Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕಾಂಗ್ರೆಸ್ ಟ್ವೀಟ್ ಗೆ ಶಾಸಕ ರೇಣುಕಾಚಾರ್ಯ ಹೇಳಿದ್ದು ಹೀಗೆ..!

Facebook
Twitter
Telegram
WhatsApp

ದಾವಣಗೆರೆ: RSS ಬಗ್ಗೆ ಇಂದು ಕಾಂಗ್ರೆಸ್ ಸರಣಿ ಟ್ವೀಟ್ ಮಾಡಿ ತನ್ನ ಆಕ್ರೋಶ ಹೊರ ಹಾಕಿದೆ. ಸಿದ್ದರಾಮಯ್ಯ ಅವರು ಕೂಡ ಆರ್ ಎಸ್ ಎಸ್ ಆಯ ಕಟ್ಟಿನ ಜಾತಿಯವರಿಗೆ ಮಾತ್ರ ನೀಡಿದೆ. ಬೇರೆ ಜಾತಿಯವರಿಗೆ ಯಾಕೆ ಕೊಟ್ಟಿಲ್ಲ ಎಂದಿದ್ದರು. ಈ ಸಂಬಂಧ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್ ನವರು ವಿಕೃತ ಮನಸ್ಥಿತಿಯವರು ಎಂದಿದ್ದಾರೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘ ದೇಶಪ್ರೇಮಿ ಸಂಘಟನೆ. ಇಲ್ಲಿ ಇರುವವರೆಲ್ಲ ದೇಶಪ್ರೇಮಿಗಳು. ದೇಶಪ್ರೇಮಿಗಳನ್ನು ವಿರೋಧ ಮಾಡುವಂತ ಮನಸ್ಥಿತಿ ಇರುವವರು ಯಾವತ್ತಿಗೂ ಭಯೋತ್ಪಾದಕರನ್ನು ಸಪೋರ್ಟ್ ಮಾಡುತ್ತಾರೆ. ಕಾಂಗ್ರೆಸ್ ನವರು ವಿಕೃತ ಮನಸ್ಸಿನವರು.

ನಮ್ಮ ಸಂಘ ಯಾವುದೇ ಬರ, ಅತಿವೃಷ್ಟಿ ಇದ್ದಾಗ ಅಲ್ಲಿ ನಮ್ಮ ಸಂಘಟನೆ ನಿಲ್ಲುತ್ತದೆ. ದೇಶಭಕ್ತರು ನಮ್ಮ ಸಂಘಟನೆಯವರು. ಈ ರೀತಿ ಮಾತನಾಡುವವರು ದೇಶದ್ರೋಹಿಗಳು. ಬಿಜೆಪಿ, ಆರ್ ಎಸ್ ಎಸ್ ಬೈಯದೆ ಇದ್ದರೆ ಕಾಂಗ್ರೆಸ್ ಅವರಿಗೆ ಸಮಾಧಾನವಾಗಲ್ಲ. ರಾಹುಲ್ ಗಾಂಧಿಯನ್ನು ಮೆಚ್ಚಿಸಲು ಹೀಗೆ ಮಾತನಾಡುತ್ತಾರೆ.

ಭ್ರಷ್ಟಾಚಾರ ಕ್ಕೆ ಮತ್ತೊಂದು ಹೆಸರೇ ಕಾಂಗ್ರೆಸ್. ಈ ರಾಷ್ಟ್ರವನ್ನು ಲೂಠಿ ಹೊಡೆದವರು ಇವರು. ನಮ್ಮ ನಾಯಕರ ಬಗ್ಗೆಯೂ ಮಾತನಾಡುವ ನೈತಿಕತೆ ಇಲ್ಲ. ಹೆಡ್ಗೇವಾರ್ ಬಗ್ಗೆ ಮಾತನಾಡುತ್ತಾರೆ ಏನಿದೆ ನೈತಿಕತೆ. ಟಿಪ್ಪು ಜಯಂತಿ ಮಾಡುತ್ತಾರೆ ಇದರಲ್ಲಿ ಅವರಿಗೇ ಯಾವ ನೈತಿಕತೆ ಇದೆ. ನಾಚಿಕೆಯಾಗಬೇಕು ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಆರ್ ಎಸ್ ಎಸ್ ಒಂದು ದೇಶ, ಜಾತಿಗೆ ಸೀಮಿತವಾಗಿಲ್ಲ. ದೇಶದ ಬಗ್ಗೆ ಮೆಚ್ಚಿ ಬಂದವರನ್ನು ಸೇರಿಸಿಕೊಳ್ಳುತ್ತಾರೆ. ಅಲ್ಲಿ ಸೇರುವವರು ದೇಶಭಕ್ತಿಯನ್ನು‌ಮೆರೆಯುತ್ತಾರೆ. ಪ್ರಣಬ್ ಮುಖರ್ಜಿಯವರು ಈ ಹಿಂದೆ ನಮ್ಮ ಸಂಘಟನೆಗೆ ಬಂದಾಗ ಹೊಗಳಿದ್ದರು. ಕಾಂಗ್ರೆಸ್ ಬಗ್ಗೆ ಮಾತನಾಡುವುದಕ್ಕೆ ಏನು ಇಲ್ಲ ಬಿಡಿ. ಸಿದ್ದರಾಮಯ್ಯ ನವರೇ ಬಂದು ಆರ್ ಎಸ್ ಎಸ್ ಗೆ ಬಂದು ಸೇರಿಕೊಳ್ಳಲಿ. ಇಲ್ಲಿ ನಡೆಯುವುದು ಏನು ಎಂಬುದು ಗೊತ್ತಾಗಲಿದೆ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಳ್ಳಕೆರೆ | ರೈತ ಆತ್ಮಹತ್ಯೆ

ಸುದ್ದಿಒನ್, ಚಳ್ಳಕೆರೆ, ಮೇ. 12 : ತಾಲೂಕಿನ ಬಾಲೇನಹಳ್ಳಿ ಗ್ರಾಮದ ಮೋಹನ್ ಕುಮಾರ್(36) ಎಂಬ ರೈತ ಬೆಳಗಾಗಿ ಮಾಡಿದ ಸಾಲವನ್ನು ತೀರಿಸಲಾಗದೆ ಭಾನುವಾರ ಬೆಳಗಿನ ಜಾವ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ

ಹೊಸದುರ್ಗ | ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಫೇಲ್,‌ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ

  ಸುದ್ದಿಒನ್, ಚಿತ್ರದುರ್ಗ, ಮೇ. 12  : ಇತ್ತಿಚೀಗಷ್ಟೆ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಚಿತ್ರದುರ್ಗ ಜಿಲ್ಲೆ 21ನೇ ಸ್ಥಾನ ಪಡೆದುಕೊಂಡಿದೆ. ಇತ್ತ ವಿದ್ಯಾರ್ಥಿನಿಯೊಬ್ಬಳು ಪರೀಕ್ಷೆಯಲ್ಲಿ ಫೇಲ್ ಆಗಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ

ಖ್ಯಾತ ಕಿರುತೆರೆ ನಟಿ ಪವಿತ್ರಾ ಜಯರಾಮ್ ಅಪಘಾತದಲ್ಲಿ ಸಾವು…!

ಬೆಂಗಳೂರು : ಇಂದು ತಾಯಂದಿರ ದಿನ. ಎಲ್ಲರೂ ತಮ್ಮ ತಾಯಂದಿರ ಫೋಟೋ ಹಾಕಿಕೊಂಡು ವಿಶ್ ಮಾಡುತ್ತಿದ್ದಾರೆ. ತಾಯಂದಿರಿಗೆ ಗಿಫ್ಟ್ ಕೊಟ್ಟು ಸಂಭ್ರಮಿಸುತ್ತಿದ್ದಾರೆ. ಆದರೆ ಈ ನಟಿಯ ಮಕ್ಕಳಿಗೆ ಆ ಯೋಗ ಇಲ್ಲ. ಅಮ್ಮನನ್ನು ತಬ್ಬಿ

error: Content is protected !!