Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಈ ಬಾರಿಯ ಬಿಗ್ ಬಾಸ್ ಗೆ ಸ್ಪರ್ಧಿಗಳು ಇವರೇ ನೋಡಿ

Facebook
Twitter
Telegram
WhatsApp

ಬಿಗ್ ಬಾಸ್ ಎಲ್ಲರ ನೆಚ್ಚಿನ ಮನರಂಜನೆಯ ಶೋ ಅಂದ್ರೆ ತಪ್ಪಾಗುವುದಿಲ್ಲ. ಯಾಕಂದ್ರೆ ಪ್ರತಿ ಸೀಸನ್ ನಲ್ಲೂ ವಿಭಿನ್ನ ವ್ಯಕ್ತಿಗಳು ಬರುತ್ತಾರೆ. ನಗಿಸುತ್ತಾರೆ, ಅಳಿಸುತ್ತಾರೆ, ಜಗಳವಾಡುತ್ತಾರೆ, ಕೋಪ ಮಾಡಿಕೊಳ್ಳುತ್ತಾರೆ, ದ್ವೇಷಿಗಳಾಗುತ್ತಾರೆ, ಪ್ರೇಮಿಗಳಾಗುತ್ತಾರೆ, ಸ್ನೇಹಿತರಾಗುತ್ತಾರೆ.. ಅಬ್ಬಬ್ಬಾ‌ಬಿಗ್ ಬಾಸ್ ಎಂಬ ದೊಡ್ಮನೆಯಲ್ಲಿ ಒಂದಾ ಎರಡಾ.. ನಾನೇ ಗೆಲ್ಲಬೇಕು ಎಂಬ ಹುಮ್ಮಸ್ಸಿನಿಂದಾನೇ ಬರುತ್ತಾರೆ. ಜನರ ಪ್ರೀತಿ ಗೆಲ್ಲದೇ ಸೋಲುತ್ತಾರೆ. ಇದೀಗ ಮತ್ತೆ ಬಿಗ್ ಬಾಸ್ ಶೋಗೆ ದಿನಗಣನೆ ಶುರುವಾಗಿದೆ.

ಬಿಗ್ ಬಾಸ್ ಸೀಸನ್ 10ರಲ್ಲಿ ಕಾರ್ತಿಕ್ ಮಹೇಶ್ ವಿನ್ ಆಗಿದ್ರು. ಈಗ ಬಿಗ್ ಬಾಸ್ ಸೀಸನ್ 11 ಬರ್ತಾ ಇದೆ. ಮಾಹಿತಿಗಳ ಪ್ರಕಾರ ಈಗಾಗಲೇ ಶೋನ ಪ್ರೋಮೋ ಕೂಡ ಮುಗಿದಿದೆಯಂತೆ. ಇನ್ನು ಡೇಟ್ ಅನೌನ್ಸ್ ಮಾಡುವುದಷ್ಟೇ ಬಾಕಿ. ಶೋ ಶುರುವಾದ ದಿನವೇ ಅಧಿಕೃತವಾಗಿ ಯಾರೆಲ್ಲಾ ಭಾಗಿಯಾಗಿದ್ದಾರೆ ಎಂಬುದು ಗೊತ್ತಾಗುವುದು. ಅದಕ್ಕೂ ಮುನ್ನ ಸಂಭಾವ್ಯ ಪಟ್ಟಿಯನ್ನು ಸಿದ್ಧ ಮಾಡಿಕೊಳ್ಳುತ್ತಾರೆ. ಆ ಸಂಭಾವ್ಯ ಪಟ್ಟಿ ಈ ರೀತಿ ಇದೆ ನೋಡಿ.

 

ಜೀ ಕನ್ನಡದ ರಿಯಾಲಿಟಿ ಶೋ ಗೆ ಬಂದಿದ್ದ ಗಾಯಕಿ ಆಶಾ ಭಟ್, ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಪಾರು ಧಾರಾವಾಹಿಯ ನಟಿ ಮೋಕ್ಷಿತಾ ಪೈ, ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದ ಅಂಜಲಿ ಅಲಿಯಾಸ್ ಸುಕೃತ ನಾಗ್, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅಂತರಪಟ ಧಾರಾವಾಹಿಯ ನಾಯಕಿ ತನ್ವಿ ಬಾಲರಾಜ್, ಸೋಷಿಯಲ್‌ಮೀಡಿಯಾದಲ್ಲಿ ಫೇಮಸ್ ಆಗಿರುವ ವರ್ಷಾ ಆಂಡ್ ವರುಣ್ ಆರಾಧ್ಯ, ನಟನಾಗಿ ಗುರುತಿಸಿಕೊಂಡು, ತಂದೆಯಂತೆ ನಿರ್ದೇಶನ ಮಾಡುತ್ತಿರುವ ಪಂಕಜ್ ನಾರಾಯಣ್ ಅವರು ಕೂಡ ಈ ಬಾರಿಯ ಬಿಗ್ ಬಾಸ್ ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಜೀ ಕನ್ನಡದಲ್ಲಿ ಪ್ರಸಾರವಾಗಿದ್ದ ಸತ್ಯ ಸೀರಿಯಲ್ ಸಣ್ಣ ಮಕ್ಕಳಿಗೂ ಇಷ್ಟವಾಗುತ್ತಿತ್ತು. ಅದರಲ್ಲಿ ಸತ್ಯ ಪಾತ್ರ ಮಾಡಿದ್ದ ಗೌತಮಿ ಜಾದವ್ ಅವರಿಗೂ ಆಫರ್ ಹೋಗಿದೆ ಎನ್ನಲಾಗಿದೆ. ಗೀತಾ ಧಾರಾವಾಹಿಯಲ್ಲಿ ಖಳನಾಯಕಿಯಾಗಿ ಸೀರಿಯಲ್ ಪ್ರಿಯರ ನಿದ್ದೆ ಕೆಡಿಸಿದ್ದ ಭಾನುಮತಿ ಅಲಿಯಾಸ್ ಶರ್ಮಿತಾ ಗೌಡ ಕೂಡ ಈ ಬಾರಿಯ ಬಿಗ್ ಬಾಸ್ ಗೆ ಬರಲಿದ್ದಾರಂತೆ. ಗಿಚ್ಚಿಗಿಲಿಗಿಲಿ ಖ್ಯಾತಿಯ ರಾಘವೇಂದ್ರ, ಚಂದ್ರಪ್ರಭಾ, ಪದ್ಮಾವತಿ ಸೀರಿಯಲ್ ನ ತ್ರಿವಿಕ್ರಮ್, ನಟಿ ಅಮಿತಾ ಸದಾಶಿವ ಅವರಿಗೂ ಬಿಗ್ ಬಾಸ್ ನಿಂದ ಆಫರ್ ಹೋಗಿದೆಯಂತೆ. ಇದರಲ್ಲಿ ಯಾರೆಲ್ಲಾ ಬರಬಹುದು ಎಂಬುದು ಲಾಂಚ್ ದಿನ ಗೊತ್ತಾಗಲಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಕಾಂಗ್ರೆಸ್‍ನವರು ದಲಿತ ಪರ, ಅಹಿಂದ ಪರ ಎಂದು ತೋರ್ಪಡಿಕೆಗೆ ಹೇಳುವುದನ್ನು ನಿಲ್ಲಿಸಲಿ : ಬಾಳೆಕಾಯಿ ಶ್ರೀನಿವಾಸ್

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ ಸೆ. 17 : ಹಿಂದು ಧರ್ಮದಲ್ಲಿ ದಲಿತರನ್ನು ಸರಿಯಾದ ರೀತಿಯಲ್ಲಿ ನಡೆಸುತ್ತಿಲ್ಲ, ಅವರನ್ನು ಎಲ್ಲೂ ಸಹಾ

ರಸ್ತೆಯ ಬದಿಯ ಗುಂಡಿಗೆ ಬಿದ್ದ KSRTC ಬಸ್: ಮೂವರಿಗೆ ಗಂಭೀರ ಗಾಯ..!

ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಚಳ್ಳಕೆರೆ : ಚಾಲಕನ ನಿಯಂತ್ರಣ ತಪ್ಪಿ ಕೆಎಸ್ಆರ್ಟಿಸಿ ಬಸ್ ಗುಂಡಿಗೆ ಬಿದ್ದಿದ್ದು, ಮೂವರು ಗಂಭೀರ ಗಾಯಗೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ

ಸೆಪ್ಟೆಂಬರ್ 28 ರಂದು ಹಿಂದೂ ಮಹಾಗಣಪತಿ ವಿಸರ್ಜನೆ : ಸಾರ್ವಜನಿಕರಿಗೆ ಮಹತ್ವದ ಸೂಚನೆ ನೀಡಿದ ಬೆಸ್ಕಾಂ

ಚಿತ್ರದುರ್ಗ. ಸೆ.17: ಸೆ.28 ರಂದು ಹಿಂದೂ ಮಹಾಗಣಪತಿ ವಿಸರ್ಜನೆ ಪ್ರಯುಕ್ತ ಚಿತ್ರದುರ್ಗ ನಗರದಲ್ಲಿ ಬೃಹತ್ ಶೋಭಾ ಯಾತ್ರೆ ಜರುಗಲಿದೆ. ಶೋಭಾ ಯಾತ್ರೆ ಮೆರವಣಿಗೆಯು ಚಳ್ಳಕೆರೆ ಗೇಟ್‌ನಿಂದ ಬಿ.ಡಿ.ರಸ್ತೆ ಮುಖಾಂತರ, ಗಾಂಧಿ ವೃತ್ತ, ಹೊಳಲ್ಕೆರೆ ರಸ್ತೆಯ

error: Content is protected !!