ಸೆಲ್ಫಿ ವಿತ್ ಶೋಭಾ ಕರಂದ್ಲಾಜೆ : ಫೋಟೋ ತೆಗೆಸಿಕೊಂಡ ಯಾರಿಗೆಲ್ಲಾ ಕಾಂಗ್ರೆಸ್ ನಿಂದ ಬಹುಮಾನ ?

suddionenews
1 Min Read

ಉಡುಪಿ: ಇಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಉಡುಪಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಬನ್ನಿ ಎಲ್ಲಾ ನನ್ನ ಜೊತೆಗೆ ಸೆಲ್ಫಿ ತೆಗೆದುಕೊಳ್ಳಿ. ಎಲ್ಲಿ ಮಿಥುನ್ ರೈ. ಕರೆಯಿರಿ ನನ್ನ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲಿ ಎಂದು ಹೇಳಿದ್ದರು. ಇದೀಗ ಉಡುಪಿಯಲ್ಲಿ ಶೋಭಾ ಕರಂದ್ಲಾಜೆ ಜೊತೆಗೆ ಫೋಟೋ ತೆಗೆಸಿಕೊಳ್ಳುವುದಕ್ಕೆ ನಾ ಮುಂದು ತಾ ಮುಂದು ಅಂತ ಜನ ಮುಗಿಬಿದ್ದಿದ್ದಾರೆ.

ಇತ್ತಿಚೆಗೆ ಕಾಂಗ್ರೆಸ್ ಮುಖಂಡ ಮಿಥುನ್ ರೈ ಒಂದು ಸವಾಲು ಹಾಕಿದ್ದರು. ಜಿಲ್ಲೆಯಲ್ಲಿ ಹದಗೆಟ್ಟ ರಸ್ತೆಗಳ ವಿಚಾರಕ್ಕೆ ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಹರಿಹಾಯ್ದಿದ್ದರು. ಜೊತೆಗೆ ವಿಭಿನ್ನ ಸ್ಪರ್ಧೆಗೂ ಚಾಲ್ತಿ ನೀಡಿದ್ದರು. ಶೋಭಾ ಕರಂದ್ಲಾಜೆ ಜೊತೆಗೆ ಸೆಲ್ಫಿ ತೆಗೆದುಕಳುಹಿಸಿದ ಆಯ್ದ ಐದು ಜನರಿಗೆ ತಲಾ ಐದು ಸಾವಿರ ಬಹುಮಾನ ನೀಡುವುದಾಗಿ ಮಿಥುನ್ ರೈ ಸವಾಲು ಹಾಕಿದ್ದರು.

ಅಕ್ಟೋಬರ್ 6ರಿಂದ 14ರೊಳಗೆ ಉಡುಪಿ, ಕಾಪು, ಕುಂದಾಪುರದಲ್ಲಿ ಶೋಭಾ ಕರಂದ್ಲಾಜೆ ಜೊತೆ ಫೋಟೋ ತೆಗೆದು ಉಡುಪಿಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಫೋಟೋ ಕಳುಹಿಸಬೇಕು. ಇಷ್ಟೆಲ್ಲಾ ಆದರೂ ಸಂಸದರೂ ಕ್ಷೇತ್ರಕ್ಕೆ ಬಾರದೇ ಹೋದರೆ ಎಲ್ಲಾ ಠಾಣೆಯಲ್ಲೂ ದೂರು ದಾಖಲಿಸುತ್ತೇವೆ ಎಂದಿದ್ದರು. ಇದರ ಬೆನ್ನಲ್ಲೆ ಇಂದು ಶೋಭಾ ಕರಂದ್ಲಾಜೆ ಉಡುಪಿ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ.

ಕಾಂಗ್ರೆಸ್ ಮುಖಂಡನಿಗೆ ತಿರುಗೇಟು ನೀಡಲು ಬಿಜೆಪಿ ಕಾರ್ಯಕರ್ತರೆಲ್ಲಾ ಶೋಭಾ ಕರಂದ್ಲಾಜೆ ಜೊತೆಗೆ ಸೆಲ್ಫಿ ತೆಗೆದುಕೊಂಡು ಕಳುಹಿಸಿದ್ದಾರೆ. ಇದೀಗ ಆಯ್ದ ಐದು ಜನರಿಗೆ 5 ಸಾವಿರ ಬಹುಮಾನ ನೀಡುತ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ.

Share This Article
Leave a Comment

Leave a Reply

Your email address will not be published. Required fields are marked *