ಮಂಡ್ಯ ಚುನಾವಣಾ ಪ್ರಚಾರದಲ್ಲಿ ರಮ್ಯಾ : ಮದುವೆ, ಅಂಬಿ ಸಾವಿನ ಬಗ್ಗೆ ಏನಂದ್ರು ಗೊತ್ತಾ..?

suddionenews
1 Min Read

 

ಸದ್ಯ ನಟಿ ರಮ್ಯಾ ರಾಜಕೀಯ ಬಿಟ್ಟು ಸಿನಿಮಾರಂಗದಲ್ಲಿ ಫುಲ್ ಆಕ್ಟೀವ್ ಆಗಿದ್ದಾರೆ. ಹಾಗಂತ ರಾಜಕೀಯವನ್ನು ಸಂಪೂರ್ಣವಾಗಿ ಬಿಟ್ಟಿಲ್ಲ. ಸದ್ಯ ರಾಜ್ಯ ವಿಧಾನಸಭಾ ಚುನಾವಣೆ ಇರುವ ಕಾರಣ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ಇಳಿದಿದ್ದಾರೆ. ಮಂಡ್ಯದಲ್ಲಿ ಚುನಾವಣಾ ಪ್ರಚಾರಕ್ಕೆ ಆಗಮಿಸಿದ ರಮ್ಯಾ, ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.

ಹೇಳಿಕೇಳಿ ಮಂಡ್ಯ ಅಂಬರೀಶ್ ಅವರ ಅಭಿಮಾನಿಗಳು. ಅಲ್ಲಿ ರೆಬೆಲ್ ಸ್ಟಾರ್ ಫ್ಯಾನ್ಸ್ ಗೇನು ಕಡಿಮೆ ಇಲ್ಲ. ಅವರು ನಿಧನರಾದಾಗಲೂ ರಮ್ಯಾ ಬಂದಿರಲಿಲ್ಲ. ಅಂಬರೀಶ್ ಅವರಿಂದ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದ ರಮ್ಯಾ, ಅವರ ಅಂತ್ಯ ಸಂಸ್ಕಾರಕ್ಕೆ ಬರದಿದ್ದಕ್ಕೆ ಎಲ್ಲರಿಗೂ ಕೋಪ ತರಿಸಿತ್ತು. ಆ ಪ್ರಶ್ನೆಗೂ ರಮ್ಯಾ ಪ್ರಚಾರದ ವೇಳೆ ಉತ್ತರಿಸಿದ್ದಾರೆ.

“ನಂಗೆ ಆ ಸಮಯದಲ್ಲಿ ಟ್ಯೂಮರ್ ಆಗಿದ್ದ ಕಾರಣ ನಾನು ಬರುವುದಕ್ಕೆ ಮಂಡ್ಯ ಆಗಲಿಲ್ಲ. ಸರ್ಜರಿಯಾಗಿತ್ತು. ನನಗೂ ಸಂಬಂಧವಿಲ್ಲ. ಆಗ ಬರುತ್ತಲೇ ಇರುತ್ತೇನೆ. ನಾನು ಕ್ಯಾಮೆರಾ ಮುಂದೆ ಎಲ್ಲವನ್ನು ಹಂಚಿಕೊಳ್ಳುವುದಿಲ್ಲ”. ಇನ್ನು ಇದೇ ವೇಳೆ ಮದುವೆಯ ವಿಚಾರವೂ ಪ್ರಸ್ತಾಪವಾಗಿದ್ದು, “ನೀವೇ ಗಂಡು ನೋಡಿ. ಗೌಡ ಹುಡುಗನೇ ಬೇಕು. ಸ್ವಯಂ ವರ ಮಾಡಿ ಮದುವೆಯಾಗುತ್ತೇನೆ” ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *