Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

‘ಪಠಾಣ್’ ಸಿನಿಮಾದ ಬೇಷರಂ ಹಾಡು ಸೇರಿದಂತೆ ಹಲವು ದೃಶ್ಯಗಳಿಗೆ ಕತ್ತರಿ ಹಾಕಲು ಸೂಚಿಸಿದ ಸೆನ್ಸಾರ್ ಮಂಡಳಿ..!

Facebook
Twitter
Telegram
WhatsApp

ಶಾರುಖ್ ಖಾನ್ ಒಂದು ಸಕ್ಸಸ್ ಗಾಗಿ ಕಾಯುತ್ತಾ ಇದ್ದರು. ಜೀರೋ ಸೋಲಿನ ಬಳಿಕ ಪಠಾಣ್ ಸಿನಿಮಾ ಒಂದೊಳ್ಳೆ ಗೆಲುವನ್ನು ನೀಡುತ್ತೆ ಎನ್ನಲಾಗಿತ್ತು. ಆದರೆ ಅದ್ಯಾಕೋ ಆರಂಭದಲ್ಲಿಯೇ ಅಡೆತಡೆಗಳು ಉಂಟಾಗಿದೆ. ಸಿನಿಮಾದಲ್ಲಿದ್ದ ಬೇಷರಂ ಹಾಡಿಗೆ ಹಿಂದೂಪರ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿತ್ತು. ಇದೀಗ ಸೆನ್ಸಾರ್ ಮಂಡಳಿ ಕೂಡ ಸಿನಿಮಾ ತಂಡಕ್ಕೆ ಶಾಕ್ ನೀಡಿದೆ.

ಪಠಾಣ್ ಸಿನಿಮಾ ವೀಕ್ಷಿಸಿದ ಸೆನ್ಸಾರ್ ಮಂಡಳಿ ತುಂಬಾ ಎಕ್ಸ್ ಪೋಸ್ ಇರುವಂತ ಬೇಷರಂಗ್ ಹಾಡಿನ ದೃಶ್ಯ ತೆಗೆಯುವಂತೆ ಸೂಚಿಸಿದೆ. ಅದರ ಜೊತೆಗೆ ಸಿನಿಮಾದಲ್ಲಿ ಇರುವ ಕೆಲವೊಂದು ದೃಶ್ಯಗಳನ್ನು ಡಿಲೀಟ್ ಮಾಡಿ ರಿಲೀಸ್ ಮಾಡಲು ಸೆನ್ಸಾರ್ ಮಂಡಳಿಯ ಅಧ್ಯಕ್ಷ ಪ್ರಸೂನ್ ಜೋಶಿ ತಿಳಿಸಿದ್ದಾರೆ.

ಪಠಾಣ್ ಸಿನಿಮಾ 2023ರ ಜನವರಿ 25ರಂದು ತೆರೆಗೆ ಬರಲು ಸಜ್ಜಾಗಿದೆ. ಸಿದ್ಧಾರ್ಥ್ ಆನಂದ್ ಪಠಾಣ್ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾದ ಬೇಷರಂಗದ ಹಾಡಿನಲ್ಲಿ ದೀಪಿಕಾ ಪಡುಕೋಣೆ ಸಿಕ್ಕಾಪಟ್ಟೆ ಹಾಟ್ ಆಗಿ‌ ಕಾಣಿಸಿಕೊಂಡಿದ್ದರು. ಕೇಸರಿ ಬಿಕಿನಿ ತೊಟ್ಟ ಕಾರಣ ಹಿಂದೂಪರ ಸಂಘಟನೆಯಿಂದ ವಿರೋಧ ಅನುಭವಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ ರೈತರಲ್ಲಿ ಸಂತಸ ತಂದ ಮಳೆ : ಉಳುಮೆಗೆ ಸಿದ್ಧತೆ

  ಚಿತ್ರದುರ್ಗ: ಕಳೆದ ಬಾರಿ ಮಳೆಯಿಲ್ಲದೆ, ಸರಿಯಾದ ಬಿತ್ತನೆ ಮಾಡಲಾಗದೆ ಹೈರಾಣಾಗಿದ್ದ ರೈತರ ಮೊಗದಲ್ಲಿ ಈಗ ಸಂತಸ ತುಂಬಿ ತುಳುಕುತ್ತಿದೆ. ಜಿಲ್ಲೆಯಲ್ಲೂ ಮಳೆಯ ದರ್ಶನ ಭಾಗ್ಯವಾಗಿದೆ. ಹೀಗಾಗಿ ರೈತರು ಉಳುಮೆ ಮಾಡಲು ಎಲ್ಲಾ ತಯಾರಿ

ಸನಾತನ ಧರ್ಮದ ತತ್ವಜ್ಞಾನವನ್ನು ಜಗತ್ತಿಗೆ ಸಾರಿದ ಜಗದ್ಗುರು ಶಂಕರಾಚಾರ್ಯರರು : ಉಪವಿಭಾಗಾಧಿಕಾರಿ ಎಂ.ಕಾರ್ತಿಕ್ ಹೇಳಿಕೆ

  ಚಿತ್ರದುರ್ಗ.12: ಬುದ್ದ ಹಾಗೂ ಜೈನ ಧರ್ಮಗಳ‌ ಪ್ರಭಾವದಿಂದ ಸನಾತನ ಧರ್ಮವನ್ನು ಮೇಲೆತ್ತಿ, ಸನಾತನ ಧರ್ಮದ ಉನ್ನತ‌ ತತ್ವಜ್ಞಾನವನ್ನು ಜಗತ್ತಿಗೆ ಸಾರುವ ಕೆಲಸವನ್ನು ಆದಿಗುರು ಶಂಕರಾಚಾರ್ಯರು ಮಾಡಿದರು ಎಂದು ಉಪವಿಭಾಗಾಧಿಕಾರಿ ಎಂ.ಕಾರ್ತಿಕ್ ಹೇಳಿದರು. ನಗರದ

ಹಣ್ಣುಗಳ ರಾಜ ಮಾವಿನಹಣ್ಣನ್ನು ಹೀಗೆ ತಿನ್ನಿ….!

ಸುದ್ದಿಒನ್ : ಬೇಸಿಗೆಯಲ್ಲಿ ದೊರೆಯುವ ಮಾವಿನ ಹಣ್ಣುಗಳನ್ನು ಹಣ್ಣುಗಳ ರಾಜ ಎಂದು ಕರೆಯುತ್ತಾರೆ. ಇವುಗಳ ರುಚಿ ಚೆನ್ನಾಗಿರುತ್ತದೆ. ಅಷ್ಟೇ ಅಲ್ಲದೇ ಅವು ನಮ್ಮ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಹೊಂದಿರುತ್ತವೆ. ಆಯುರ್ವೇದದ ಪ್ರಕಾರ ಮಾವಿನ ಹಣ್ಣಿನಲ್ಲಿ

error: Content is protected !!