಚು.ಹಿಂದೂ ಸಂಪ್ರದಾಯದಲ್ಲಿ ‘ಶಕುನ ಶಾಸ್ತ್ರ’ಕ್ಕೆ ಬಹಳ ಮಹತ್ವದ ಸ್ಥಾನವಿದೆ. ಶಕುನಶಾಸ್ತ್ರದ ಬೆಕ್ಕಿನ ಬಗ್ಗೆ ಏನು ಹೇಳುತ್ತದೆ.

ಬೆಕ್ಕುಗಳು ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುತ್ತವೆ ಎಂದು ನಂಬಲಾಗಿದೆ. ಆದರೆ ಭಾರತೀಯ ಶಕುನ ಶಾಸ್ತ್ರದ ಪ್ರಕಾರ, ಪದೇ ಪದೇ ಬೆಕ್ಕುಗಳು ನಿಮ್ಮ ಹಾದಿಯಲ್ಲಿ ಸಿಗುತ್ತಿದ್ದರೆ ಅಥವಾ ನಿಮ್ಮ ಮನೆಯ ಸುತ್ತ ಕಪ್ಪು ಬೆಕ್ಕುಗಳು ಓಡಾಡುತ್ತಿದ್ದರೆ, ಅದು ಮನೆಯಲ್ಲಿ ನಕಾರಾತ್ಮಕ ಶಕ್ತಿ ಅಥವಾ ಕೆಟ್ಟ ದೃಷ್ಟಿಯ (Evil Eye) ಪ್ರಭಾವವಿದೆ ಎಂಬುದರ ಸಂಕೇತವಾಗಿದೆ. ಕೆಲವು ಸಂದರ್ಭಗಳಲ್ಲಿ ಇದು ಮಾಟ-ಮಂತ್ರದಂತಹ ನಕಾರಾತ್ಮಕ ಕ್ರಿಯೆಗಳ ಸೂಚಕವೂ ಇರಬಹುದು ಎಂದು ಹೇಳಲಾಗುತ್ತದೆ.

ವೈದಿಕ ಜ್ಯೋತಿಷ್ಯದ ಪ್ರಕಾರ, ಬೆಕ್ಕುಗಳನ್ನು ‘ರಾಹು’ ಮತ್ತು ‘ಕೇತು’ ಗ್ರಹಗಳ ವಾಹನ ಅಥವಾ ಪ್ರತಿನಿಧಿ ಎಂದು ಪರಿಗಣಿಸಲಾಗುತ್ತದೆ. ರಾಹು ಮತ್ತು ಕೇತುಗಳು ಜೀವನದಲ್ಲಿ ಅನಿರೀಕ್ಷಿತ ಬದಲಾವಣೆ, ಗೊಂದಲ ಮತ್ತು ಅಡೆತಡೆಗಳನ್ನು ತರುವ ಗ್ರಹಗಳು. ಕಪ್ಪು ಬೆಕ್ಕು ದಾರಿ ದಾಟಿದಾಗ, ಅದು ರಾಹುವಿನ ಪ್ರಭಾವವನ್ನು ಸೂಚಿಸುತ್ತದೆ ಎಂದು ನಂಬಲಾಗಿದೆ. ಇದು ನಿಮ್ಮ ನಿರ್ಧಾರಗಳಲ್ಲಿ ಗೊಂದಲ ಉಂಟಾಗಬಹುದು ಅಥವಾ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಬಹುದು ಎಂಬ ಎಚ್ಚರಿಕೆಯನ್ನು ನೀಡುತ್ತದೆ.

ಬೆಕ್ಕು ದಾರಿ ದಾಟಿದ ತಕ್ಷಣ ಒಂದು ಕ್ಷಣ ನಿಂತು, ದೇವರನ್ನು ಸ್ಮರಿಸಿ ಅಥವಾ ಇಷ್ಟ ದೇವತೆಯ ಮಂತ್ರ ಜಪಿಸಿ ಮುಂದುವರಿಯಿರಿ.ಮದುವೆಯಂತಹ ಕಾರ್ಯಕ್ಕೋ ಹೋಗುವಾಗ ಬೆಕ್ಕು ಅಡ್ಡ ಬಂದರೆ, ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು ಹೋಗುವುದು ಉತ್ತಮ.ಶಕುನ ಶಾಸ್ತ್ರವು ನಮಗೆ ಎಚ್ಚರಿಕೆಯಿಂದ ಇರಲು ಕಲಿಸುತ್ತದೆ. ಆದರೆ ಅತಿಯಾದ ಭಯ ಬೇಡ

Share This Article
Enable Notifications OK No thanks