ಆರ್ ಎಸ್ ಎಸ್ ಚಡ್ಡಿ ಸುಡಬಹುದು.. ಆದರೆ : ಸಿಟಿ ರವಿ ಕಾಂಗ್ರೆಸ್ ಗೆ ಹಾಕಿದ ಬಾಂಬ್ ಯಾವುದು..?

1 Min Read

 

ಬೆಂಗಳೂರು: ಆರ್ಎಸ್ಎಸ್ ಚಡ್ಡಿ ವಿಚಾರಕ್ಕೆ ಸಿಟಿ ರವಿ ಇದೀಗ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ಭಾರತ್ ಜೋಡೊ ಹೆಸರಲ್ಲಿ ಭಾರತೀಯತೆಯನ್ನು ಸುಡುವ ಕೆಲಸ ಮಾಡುತ್ತಿದ್ದಾರೆ. ಆರ್ಎಸ್ಎಸ್ ಭಾರತೀಯತೆ ಇರುವ ಸಂಘಟನೆ ಎಂದು ಚಡ್ಡಿ ಸುಡುವ ಫೋಟೋ ಹಾಕಿದ್ದ ಕಾಂಗ್ರೆಸ್ ಗೆ ತಿರುಗೇಟು ನೀಡಿದ್ದಾರೆ.

ಅವರು ಆರ್ಎಸ್ಎಸ್ ಚಡ್ಡಿಯನ್ನು ಸುಡಬಹುದು. ಆದರೆ ಆರ್ಎಸ್ಎಸ್ ವಿಚಾರವನ್ನಲ್ಲ. ಮುಂದೊಂದು ದಿನ ಚಡ್ಡಿಯನ್ನು ಹಾಕಿಯೇ ಕಾಂಗ್ರೆಸ್ ನವರು ಆರ್ಎಸ್ಎಸ್ ಕಚೇರಿಗೆ ಬರಲಿದ್ದಾರೆ. ಆರ್ಎಸ್ಎಸ್ ಕ್ರಶ್ ಮಾಡುತ್ತೇವೆ ಎಂದಿದ್ದ ನೆಹರೂ ಅವರೇ ಗಣರಾಜ್ಯೋತ್ಸವ ಪಥಸಂಚಲನಕ್ಕೆ ಆರ್ಎಸ್ಎಸ್ ಅನ್ನು ಆಹ್ವಾನಿಸಿತ್ತು.

ಕಾಂಗ್ರೆಸ್ ಮನೋಭಾವ ಎಲ್ಲರಿಗೂ ಗೊತ್ತಿರುವಂತದ್ದೇ. ಉಗ್ರ ಒಸಾಮಾ ಬಿನ್ ಲಾಡೆನ್ ಗೆ ಇದೇ ಕಾಂಗ್ರೆಸ್ ಜೀ ಎಂದು ಉಲಲೇಖಿಸಿತ್ತು. ಅಫ್ಜಲ್ ಗುರುವನ್ನು ಗಲ್ಲಿಗೇರಿಸಿದ್ದರೆ ಮುರುಕ ವ್ಯಕ್ತಪಡಿಸಿದ್ದರು. ತುಕಡೇ ತುಕಡೇ ಗ್ಯಾಂಗ್ ಅನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *