ವರ್ಷದ ಹಿಂದೆ ನಾನಾ-ನೀನಾ ಎನ್ನುತ್ತಿದ್ದ ವಿಶ್ವನಾಥ್-ಸಾರಾ ಮಹೇಶ್ ದೋಸ್ತಿಗಳಾಗಿದ್ದೇಕೆ..?

suddionenews
1 Min Read

ಮೈಸೂರು: ಹೆಚ್ ವಿಶ್ವನಾಥ್ ಮತ್ತು ಸಾರಾ ಮಹೇಶ್ ಒಬ್ಬರಿಗೊಬ್ಬರನ್ನು ಕಂಡರೆ ಆಗುತ್ತಿರಲಿಲ್ಲ. ಇದು ವರ್ಷದ ಹಿಂದೆ ಇದ್ದಂತಹ ಚಿತ್ರಣ. ಎದುರು ಬಂದರೆ ಸಾಕು, ಒಬ್ಬರು ಪ್ರೆಸ್ ಮೀಟ್ ಮಾಡಿದರೆ ಇನ್ನೊಬ್ಬರು ಹರಿಹಾಯುತ್ತಿದ್ದರು. ಆದರೆ ಇದೀಗ ಎಲ್ಲವೂ ಬದಲಾವಣೆಯಾಗಿದೆ. ಕಚ್ಚಾಡುತ್ತಿದ್ದವರೆ ದೋಸ್ತಿಗಳಾಗಿದ್ದಾರೆ.

ಇದೀಗ ಹೆಚ್ ವಿಶ್ವನಾಥ್ ಅವರ ಹುಟ್ಟುಹಬ್ಬ ಆಚರಣೆ ಮಾಡಲು ಎಲ್ಲಾ ತಯಾರಿ ನಡೆದಿದೆ. ಎರಡು ದಿನಗಳ ಕಾಲ ಕೆ ಆರ್ ನಗರದಲ್ಲಿ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಣೆ ಮಾಡಲಾಗುತ್ತಿದೆ. ಇದರ ಅಧ್ಯಕ್ಷತೆಯನ್ನು ಸಾರಾ ಮಹೇಶ್ ಒಪ್ಪಿಕೊಂಡಿದ್ದಾರೆ. ಇದು ಕೆಲವರಿಗೆ ಆಶ್ಚರ್ಯ ಕೂಡ ಆಗಿದೆ.

ಇದೇ ವಿಚಾರವಾಗಿ ಮಾತನಾಡಿರುವ ಸಾರಾ ಮಹೇಶ್, ಇದೊಂದು ಮಾನವೀಯತಾ ಸ್ನೇಹಾ. ರಾಜಕಾರಣದ ದೋಸ್ತಿಯಲ್ಲ ಎಂದಿದ್ದಾರೆ. ಎಚ್ ವಿಶ್ವನಾಥ್ ಕೆ ಆರ್ ನಗರದ ಹಿರಿಯ ರಾಜಕಾರಣಿ‌ ಅವರ ಹುಟ್ಟುಹಬ್ಬ ಆಚರಿಸುವುದು ನಮ್ಮ ಕರ್ತವ್ಯ. ಇದರಲ್ಲಿ ಯಾವುದೇ ರಾಜಕಾರಣವಿಲ್ಲ. ರಾಜಕಾರಣ ಎಂದು ಬಂದರೆ ಮತ್ತೆ ಹೇಳಿಕೆ ಪ್ರತಿ ಹೇಳಿಕೆಗಳು ಇರುತ್ತವೆ. ಆದರೆ ಈ ಅವರ ಹುಟ್ಟುಹಬ್ಬ ಆಚರಣೆ ಮಾಡುವುದು ನಮ್ಮ ಕರ್ತವ್ಯವಾಗಿದೆ. ಹೀಗಾಗಿ ಸ್ನೇಹಪೂರ್ವಕವಾಗಿ ಮಾಡುತ್ತಿದ್ದೇವೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *