ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜೂನ್. 26 : ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಗುರುವಾರ ಶಾಲಾ ಸಂಸತ್ ಚುನಾವಣೆ ನಡೆಸಲಾಯಿತು.
ಎಂಟನೆ ತರಗತಿಯಿಂದ ಏಳು ವಿದ್ಯಾರ್ಥಿನಿಯರು, ಒಂಬತ್ತನೆ ತರಗತಿಯಿಂದ ಐದು ವಿದ್ಯಾರ್ಥಿನಿಯರು ಹಾಗೂ ಹತ್ತನೆ ತರಗತಿಯಿಂದ ಆರು ವಿದ್ಯಾರ್ಥಿನಿಯರು ಚುನಾವಣೆಗೆ ಸ್ಪರ್ಧಿಸಿದ್ದರು.
ಬೆಳಿಗ್ಗೆ ಹನ್ನೊಂದರಿಂದ ಮಧ್ಯಾಹ್ನ 1-30 ರವರೆಗೆ ನಡೆದ ಚುನಾವಣೆಯಲ್ಲಿ 425 ವಿದ್ಯಾರ್ಥಿನಿಯರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಪ್ರಭು ಪ್ರಸಾದ್ ಚುನಾವಣಾಧಿಕಾರಿಯಾಗಿದ್ದರು. ಉಪ ಪ್ರಾಚಾರ್ಯರಾದ ಕರಿಯಪ್ಪ ಚುನಾವಣಾ ಆಯುಕ್ತರಾಗಿ ಕರ್ತವ್ಯ ನಿರ್ವಹಿಸಿದರು. ನೋಡಲ್ ಅಧಿಕಾರಿಯಾಗಿ
ಎನ್.ಕೃಷ್ಣಮೂರ್ತಿ ಚುನಾವಣೆಯನ್ನು ನಡೆಸಿಕೊಟ್ಟರು.
ಆರ್.ಎಂ.ಮಹಮದ್ಖಾನ್, ವಿಜಯಕುಮಾರ್, ಫಹಿಮುನ್ನಿಸಾ ಇವರುಗಳು ವೀಕ್ಷಕರಾಗಿ ಚುನಾವಣೆಯನ್ನು ಸುಸೂತ್ರವಾಗಿ ನಡೆಸಿದರು.
ಕೀರ್ತನ ಎಸ್. ಹರ್ಷಿಯಾಭಾನು, ಅಮೂಲ್ಯ ಎಂ, ಮದಿಹಾಭಾನು, ಉಷಾ ಜಿ, ಸಂಧ್ಯಾ ಟಿ, ಇಂಚರ ಸಿ, ಕಾವ್ಯ ಆರ್, ಹರ್ಷಿತ ಎಂ, ಸಿಂಚನ ಎ, ಹೀನಾ ಕೌಸರ್
ಸೈಯದಾ ಅಫ್ರ್ರತಾಜ್, ಅಂಕಿತ ಎನ್, ಜೇಷ್ಠ ಕೆ.ಎಸ್, ಸಮಂತಾ ಆರ್ ಇವರುಗಳು ಸಂಸತ್ ಚುನಾವಣೆಯಲ್ಲಿ ಆಯ್ಕೆಯಾದರು. ವಿರೋಧ ಪಕ್ಷದ ನಾಯಕರಾಗಿ ಅಪೂರ್ವ ಎಂ. ನೇಮಕಗೊಂಡರು. ನೋಟಾ ಬಗ್ಗೆ ವಿದ್ಯಾರ್ಥಿನಿಯರಿಗೆ ಪರಿಚಯಿಸಲಾಯಿತು.



