ಚಿತ್ರದುರ್ಗ | ಮಲ್ಲಾಪುರ ಬಳಿ ಭೀಕರ ಅಪಘಾತ ; ಇಬ್ಬರು ಸಾವು

0 Min Read

 

ಚಿತ್ರದುರ್ಗ, (ಏ.08) : ರಾಷ್ಟ್ರೀಯ ಹೆದ್ದಾರಿ 17 ರಲ್ಲಿನ ಮಲ್ಲಾಪುರ ಬಳಿ ಇಂದು ಮುಂಜಾನೆ ಬೈಕಿಗೆ ಬುಲೆರೋ ವಾಹನ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ಮೃತರನ್ನು ಚಿತ್ರದುರ್ಗದ ನಾಗರಾಜ್(40) ಹಾಗೂ ಮುಮ್ತಾಜ್(35) ಎಂದು ಗುರುತಿಸಲಾಗಿದೆ. ಅವರು ಕಳೆದ ರಾತ್ರಿ ಜಿ.ಆರ್.ಹಳ್ಳಿ ಬಳಿಯ ದರ್ಗಾಕ್ಕೆ ಬೈಕಿನಲ್ಲಿ ತೆರಳಿದ್ದು, ದೇವರ ದರ್ಶನದ ನಂತರ ಇಂದು ಬೆಳಗಿನ ಜಾವ ಬೈಕಿನಲ್ಲಿ ಚಿತ್ರದುರ್ಗಕ್ಕೆ ಹಿಂದಿರುಗುವಾಗ ಈ ದುರ್ಘಟನೆ ಸಂಭವಿಸಿದೆ.

ಅಪಘಾತ ಬಳಿಕ ಬುಲೆರೊ ವಾಹನ ಸಮೇತ ಚಾಲಕ ಪರಾರಿಯಾಗಿದ್ದಾನೆ. ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *