ತಾಕತ್ತಿದ್ರೆ ನಾವೂ ಹಿಂದೂ ಅಂತ ಹೇಳಲಿ : ಕಾಂಗ್ರೆಸ್ಸಿಗರಿಗೆ ರೇಣುಕಾಚಾರ್ಯ ಚಾಲೆಂಜ್..!

suddionenews
1 Min Read

 

 

ಹುಬ್ಬಳ್ಳಿ: ಈ ಬಾರಿಯ ಚಳಿಗಾಲದ ಅಧಿವೇಶನ ಸುವರ್ಣಸೌಧದಲ್ಲಿ ನಡೆದಿದೆ. ಈ ಅಧಿವೇಶನದಲ್ಲಿ ಈ ಬಾರಿ ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ಚರ್ಚೆ ನಡೆಯುತ್ತೆ ಅನ್ನೋ ನಿರೀಕ್ಷೆ ಇತ್ತು. ಆದ್ರೆ ಆ ನಿರೀಕ್ಷೆಯೂ ಹುಸಿಯಾಗಿದೆ. ಈ ಸಂಬಂಧ ಉತ್ತರ ಕರ್ನಾಟಕ ಭಾಗದ ಶಾಸಕರು, ಸಚಿವರಿಗೂ ಬೇಸರವಾಗಿದೆ.

ಇದೀಗ ಈ ಬಗ್ಗೆ ಮಾತನಾಡಿರುವ ಶಾಸಕ ರೇಣುಕಾಚಾರ್ಯ ಕಾಂಗ್ರೆಸ್ ವಿರುದ್ಧ ಗುಡುಗಿದ್ದಾರೆ. ಉತ್ತರ ಕರ್ನಾಟಕದ ಬಗ್ಗೆ ಚರ್ಚಿಸಲು ಕಾಂಗ್ರೆಸ್ ಬಿಟ್ಟಿಲ್ಲ. ಸದನದ ಬಾವಿಗಿಳಿದು ಅನಾವಶ್ಯಕವಾಗಿ ಸಮಯ ವ್ಯರ್ಥ ಮಾಡಿದ್ರು ಎಂದಿದ್ದಾರೆ. ಇದು ಕಾಂಗ್ರೆಸ್ ನ ಹುನ್ನಾರ. ಉತ್ತರ ಕರ್ನಾಟಕದ ಬಗ್ಗೆ ಚರ್ಚೆಯಾಗೋದಕ್ಕೆ ಅವರು ಬಿಟ್ಟಿಲ್ಲ.

ಕಾಂಗ್ರೆಸ್ ನವರು ಇಟಲಿಯ ಸೋನಿಯಾಗಾಂಧಿ ಮಾತು ಕೇಳೋರು. ತಾಕತ್ತಿದ್ರೆ ಒಂದೇ ಒಂದು ಸಾರಿ ನಾವು ಹಿಂದೂಗಳು ಅಂತ ಹೇಳಲಿ. ಈಗಾಗಲೇ ಕಾಂಗ್ರೆಸ್ ಪಕ್ಷಕ್ಕೆ ಗರ್ಭಪಾತವಾಗಿದೆ. ಹೆಣ್ಣೋ ಗಂಡೋ ಗೊತ್ತಿಲ್ಲ. ಮತಾಂತರ ನಿಷೇಧ ಕಾಯ್ದೆಯನ್ನ ರದ್ದುಗೊಳಿಸ್ತೀವಿ ಅಂದಿದ್ದಾರೆ. 2016ರಲ್ಲಿ ಸಿದ್ದರಾಮಯ್ಯ, ಟಿ ಬಿ ಜಯಚಂದ್ರ ಸಹಿ ಹಾಕಿರುವ ದಾಖಲೆ ಇದೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *