ದೇವೇಗೌಡರ ಸೋಲಿಗೆ ಕಾಂಗ್ರೆಸ್ ಬಳಿ‌ ಕಾರಣ ಕೇಳಿದ ರೇವಣ್ಣ..!

suddionenews
1 Min Read

ಹಾಸನ: ಕುಟುಂಬ ರಾಜಕಾರಣ ಅಂತ್ಯವಾಗಲಿ ಎಂದಿದ್ದ ಕಾಂಗ್ರೆಸ್ ಹೇಳಿಕೆಗೆ ಮಾಜಿ ಸಚಿವ ಎಚ್ ಡಿ ರೇವಣ್ಣ ಕಿಡಿಕಾರಿದ್ದಾರೆ. ಎರಡು ರಾಷ್ಟ್ರೀಯ ಪಕ್ಷಗಳಿಗೆ ರೇವಣ್ಣ ಪ್ರಶ್ನಿಸಿದ್ದಾರೆ. ನಿಮ್ಮ ಪಕ್ಷಗಳು ಅದ್ಯಾವಾಗ ಕುಟುಂಬ ರಾಜಕಾರಣಕ್ಕೆ ಅಂತ್ಯವಾಡ್ತೀರಿ ಎಂದು ಪ್ರಶ್ನಿಸಿದ್ದಾರೆ.

ಇದೇ ವೇಳೆ ದೇವೇಗೌಡರ ಸೋಲಿನ ಬಗ್ಗೆ ಮಾತನಾಡಿದ ರೇವಣ್ಣ ಅವರು, ಕಾಂಗ್ರೆಸ್ ಗೆ ನೈತಿಕತೆ ಅನ್ನೋದೆ ಇದ್ರೆ ಮೊದಲು ದೇವೇಗೌಡ ಅವರನ್ನ ಸೋಲಿಸಿದ್ದು ಯಾರು ಎಂದು ಹೇಳಲಿ ಎಂದು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಪಕ್ಷ ಅಂತ್ಯವಾಗುವ ಕಾಲ ಹತ್ತಿರ ಬರುತ್ತಿದೆ. ಅವರ ಪಕ್ಷದವರೇ ಪಕ್ಷವನ್ನ ಅಂತ್ಯ ಮಾಡುತ್ತಾರೆ. ಇಂದಿರಾ ಗಾಂಧಿ ಮತ್ತು ರಾಹೀವ್ ಗಾಂಧಿ ಬಗ್ಗೆ ನಾವೂ ಮಾತಾಡೋದಿಲ್ಲ. ಆದ್ರೆ ಕಾಂಗ್ರೆಸ್ ಪಕ್ಷ ರಾಜ್ಯಕ್ಕೆ ಕೊಡುಗೆ ಏನು ಎಂದಿದ್ದಾರೆ.

ಇನ್ನು ಹಾಸನದ ವಿಚಾರ ಮಾತನಾಡಿದ್ದು, ಈ ಎರಡು ರಾಷ್ಟ್ರೀಯ ಪಕ್ಷಗಳು ಹಾಸನ ಜಿಲ್ಲೆಗೆ ಅದೇನು ಕೊಡುಗೆ ಕೊಟ್ಟಿದ್ದಾರೆ..? ನಮ್ಮ ಜಿಲ್ಲೆಯಲ್ಲಿ ಆಗಬೇಕಿದ್ದ ಐಐಟಿ ತಪ್ಪಿಸಿದ್ದೆ ಕಾಂಗ್ರೆಸ್. ಮೇಕೆದಾಟು ಯೋಜನೆ ಬಗ್ಗೆ ಈಗ ಮಾತನಾಡುತ್ತಿದ್ದಾರೆ. ಆದ್ರೆ ಅಧಿಕಾರದಲ್ಲಿದ್ದಾಗ ಏನು ಮಾಡಿದ್ರು ಎಂದು ಸರಣಿ ಪ್ರಶ್ನೆಗಳನ್ನ ಕೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *