Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ವಿಜ್ಞಾನ ವಸ್ತುಪ್ರದರ್ಶನ : ರೇಖಲಗೆರೆ ಲಂಬಾಣಿ ಹಟ್ಟಿ ಸರ್ಕಾರಿ ಪ್ರೌಢಶಾಲೆ ಜಿಲ್ಲಾ ಮಟ್ಟಕ್ಕೆ ಆಯ್ಕೆ

Facebook
Twitter
Telegram
WhatsApp

 

ಚಳ್ಳಕೆರೆ,(ಅ.30) : ತಾಲ್ಲೂಕಿನ ರೇಖಲಗೆರೆ ಲಂಬಾಣಿ ಹಟ್ಟಿ ಸರ್ಕಾರಿ ಪ್ರೌಢಶಾಲೆಯು ವಿಜ್ಞಾನ ವಸ್ತುಪ್ರದರ್ಶದ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ.

ಚಳ್ಳಕೆರೆಯ ಚಿನ್ಮಯಿ ಪ್ರೌಢಶಾಲೆಯ ಆವರಣದಲ್ಲಿ  ದಿನಾಂಕ : 29-10-2022 ರಂದು ತಾಲ್ಲೂಕು ಮಟ್ಟದ ವಿಜ್ಞಾನ ವಸ್ತುಪ್ರದರ್ಶನವನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯೋಜಿಸಿತ್ತು.

ಗಣಿತ,ಭೌತವಿಜ್ಞಾನ, ರಸಾಯನವಿಜ್ಞಾನ, ಭೂಮಿ ಮತ್ತು ಬಾಹ್ಯಾಕಾಶ, ಬಯೋಸೈನ್ಸ್ , ಬಯೋ ಕೆಮಿಸ್ಟ್ರಿ, ಪರಿಸರ ವಿಜ್ಞಾನ , ಎಂಜಿನಿಯರಿಂಗ್ ಕಂಪ್ಯೂಟರ್ ಸೈನ್ಸ್ ವಿಷಯಕ್ಕೆ ಸಂಬಂಧಿಸಿದಂತೆ ಒಟ್ಟು 95 ವಿವಿಧ ಮಾದರಿಗಳು ಪ್ರದರ್ಶನಗೊಂಡವು.

ಸರ್ಕಾರಿ ಪ್ರೌಢಶಾಲೆ ರೇಖಲಗೆರೆ ಲಂಬಾಣಿ ಹಟ್ಟಿ ಶಾಲೆಯ ವಿದ್ಯಾರ್ಥಿನಿಯರುಗಳಾದ ಭಾರತಿ ಮತ್ತು ಅನುರಾಧ ಇವರು ತಯಾರಿಸಿದ ತೇಲುವ ಮನೆ ಮತ್ತು ತೇಲುವ ಕೊಟ್ಟಿಗೆ ವೈಜ್ಞಾನಿಕ ಮಾದರಿಯು ವಿನೂತನ ಮಾದರಿಯಾಗಿತ್ತು. ಕಡಲ ತೀರ ಪ್ರದೇಶದಲ್ಲಿ, ನದಿ ತೀರ ಪ್ರದೇಶದಲ್ಲಿ ವಾಸಿಸುವ ಜನರು ಈ ರೀತಿಯ ತೇಲುವ ಮನೆ ಮತ್ತು ತೇಲುವ ಕೊಟ್ಟಿಗೆಗಳನ್ನು ನಿರ್ಮಿಸಿಕೊಂಡರೆ ಎಷ್ಟೇ ಪ್ರವಾಹ  ಬಂದರು ಈ ಮನೆಗಳು ನೀರಿನಲ್ಲಿ ಮುಳುಗಿ ಅಲ್ಲಿನ ಜನರ ಪ್ರಾಣ – ಹಾನಿ, ಜಾನುವಾರುಗಳ ಹಾನಿಯನ್ನು ಉಂಟಾಗದಂತೆ ತಡೆಯುತ್ತದೆ.ಅತ್ಯಂತ ವಿನೂತನವಾದ  ತಂತ್ರವನ್ನು ಈ ಮಾದರಿಯಲ್ಲಿ ಅಳವಡಿಸಲಾಗಿದೆ.

ನೀರಿನಲ್ಲಿ ಕಟ್ಟುವ ಸೇತುವೆಗಳ ತಂತ್ರವನ್ನು ಹಾಗೂ ನೀರಿನಲ್ಲಿ ತೇಲುವ ಹಡಗಿನ ಮಾದರಿಯಲ್ಲಿ ಮನೆಯ ಬುನಾದಿಯನ್ನು ತೇಲುವ ವಸ್ತುಗಳನ್ನು ಬಳಸಿ ನಿರ್ಮಿಸಿ, ಮನೆಯ ನಾಲ್ಕು ಮೂಲೆಯಲ್ಲಿ ಆಟೋಮ್ಯಾಟಿಕ್ ಜಾಕಿಂಗ್ ವ್ಯವಸ್ತೆಯನ್ನು ಅಳವಡಿಸಲಾಗಿದ್ದು, ನೀರಿನ ಪ್ರವಾಹದಿಂದಾಗಿ ಮನೆಯ ಸುತ್ತ ನೀರು ಅವರಿಸಿಕೊಂಡಾಗ ಮನೆ ನೀರಿನಲ್ಲಿ ಕೆಳಗಿಂದ ಮೇಲೆ ಚಲಿಸುವಂತೆ, ಹಾಗೂ ನೀರು ಖಾಲಿಯಾದಾಗ  ಮೇಲಿನಿಂದ ಕೆಳಗೆ   ಚಲಿಸುವಂತ ತಂತ್ರವನ್ನು ಉಪಯೋಗಿಸಲಾಗಿದೆ, ಆಗ ಮನೆಯಲ್ಲಿರುವ ಅಥವಾ ಕಾಂಪ್ಲೆಕ್ಸ್ ನಲ್ಲಿರುವ  ಜನರು ನೀರು ಪಾಲಗದೆ ಮನೆಯಲ್ಲಿ ಜೀವಂತವಾಗಿರುತ್ತಾರೆ ತುರ್ತು ಸಂಧರ್ಭದಲ್ಲಿ ರಕ್ಷಣಾ ಪಡೆಯವರು ಸುಲಭವಾಗಿ  ಇವರನ್ನು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ವರ್ಗಾವಣೆ ಮಾಡಬಹುದು, ಮನೆಯ ಸುತ್ತ ನಾಲ್ಕು ಮೂಲೆಗಳಲ್ಲಿ ನಾಲ್ಕು ಪಿಲ್ಲರ್ ಗಳನ್ನ ನೀರಿನ ಆಳದಲ್ಲಿ ಬೆಡ್ ನಿಂದ ನಿರ್ಮಿಸಿ ಮನೆ ನೀರಿನಲ್ಲಿ ತೇಲುವ ಸಮಯದಲ್ಲಿ ಹೆಚ್ಚಿನ ಪ್ರವಾಹದಿಂದ ಪಲ್ಟಿ ಹೊಡೆದು ನೀರಿನಲ್ಲಿ ಮುಳಗದಂತೆ ಮನೆಯ ಸುತ್ತಲೂ ತಡೆಗಳನ್ನು ಸಹ ಈ ಮಾದರಿಯಲ್ಲಿ ನಿರ್ಮಿಸಲಾಗಿದೆ. ಇದೆ ರೀತಿಯಲ್ಲಿ ತೇಲುವ ಕೊಟ್ಟಿಗೆಯ ಮಾದರಿಯನ್ನು ತಯಾರಿಸಲಾಗಿದ್ದು ಅದರಲ್ಲಿರುವ ಜಾನುವಾರುಗಳು ನೀರು ಪಾಲಾಗಿ ಅಸು ನೀಗುವುದನ್ನು  ತಪ್ಪಿಸಿ ಅವುಗಳನ್ನು ಸಹ ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಕೊಂಡೊಯ್ಯಬಹುದು.

ಈ ಮಾದರಿಯನ್ನು ಪ್ರವಾಹದ ಸಂಧರ್ಭದಲ್ಲಿ ಉಂಟಾಗುವ ನಷ್ಟವನ್ನು ಹಾಗೂ ಭಾರಿ ಪ್ರವಾಹದಂತಹ ವಿಪತ್ತುಗಳನ್ನು ನಿರ್ವಹಣೆ ಮಾಡಿ ಆರ್ಥಿಕವಾಗಿ ಉಂಟಾಗುವ ನಷ್ಟವನ್ನು, ಮಾನವ ಸಂಪನ್ಮೂಲ ನಷ್ಟವನ್ನು, ಹಾಗೂ ಜಾನುವಾರುಗಳ ಸಂತತಿಯ ಸಂಖ್ಯೆ ಕಡಿಮೆಯಾಗದಂತೆ ತಡೆಗಟ್ಟುವ ಮುಖ್ಯವಾದ ಉದ್ದೇಶಗಳನ್ನು ಈ ಮಾದರಿಯು ಹೊಂದಿದೆ. ಶಾಲೆಯ ವಿಜ್ಞಾನ ಶಿಕ್ಷಕರಾದ ನಾಗಭೂಷಣ್ ಕೆ.ಟಿ.ಇವರು  ವಿದ್ಯಾರ್ಥಿಗಳಿಗೆ ಮಾರ್ಗದರ್ಶನವನ್ನು  ನೀಡಿದ್ದಾರೆ.

ಶಾಲೆಯ ಮುಖ್ಯ ಶಿಕ್ಷಕ ವೆಂಕಟೇಶ್, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ತಿಪ್ಪೇಸ್ವಾಮಿ, ಶಾಲೆಯ ಸಿಬ್ಬಂದಿ ವರ್ಗದವರು, ಗ್ರಾಮ ಪಂಚಾಯಿತಿಯ ಸದಸ್ಯರುಗಳು, ಊರಿನ ಗ್ರಾಮಸ್ಥರು ಹಾಗೂ ಪೋಷಕರು ಮಕ್ಕಳಿಗೆ ಅಭಿನಂದಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಮತದಾನಕ್ಕೂ ಮುನ್ನ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,   ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 26 : ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳರವರು ಮತದಾನಕ್ಕೂ ಮುನ್ನ

ನೇಹಾ ಕೊಲೆ ಪ್ರಕರಣ : ಯಾರನ್ನೂ ರಕ್ಷಿಸುವ ಉದ್ದೇಶವಿಲ್ಲದೆ ಇದ್ದರೆ ಸಿಬಿಐಗೆ ವಹಿಸಲಿ ಎಂದ ಬಸವರಾಜ್ ಬೊಮ್ಮಾಯಿ

ಹುಬ್ಬಳ್ಳಿ: ನೇಹಾ ಹಿರೇಮಠ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಾಕಷಗಟು ಹೋರಾಟಗಳು ನಡೆದಿವೆ. ನೇಹಾ ಕೊಲೆ ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು, ನೇಹಾ ಸಾವಿಗೆ ನ್ಯಾಯ ಸಿಗಬೇಕು ಎಂಬ ಒತ್ತಾಯಗಳು ಕೇಳಿವೆ. ಇದೀಗ ಮಾಜಿ ಸಿಎಂ

ಚಿತ್ರದುರ್ಗ ಸೇರಿದಂತೆ 11 ಜಿಲ್ಲೆಗಳಲ್ಲಿ 3 ದಿನಗಳ ಕಾಲ ಮಳೆ

ಬೆಂಗಳೂರು: ಬಿರು ಬೇಸಿಗೆಯಿಂದ ಬೇಯುತ್ತಿದ್ದ ಜನರಿಗೆ ವರುಣರಾಯ ಹಂಗ್ ಬಂದು ಹಿಂಗ್ ತಂಪೆರೆದು ಹೋಗಿದ್ದ. ಇನ್ನು ಮಳೆಯಾಗಲಿದೆ ಎಂದುಕೊಳ್ಳುವಾಗಲೇ ಒಣ ಹವೆ ಜಾಸ್ತಿಯಾಗಿತ್ತು. ಉಷ್ಣಾಂಶ ದಿನೇ ದಿನೇ ಏರಿಕೆಯಾಗುತ್ತಲೆ ಇತ್ತು. ಇದೀಗ ಮತ್ತೆ ಮಳೆಯಾಗುವ

error: Content is protected !!