Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ರೋಹಿಣಿ ಸಿಂಧೂರಿ ಹಾಗೂ ರೂಪಾ ಮಾತನಾಡದಂತೆ ಕೋರ್ಟ್ ನಿಂದ ಆದೇಶ..!

---Advertisement---

ಕಳೆದ ಕೆಲ ದಿನಗಳಿಂದ ಐಎಎಸ್ ಆಫೀಸರ್ ಹಾಗೂ ಐಪಿಎಸ್ ಆಫೀಸರ್ ನಡುವಿನ ಯುದ್ಧ ತಾರಕಕ್ಕೇರಿತ್ತು. ಅದರಲ್ಲೂ ಐಪಿಎಸ್ ಆಫೀಸರ್ ಡಿ ರೂಪಾ ಅವರು ತಮ್ಮೆಲ್ಲಾ ಸಿಟ್ಟು, ಆಕ್ರೋಶವನ್ನು ಸೋಷಿಯಲ್ ಮೀಡಿಯಾದಲ್ಲಿಯೇ ಹಾಕುತ್ತಿದ್ದರು. ಅವರ ಗಂಡ ಮೌನೀಶ್ ಮೌದ್ಗಿಲ್ ಜೊತೆಗೆ ರೋಹಿಣಿ ಮೆಸೇಜ್ ಮಾಡಿದ್ದ ವಿಚಾರವೂ ಆಡಿಯೋ ಮೂಲಕ ವೈರಲ್ ಆಗಿತ್ತು.

ಇದಕ್ಕೆ ಪ್ರತ್ಯುತ್ತರವೆಂಬಂತೆ ರೋಹಿಣಿ ಸಿಂಧೂರಿ ಕೂಡ ಕೋರ್ಟ್ ಮೊರೆ ಹೋಗಿದ್ದರು. ಮಾನನಷ್ಟ ಮೊಕದ್ದಮೆ ಹಾಕಿದ್ದರು. ಅವರ ವಿಚಾರಣೆಯನ್ಮು ಕೋರ್ಟ್ ಮಾರ್ಚ್ 7ಕ್ಕೆ ಮುಂದೂಡಿಕೆ ಮಾಡಿದೆ. ಇದಕ್ಕೂ ಡಿ ರೂಪಾ ಅವರು ಹಿತೈಶಿಗಳಿಗೆ ಧನ್ಯವಾದ ಅಂತ ತಿಳಿಸಿದ್ದಾರೆ.

ಇನ್ನು ಈ ಇಬ್ಬರು ಅಧಿಕಾರಿಗಳ ಜಗಳದಿಂದ ಸರ್ಕಾರಕ್ಕೂ ಮುಜುಗರವಾಗಿತ್ತು. ಅದಕ್ಕೆ ರೂಪಾ, ಮೌನೀಶ್, ರೋಹಿಣಿ ಮೂವರನ್ನು ವರ್ಗಾವಣೆ ಕೂಡ ಮಾಡಿತ್ತು. ರೋಹಿಣಿ ಮತ್ತು ರೂಪಾ ಅವರಿಗೆ ಹುದ್ದಯನ್ನು ನಿಗದಿ ಮಾಡದೆ ವರ್ಗಾವಣೆ ಮಾಡಿತ್ತು. ಇದೀಗ ಕೋರ್ಟ್ ಈ ಇಬ್ಬರ ನಡುವೆ ಬಂದಿದೆ.

ಸೋಷಿಯಲ್ ಮೀಡಿಯಾದಲ್ಲಿಯೇ ಕಿತ್ತಾಡಿಕೊಳ್ಳುತ್ತಿದ್ದ ರೂಪಾ ಮತ್ತು ರೋಹಿಣಿಗೆ ಕೋರ್ಟ್ ಖಡಕ್ ಎಚ್ಚರಿಕೆಯನ್ನು ನೀಡಿದೆ. ಇಬ್ಬರು ಪರಸ್ಪರ ಮಾತನಾಡಿಕೊಳ್ಳದಂತೆ ಎಚ್ಚರಿಕೆ ನೀಡಿದೆ. ಇಬ್ಬರ ಕಾದಾಟಕ್ಕೆ ಮಾತನಾಡಬಾರದು ಎಂದು ಆದೇಶ ಹೊರಡಿಸಿರೋ ಕೋರ್ಟ್ ಜಗಳಕ್ಕೆ ಬ್ರೇಕ್ ಹಾಕಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...