ಹುಟ್ಟುಹಬ್ಬದ ದಿನ ಮನಬಿಚ್ಚಿ ಮಾತನಾಡಿದ ರಿಷಬ್ ಶೆಟ್ಟಿ : ಮಳೆಯಲ್ಲಿ ನೆನೆದ ಅಭಿಮಾನಿಗಳಿಗೆ ಹೇಳಿದ್ದೇನು..?

1 Min Read

ಬೆಂಗಳೂರು: ಇಂದು ರಿಷಬ್ ಶೆಟ್ಟಿಗೆ ಹುಟ್ಟುಹಬ್ಬದ ಸಂಭ್ರಮ. 40ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಸುಸಂದರ್ಭವನ್ನು ದೊಡ್ಡ ಮಟ್ಟದಲ್ಲಿ ಸೆಲೆಬ್ರೇಷನ್ ಮಾಡಿದ್ದಾರೆ. ಅವರ ಆಪ್ತರೆಲ್ಲ ಸೇರಿ ಇಂದು ದೊಡ್ಡಮಟ್ಟದ ವೇದಿಕೆಯಲ್ಲಿಯೇ ಅದ್ದೂರಿ ಹುಟ್ಟುಹಬ್ಬ ಆಚರಣೆ ಮಾಡಿದ್ದಾರೆ. ನಂದಿ ಲಿಂಕ್ಸ್ ನಲ್ಲಿ ಬರ್ತ್ ಡೇ ಸೆಲೆಬ್ರೇಷನ್ ನಡೆದಿದ್ದು, ನೆರೆದಿದ್ದ ಅಭಿಮಾನಿಗಳ ಬಗ್ಗೆ ಮಾತನಾಡಿದ್ದಾರೆ.

ಮಳೆಗಾಲವಾದ್ದರಿಂದ ಇಂದು ಸಂಜೆ ಎರಡ್ಮೂರು ಸಲ ಜೋರು ಮಳೆ ಬಂದಿದೆ. ಆದರೂ ದೂರದೂರಿನಿಂದ ಬಂದಿದ್ದ ಅಭಿಮಾನಿಗಳು ಆ ಮಳೆಯಲ್ಲಿಯೇ ಕಾದು ನಿಂತಿದ್ದರು. ಬಳಿಕ ರಿಷಬ್ ಶೆಟ್ಟಿ ನೋಡಿ ಜೋರು ಕಿರುಚಿದ್ದಾರೆ. ಎಲ್ಲಾ ಅಭಿಮಾನಿಗಳು ರಿಷಬ್ ಶೆಟ್ಟಿ ಕೂಡ ಧನ್ಯವಾದ ತಿಳಿಸಿದ್ದಾರೆ. ಜೊತೆಗೆ ಕಾಂತಾರ ಸಿನಿಮಾದ ಎರಡು ಡೈಲಾಗ್ ಹೊಡೆದು ರಂಜಿಸಿದ್ದಾರೆ.

 

ಸಂಪಾದನೆ ಹೆಂಗಿರಬೇಕು ಅಂದ್ರೆ, ಎಷ್ಟೆ ಮಳೆ ಬಂದರೂ ನನಗಾಗಿ ಕಾದರಲ್ಲಾ ಅದೇ ನನ್ನ ಜೀವಮಾನದ ಸಂಪಾದನೆ. ಇದು ಖರ್ಚು ಮಾಡೋಕೆ ಸಂಪಾದಿಸಿರೋದು ಅಲ್ಲ. ನನಗೆ ಗಾಂಧಿನಗರದಲ್ಲಿ ಥಿಯೇಟರ್ ಎಲ್ಲಿದೆ ಅಂತ ಗೊತ್ತಿರಲಿಲ್ಲ. ಮಳೆಯಲ್ಲಿ ಇದು ಸಕ್ಸಸ್ ಆಗಲ್ಲ ಅಂದುಕೊ‌‌ಂಡಿದ್ದೆ. ನಿಮ್ಮ ಕಾಯುವಿಕೆ ನನಗೆ ದೊಡ್ಡ ಗಿಫ್ಟ್. ಮಳೆ ಬಂದು ಭೂಮಿ ತಂಪೆರೆದಿದೆ. ಇಡೀ ಭಾರತೀಯ ಪ್ರೇಕ್ಷಕರಿಗೆ ತಲೆ ಬಾಗುತ್ತೇನೆ. ಕನ್ನಡಿಗರಿಗೆ ಮೊದಲ ತಲೆ ಬಾಗಲೇಬೇಕು. ನಿಮ್ಮನ್ನ ರಂಜಿಸೋ ಮೂಲಕ ನಿಮ್ಮೆಲ್ಲರ ಋಣ ತೀರಿಸುತ್ತೇನೆ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *