ಸಿಡಿಲು ಬಡಿದು ಏಳು ಕುರಿಗಳು ಸಾವು: ಕುರಿ ಹಿಂಡು ಬಿಟ್ಟು ಒಡಿಹೋದ ಕುರಿಗಾಹಿಗಳು

suddionenews
1 Min Read

ಚಳ್ಳಕೆರೆ : ಕುರಿ ಹಿಂಡುಗೆ ಸಿಡಿಲು ಬಡಿದ ಪರಿಣಾಮ ಏಳು ಕುರಿಗಳು ಸಾವನ್ನಪ್ಪಿ, ನಾಲ್ಕು ಕುರಿಗಳು ಗಾಯವಾಗಿ ಅಸ್ವಸ್ಥವಾಗಿರುವ ಘಟನೆ ತಾಲ್ಲೂಕಿನ ಬೆಳಗೆರೆ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ.

ಬೆಳಗೆರೆ ಗ್ರಾಮದ ಪೂಜಾರ್ ರಾಘು ಹಾಗೂ ಪ್ರಸನ್ನಕುಮಾರ್ ಎನ್ನುವ ಕುರಿಗಾಹಿಗಳಿಗೆ ಸೇರಿದ ಕುರಿಗಳಾಗಿದ್ದು, ಎಂದಿನಂತೆಯೇ ಮಂಗಳವಾರ ಸಂಜೆ 6 ಗಂಟೆಯ ಸಮಯದಲ್ಲಿ ತಮ್ಮ ಕುರಿಗಳನ್ನು ಕುರಿಹಟ್ಟಿಗೆ ಹೊಡೆದುಕೊಂಡು ಬರುವಾಗ ಸಿಡಿಲು ಬಡಿದು ಏಳು ಕುರಿಗಳು ಸಾವನ್ನಪ್ಪಿದರೆ ಇನ್ನು ನಾಲ್ಕು ಕುರಿಗಳು ಗಾಯಗಳಾಗಿ ಅಸ್ವಸ್ಥವಾದರೆ, ಸಿಡಿಲಿಗೆ ಎದರಿದ ಕುರಿಗಾಹಿಗಳು ಕುರಿಹಿಂಡು ಬಿಟ್ಟು ಒಡಿಹೋಗಿದ್ದಾರೆ.

ಮಂಗಳವಾರ ಸಂಜೆ ಗುಡುಗು, ಸಿಡಿಲು ಸಹಿತ ಮಳೆ ಆರಂಭವಾದಗ ಮಳೆಗೆ ನೆನೆದ ಕುರಿಗಳು ಹುಣಸೆ ಮರದ ಕೆಳಗೆ ಆಶ್ರಯ ಪಡೆಯಲು ನಿಂತಾಗ ಸಿಡಿಲು ಬಡಿದ ಪರಿಣಾಮ ಏಳು ಕುರಿಗಳು ಸಾವನ್ನಪ್ಪಿದರೆ, ಇನ್ನು ನಾಲ್ಕು ಕುರಿಗಳು ಅಸ್ವಸ್ಥವಾಗಿದ್ದರೆ, ಇತ್ತಹ ಕುರಿಗಾಯಿಗಳು ಪ್ರಾಣಪಾಯದಿಂದ ಪಾರಾಗಿ, ನಿಟ್ಟುಸಿರು ಬಿಟ್ಟಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *