ರಾಜಣ್ಣನ ಜೊತೆ ಸಂಬರ್ಗಿ ಜಗಳ : ಮನೆಯಿಂದ ಹೊರ ಹಾಕುವಂತೆ ಕನ್ನಡ ಪರ ಹೋರಾಗಾರರ ಒತ್ತಾಯ..!

suddionenews
1 Min Read

ಬಿಡದಿ: ಬಿಗ್ ಬಾಸ್ ಮನೆಯಲ್ಲಿ ಮನರಂಜನೆಗಿಂತ ಜಗಳಗಳೇ ಹೆಚ್ಚಾಗಿವೆ. ಅದರಲ್ಲೂ ಪ್ರಶಾಂತ್ ಸಂಬರ್ಗಿ ಹಾಗೂ ರೂಪೇಶ್ ರಾಜಣ್ಣ ಸೇರಿದಂರಂತು ಮುಗುದೇ ಹೋಯಿತು. ಜಗಳ ಆಡುತ್ತಲೇ ಇರುತ್ತಾರೆ. ಆದ್ರೆ ಇದೀಗ ಪ್ರಶಾಂತ್ ಸಂಬರ್ಗಿಯನ್ನು ಬಿಗ್ ಬಾಸ್ ನಿಂದ ಹೊರ ಹಾಕಿ, ರಾಜ್ಯದಿಂದ ಗಡಿಪಾರು ಮಾಡಿ ಎಂದು ಕನ್ನಡಪರ ಸಂಘಟನೆಯವರು ಆಕ್ರೋಶ ಹೊರ ಹಾಕಿದ್ದಾರೆ.

ಬಿಡದಿಯ ಬಿಗ್ ಬಾಸ್ ಮನೆ ಮುಂದೆ ಕನ್ನಡಪರ ಸಂಘಟನೆಯವರು ಪ್ರತಿಭಟನೆ ನಡೆಸಿದ್ದಾರೆ. ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಅವರನ್ನು ಸಂಬರ್ಗಿ ಅವಹೇಳನ ಮಾಡಿದ್ದಾರೆ. ಕೂಡಲೇ ಅವರನ್ನು ಬಿಗ್ ಬಾಸ್ ಮನೆಯಿಂದ ಹೊರ ಹಾಕಬೇಕು. ರಾಜ್ಯದಿಂದಾನೇ ಗಡಿಪಾರು ಮಾಡಬೇಕು. ಇಲ್ಲವಾದಲ್ಲಿ ಸರ್ಕಾರವೇ ಬಿಗ್ ಬಾಸ್ ಚಿತ್ರೀಕರಣಕ್ಕೆ ನಿಷೇಧ ಹೇರಬೇಕು ಎಂದು ಆಗ್ರಹಿಸಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಪ್ರಶಾಂತ್ ಸಂಬರ್ಗಿ ಹಾಗೂ ರೂಪೇಶ್ ರಾಜಣ್ಣ ನಡುವೆ ಜಗಳಗಳು ಸಾಮಾನ್ಯವಾಗಿ ನಡೆಯುತ್ತಲೇ ಇರುತ್ತವೆ. ಆದ್ರೆ ಸಂಬರ್ಗಿ, ನಾನು ಬಹಳ ಕನ್ನಡ ಪರ ಹೋರಾಟ ಮಾಡಿದ್ದೇನೆ. ನನ್ನ ಬಳಿ ಸಾಕಷ್ಟು ದಾಖಲೆಗಳಿವೆ, ಇಮೇಲ್ ಗಳಿವೆ ಎಂದಿದ್ದಾರೆ. ಹೀಗೆ ಕನ್ನಡಪರ ಹೋರಾಟ ಮಾಡುವ ಬಗ್ಗೆ ಮಾತನಾಡಿದ್ದಕ್ಕೆ ಹೋರಾಟಗಾರರು ರೊಚ್ಚಿಗೆದ್ದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *