ʻಸ್ವಾತಿ ಮುತ್ತಿನ ಮಳೆ ಹನಿಯೇʼ ಸಿನಿಮಾದಿಂದ ಹೊರ ಬಂದ ರಮ್ಯಾ : ರಾಜ್ ಬಿ ಶೆಟ್ಟಿಗೆ ಯಾರಾಗ್ತಾರೆ ಜೋಡಿ..?

1 Min Read

ಸ್ಯಾಂಡಲ್ವುಡ್ ಮೋಹಕ ತಾರೆ ರಮ್ಯಾ ಮತ್ತೆ ಚಿತ್ರರಂಗಕ್ಕೆ ಬರಬೇಕು ಎಂಬುದು ಅದೆಷ್ಟು ಜನರ ಮನಸ್ಸಾಗಿತ್ತು. ಅಷ್ಟು ಜನರ ಆಸೆ ಈಡೇರುವ ಕಾಲವೂ ಸನಿಹವಾಗಿತ್ತು. ನಿರ್ಮಾಪಕಿಯಾಗಿ ಎಂಟ್ರಿ ಕೊಡುತ್ತಿರುವ ರಮ್ಯಾ, ಇದ್ದಕ್ಕಿದ್ದ ಹಾಗೇ ನಾನು ಈ ಸಿನಿಮಾದಲ್ಲಿ ಆಕ್ಟ್ ಮಾಡುತ್ತಿದ್ದೀನಿ ಅಂತ ಅನೌನ್ಸ್ ಮಾಡಿದ್ದರು.

ಅಬ್ಬಬ್ಬಾ.. ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾದಲ್ಲಿ ರಮ್ಯಾ ನಟಿಸುತ್ತಿದ್ದಾರೆ ಎಂದು ಕೇಳಿದಾಗಿನಿಂದ ಅಭಿಮಾನಿಗಳ ಮನಸ್ಸು ತಕಧಿಮಿತ ಹಾಕುತ್ತಿತ್ತು. ಆದರೆ ಇದೀಗ ಆ ಆಸೆಗೆ ತಣ್ಣೀರು ಬಿದ್ದಿದೆ. ರಮ್ಯಾ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾದಿಂದ ಹೊರ ಬಂದಿದ್ದಾರೆ.

ಇದು ಇಡೀ ಚಿತ್ರತಂಡಕ್ಕೆ ಶಾಕ್ ಆಗಿದೆ. ಈಗಾಗಲೇ ಮೈಸೂರು ಭಾಗದಲ್ಲಿ ಶೂಟಿಂಗ್ ಗೆ ಎಲ್ಲಾ ಸಿದ್ಧತೆಗಳು ಶುರುವಾಗಿದೆ. ಮೊದಲ ಶೆಡ್ಯೂಲ್ ಆರಂಭವಾಗಬೇಕಿತ್ತು. ಆದರೆ ರಮ್ಯಾ ಈ ಸಮಯದಲ್ಲಿ ನಾನು ನಟಿಸುವುದಿಲ್ಲ ಎಂದಿದ್ದಾರೆ. ಇದು ನಿರ್ದೇಶಕ ರಾಜ್ ಬಿ ಶೆಟ್ಟಿ ಕೂಡ ಕಂಗಲಾಗಿದ್ದಾರೆ. ಈಗ ರಮ್ಯಾ ಸ್ಥಾನಕ್ಕೆ ಯಾರನ್ನು ತರುವುದು ಎಂಬ ಗೊಂದಲ ಆರಂಭವಾಗಿದೆ.

ಮೂಲಗಳ ಪ್ರಕಾರ ರಮ್ಯಾ ಜಾಗಕ್ಕೆ ಸಿರಿ ರವಿಕುಮಾರ್ ಬರಲಿದ್ದಾರೆ ಎನ್ನಲಾಗಿದೆ. ಸಿರಿ ರವಿಕುಮಾರ್ ಸಕುಟುಂಬ ಸಮೇತ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿಯೇ ನಟಿಸಿದ್ದರು. ಹೀಗಾಗಿ ಸಿರಿ ರವಿಕುಮಾರ್ ಅವರನ್ನು ಫೈನಲ್ ಮಾಡಲಾಗಿದೆ ಎನ್ನಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *