ಈಶ್ವರಪ್ಪರನ್ನ ಮಂಪರು ಪರೀಕ್ಷೆಗೆ ಒಳಪಡಿಸಿದ್ರೆ ಸತ್ಯ ತಿಳಿಯುತ್ತೆ : SDPI ರಾಜ್ಯಾಧ್ಯಕ್ಷ

suddionenews
1 Min Read

 

ಬೆಂಗಳೂರು: ಶಿವಮೊಗ್ಗದಲ್ಲಿ ನಿನ್ನೆ ಭಜರಂಗದಳದ ಕಾರ್ಯಕರ್ತ ಹರ್ಷ ಕೊಲೆಯಾಗಿದೆ. ಈ ಘಟನೆ ಸಂಬಂಧ ಸಾಕಷ್ಟು ನಾಯಕರು ಎಸ್ಡಿಪಿಐ ಮೇಲೂ ಆರೋಪ ಮಾಡುತ್ತಿದ್ದಾರೆ. ಈ ಬೆನ್ನಲ್ಲೇ ಸುದ್ದಿಗೋಷ್ಟಿ ನಡೆಸಿರುವ SDPI ಸಂಘಟನೆ ರಾಜ್ಯಧ್ಯಕ್ಷ ಪೊಲೀಸರಿಗೂ ಸವಾಲು ಹಾಕಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಸುಪಾರಿ ಕೊಟ್ಟವರಿಗೂ ಸಚಿವ ಈಶ್ವರಪ್ಪ ಅವರಿಗೂ ಏನೋ ಸಂಬಂಧವಿದೆ. ಈಶ್ವರಪ್ಪ ಅವರನ್ನ ಮಂಪರು ಪರೀಕ್ಷೆಗೆ ಒಳಪಡಿಸಿ, ಎಲ್ಲಾ ಸತ್ಯ ಹೊರ ಬರಲಿದೆ ಎಂದು ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಒತ್ತಾಯಿಸಿದ್ದಾರೆ.

ಸಂಘ ಪರಿವಾರದವರು ಇಲ್ಲಿವರೆಗೂ 36 ಕೊಲೆ ಮಾಡಿದ್ದಾರೆ. 13 ಜನ ಹಿಂದೂ ಯುವಕರ ಕೊಲೆಯಲ್ಲಿ ಸಂಘ ಪರಿವಾರದವರ ಪಾತ್ರವಿದೆ. ಶಿವಮೊಗ್ಗ ಯುವಕನ ಕೊಲೆ ನಿಜಕ್ಕೂ ಖಂಡನೀಯ. ಕೊಲೆ ನಡೆದ ಕೂಡಲೇ ಪೊಲೀಸರ ತನಿಖೆಗೆ ಒಪ್ಪಿಸಬೇಕು. ತನಿಖೆ ಆರಂಭವಾಗುವ ಮುನ್ನ ಈಶ್ವರಪ್ಪ, ರಾಘವೆಂದ್ರ, ಪ್ರತಾಪ್ ಸಿಂಹ ಸೇರಿ ಕೊಲೆಯನ್ನ ಮುಸ್ಲಿಂರ ತಲೆಗೆ ಕಟ್ಟುತ್ತಿದ್ದಾರೆ. ಇವರ ಪ್ರಚೋದನಕಾರಿ ಹೇಳಿಕೆಯಿಂದಾಗಿ ಮುಸ್ಲಿಂರ ಮನೆ, ಅಂಗಡಿ, ವಾಹನಗಳಿಗೆ ಬೆಂಕಿ ಹಚ್ಚಲಾಗುತ್ತಿದೆ. ಶಿವಮೊಗ್ಗದಲ್ಲಿ ಎರಡು ದಿನದ ಹಿಂದೆ ಮುಸ್ಲಿಂ ಹುಡುಗರ ಹತ್ಯೆಯಾಗಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *