ಸುದ್ದಿಒನ್, ಹಿರಿಯೂರು, ಜುಲೈ. 02 : ಕೇಂದ್ರದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಆರ್ಎಸ್ಎಸ್ ಸಂಘಟನೆಯನ್ನು ಬ್ಯಾನ್ ಮಾಡುವ ಬಗ್ಗೆ ತಿರ್ಮಾನ ಮಾಡುತ್ತೇವೆ ಎಂಬ ಸಚಿವ ಪ್ರಿಯಾಂಕಾ ಖರ್ಗೆ ಹೇಳಿಕೆಯನ್ನು ಬಿಜೆಪಿ ತಾಲ್ಲೂಕು ಅಧ್ಯಕ್ಷ ಕೆ ಅಭಿನಂದನ್ ಖಂಡಿಸಿದ್ದಾರೆ.
ಪತ್ರಿಕಾ ಪ್ರಕಟಣೆ ಹೇಳಿಕೆ ನೀಡಿರುವ ಅವರು ಕೋಟ್ಯಂತರ ಸ್ವಯಂ ಸೇವಕರನ್ನು ಹೊಂದಿರುವ ಈ ಸಂಘಟನೆ ವಿಶ್ವದ ಮಹಾನ್ ದೇಶಭಕ್ತರ ಸಂಘಟನೆಯಾಗಿದೆ. ಇದನ್ನು ನಿಷೇಧಿಸಲು ಯಾರಿಂದಲೂ ಸಾಧ್ಯವಿಲ್ಲ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಗ್ಗೆ ಜನರಿಗೆ ಏನೆಂಬುದು ಎಲ್ಲರಿಗೂ ಗೊತ್ತಿದೆ. ಸದಾ ದೇಶ ಸೇವೆಗೆ ಶ್ರಮಿಸುತ್ತಿರುವ ಸಂಘದ ಏಳಿಗೆಯನ್ನು ಸಹಿಸಿಕೊಳ್ಳಲಾರದೆ ಇರುವುದಕ್ಕೆ ಇಂತಹ ಅಸಂಬದ್ಧ ಹೇಳಿಕೆ ನೀಡುವುದು ಸರಿಯಲ್ಲ. ಅಭಿವೃದ್ಧಿ ಮಾಡುತ್ತಾರೆಂದು ಜನರು ಅಧಿಕಾರ ಕೊಟ್ಟರೆ ಇವರು ಗ್ಯಾರಂಟಿ ಯೋಜನೆಗಳನ್ನು ಕೊಟ್ಟು ಹೊಸತನ ಹುಡುಕಿ, ಪಕ್ಷವನ್ನು ರೊಚ್ಚಿಗೆಬ್ಬಿಸಿ, ಪ್ರಚಾರ ಪಡೆಯಲು ಇಂತಹ ಸಣ್ಣತನದ ಹೇಳಿಕೆ ನೀಡುತ್ತಿರುವುದು ದುರಂತ ಎಂದರು.
ಸಂಘಟನೆ ಎಂಬುದು ಒಂದು ಮಾಹನ್ ವೃಕ್ಷವಿದ್ದಂತೆ. ಇದನ್ನು ಬೇರು ಸಮೇತ ಕಿತ್ತು ಹಾಕುತ್ತೇವೆ ಎಂದು ಶತಮಾನಗಳಿಂದಲೂ ವಿಕೃತ ಮನಸ್ಸಿನ ಕಾಂಗ್ರೆಸ್ ನಾಯಕರು ಹೇಳಿಕೊಂಡು ಸಮಯವನ್ನು ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಆರ್. ಎಸ್ ಎಸ್ ಸಂಘಟನೆಯ ರೆಂಬೆ ಕೊಂಬೆಗಳನ್ನು ಅಲುಗಾಡಿಸಲು ಯಾವ ಕಾಂಗ್ರೆಸ್ ನಾಯಕರಿಂದಲೂ ಸಾಧ್ಯವಿಲ್ಲ. ದೇಶಾದ್ಯಂತ ಇದ್ದ ಕಾಂಗ್ರೆಸ್ ಪಕ್ಷವನ್ನೇ ಸುಮಾರು 90% ಭಾಗ ನಿಮ್ಮ ಪಕ್ಷವನ್ನು ಜನರು ನಿಷೇಧ ಮಾಡಿದ್ದಾರೆ. ಉಳಿದ ಭಾಗದಲ್ಲಿ ನೀವು ಹೇಗೆ ಆರ್. ಎಸ್.ಎಸ್ ಬ್ಯಾನ್ ನಿಷೇಧ ಮಾಡಲು ಸಾಧ್ಯವಾಗುತ್ತದೆ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜನತೆ ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣವಾಗಿ ನಿಷೇಧಿಸುತ್ತಾರೆಂದು ಅವರು ಎಚ್ಚರಿಕೆ ನೀಡಿದ್ದಾರೆ.


