in

ಕುಮಾರ್ ಬಂಗಾರಪ್ಪಗೆ ಟಿಕೆಟ್ ನೀಡಿದರೆ ನಮೋ ವೇದಿಕೆಯಿಂದ ಅಭ್ಯರ್ಥಿ ನಿಲ್ಲಿಸುವುದೇ : ಶಿವಮೊಗ್ಗ ರಾಜಕೀಯದಲ್ಲಿ ಕೋಲಾಹಲ..!

suddione whatsapp group join

 

ಶಿವಮೊಗ್ಗ: ಜಿಲ್ಲೆಯ ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಮೂಲ ಬಿಜೆಪಿಗೃರು ಮತ್ತು ವಲಸಿಗ ಬಿಜೆಪಿಗರ ನಡುವೆ ಇರುವ ಮುನಿಸು ಇದೀಗ ಮತ್ತಷ್ಟು ಹೆಚ್ಚಾಗಿದೆ. ಕುಮಾರ್ ಬಂಗಾರಪ್ಪ ವಿರುದ್ಧ ಮೂಲ ನಿವಾಸಿಗಳು ಕೆಂಡಕಾರುತ್ತಿದ್ದಾರೆ. ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದಿಂದ ಬಿಜೆಪಿಗೆ ಬಂದಿರುವ ಕುಮಾರ್ ಬಂಗಾರಪ್ಪ ಅವರಿಗೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡಬಾರದು ಎಂದು ಮೂಲ ವಲಸಿಗರು ಪಟ್ಟು ಹಿಡಿದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ನಮೋ ವೇದಿಕೆ ಹುಟ್ಟುಹಾಕಲಾಗಿದೆ. ಆ ವೇದಿಕೆಗೆ ಪಾಣಿ ರಾಜಪ್ಪ ಅಧ್ಯಕ್ಷರಾಗಿದ್ದಾರೆ. ಇದೀಗ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕುಮಾರ್ ಬಂಗಾರಪ್ಪ ಅವರಿಗೆ ಟಿಕೆಟ್ ನೀಡಿದರೆ ನಮೋ ವೇದಿಕೆಯಿಂದ ಅಭ್ಯರ್ಥಿಗಳನ್ನು ನಿಲ್ಲಿಸಬೇಕಾಗುತ್ತದೆ ಎಂದು ಪಾಣಿ ರಾಜಪ್ಪ ಸವಾಲು ಹಾಕಿದ್ದಾರೆ.

ನಮೋ ವೇದಿಕೆ ಹುಟ್ಟು ಹಾಕಿ, ಶಾಸಕರ ವಿರುದ್ಧವೇ ಬಹಿರಂಗ ಅಸಮಾಧಾನ ಹೊರ ಹಾಕಿದ್ದರು. ಈ ಹಿನ್ನೆಲೆ ಕುಮಾರ್ ಬಂಗಾರಪ್ಪ, ಮೂಲ ಬಿಜೆಪಿಗರ ಪೈಕಿ 8 ಜನರನ್ನು ಜಿಲ್ಲಾಮಟ್ಟದ ಹುದ್ದೆಯಿಂದ ತೆಗೆದು ಹಾಕಲಾಗಿತ್ತು. ಇದೀಗ ಕೋಪ ಮತ್ತಷ್ಟು ಹೆಚ್ಚಾಗಿದ್ದು, ನಮೋ ವೇದಿಕೆಯಿಂದ ಅಭ್ಯರ್ಥಿಯನ್ನು ಹಾಕುವುದಕ್ಕೆ ಪ್ಲ್ಯಾನ್ ನಡೆದಿದೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಕಾಂಗ್ರೆಸ್ ನಾಯಕರಿಂದ ಜೊತೆಯಾಗಿ ಪಯಣ : ಹೈಕಮಾಂಡ್ ಕೊಟ್ಟ ಸೂಚನೆ ಏನು..?

ಕೋಲಾರ ಕ್ಷೇತ್ರವನ್ನು ಘೋಷಿಸಿ ಬಿಡಿ ಎಂದವರಿಗೆ ರಿಸ್ಕ್ ಬೇಡ ಎಂದ ಸಿದ್ದರಾಮಯ್ಯ..!