ಕನ್ನಡ ಸಾಹಿತ್ಯ ಪರಿಷತ್ ಚುನಾವಣಾ ಕಣದಿಂದ ಹಿಂದೆ ಸರಿದ ಆರ್.ಶೇಷಣ್ಣಕುಮಾರ್

suddionenews
1 Min Read

ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್

ಚಿತ್ರದುರ್ಗ, (ನ.13): ಇದೇ ತಿಂಗಳ 21 ರಂದು ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸಿದ್ದ ಆರ್.ಶೇಷಣ್ಣಕುಮಾರ್ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ.

ಕೊರೋನಾ ಮಹಾಮಾರಿಯ ಕದಂಬ ಬಾಹುಗಳಿಂದ ಬದುಕುಳಿದು ಅತ್ಯಂತ ಸಂಕಷ್ಟದ ದಿನಗಳನ್ನು ಎದುರಿಸಿ ಹಲವಾರು ಆತ್ಮೀಯರನ್ನು ಕಳೆದುಕೊಂಡ ನೋವಿನಲ್ಲಿಯೇ ಕಸಾಪ. ಜಿಲ್ಲಾಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸಿದ್ದ ಆರ್.ಶೇಷಣ್ಣಕುಮಾರ್ ಅಕ್ಷರಶಃ ಬೇಸತ್ತಿದ್ದು, ಹೈರಾಣಾದ ಕುಟುಂಬದ ಸದಸ್ಯರ ಸಲಹೆಯಂತೆ ಹಾಗೂ ಜೊತೆಗಿರುವ ಅತ್ಯಾಪ್ತ ಹಿತೈಷಿಗಳ ಆಶಯವನ್ನು ಗೌರವಿಸಿ ಚುನಾವಣಾ ಕಣದಿಂದ ಹಿಂದಕ್ಕೆ ಸರಿದಿರುವುದಾಗಿ ಶುಕ್ರವಾರ ತಹಶೀಲ್ದಾರ್‍ಗೆ ಪತ್ರ ನೀಡಿ
ಇದುವರೆವಿಗೂ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳನ್ನು ಸಮರ್ಪಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *