ಸಚಿವರ ಕಟ್ಟಡದ ಕೆಲಸವನ್ನೇ ನಿಲ್ಲಿಸುವ ಹಂತಕ್ಕೆ ಬಂದುಬಿಟ್ಟರಾ ಶಿವಸೇನೆ ಪುಂಡರು..!

suddionenews
1 Min Read

 

ಬೆಳಗಾವಿ: ಶಿವಸೇನೆ ಪುಂಡರ ಕೆಟ್ಟ ನಡವಳಿಕೆ ತೀರಾ ಅತಿಯಾಗಿದೆ. ರಾಯಣ್ಣನ ಪ್ರತಿಮೆ ಧ್ವಂಸ ಮಾಡಿ ಕನ್ನಡಿಗರನ್ನ ಕೆಣಕಿದ್ರು, ಕನ್ನಡದ ಧ್ವಜ ಸುಟ್ಟು ಆಕ್ರೋಶ ಹುಟ್ಟುವಂತೆ ಮಾಡಿದ್ರು. ಇದೀಗ ಸಚಿವೆಯ ಕಟ್ಟಡ ಕೆಲಸವನ್ನೇ ತಡೆದಿದ್ದಾರೆ. ಪದೇ ಪದೇ ಎಂಇಎಸ್ ಪುಂಡರೇ ಕಾಲು ಕೆರೆದುಕೊಂಡು ಬರುತ್ತಿದ್ದಾರೆ.

ಕೊಲ್ಲಾಪುರ ನಗರದ ಶಾಹುನಾಕಾ ಬಳಿ ಸಚಿವೆ ಶಶಿಕಲಾ ಜೊಲ್ಲೆಗೆ ಸಂಬಂಧಿಸಿದಂತ ಕಟ್ಟಡ ಕಾಮಗಾರಿ ನಡೆಯುತ್ತಿದೆ. ಆ ಕಟ್ಟಡದ ಬಳಿ ಹೋದ ಎಂಇಎಸ್ ಪುಂಡರು ದಾಳಿ ಮಾಡಿ ಕಟ್ಟಡ ಕಾಮಗಾರಿಯನ್ನ ನಿಲ್ಲಿಸಿದ್ದಾರೆ.

ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಬೆದರಿಕೆ ಹಾಕಿದ್ದಾರೆ. ಕೆಲಸ ಮಾಡದಂತೆ ಹೆಸದರಿಸಿ ಕಳುಹಿಸಿದ್ದಾರೆ. ನಮ್ಮವರನ್ನ ಬಂಧಿಸಿದ್ದಾರೆ. ಅವರನ್ನ ಬಿಡುವವರೆಗೂ ಕಟ್ಟಡ ಕಾಮಗಾರಿ ನಡೆಯಲು ಬಿಡುವುದಿಲ್ಲ. ಎಂದು ಅವಾಜ್ ಹಾಕಿದ್ದಾರೆ ಎನ್ನಲಾಗಿದೆ. ಕಟ್ಟಡ ಕಾರ್ಮಿಕರಿಗೆ ಕೆಲಸ ಮಾಡದಂತೆ ಬೆದರಿಕೆ ಹಾಕಿದ್ದಾರೆ.

ಹೀಗೆ ಪದೇ ಪದೇ ಕಾಲು ಕೆರೆದುಕೊಂಡು ಬರುತ್ತಿರುವ ಎಂಇಎಸ್ ಪುಂಡರ ನಡವಳಿಕೆಗೆ ಆಕ್ರೋಶ ವ್ತಕ್ತವಾಗಿದ್ದು, ಎಂಇಎಸ್ ಬ್ಯಾನ್ ಮಾಡಬೇಕು, ಅವರಿಗೆ ತಕ್ಕ ಶಿಕ್ಷೆ ನೀಡಬೇಕೆಂದು ಕನ್ನಡಪರ ಸಂಘಟನೆಗಳು ಒತ್ತಾಯಿಸಿವೆ. ಇಂದು ಬೆಳಗಾವಿ ಚಲೋ ಹಮ್ಮಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *