Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕಾಂಗ್ರೆಸ್ ಹಾಳಾಗಲು ಡಿಕೆಶಿ ಹಾಗೂ ಆ ವಿಷಕನ್ಯೆ ಕಾರಣ : ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ರಮೇಶ್ ಜಾರಕಿಹೊಳಿ ಆಕ್ರೋಶ

Facebook
Twitter
Telegram
WhatsApp

 

 

ಬೆಳಗಾವಿ: ಸಿಡಿ ಕೇಸ್ ವಿಚಾರಕ್ಕೆ ಇಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸುದ್ದಿಗೋಷ್ಟಿ ನಡೆಸಿ, ಡಿಕೆಶಿ ವಿರುದ್ಧ ನೇರವಾಗಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ‌ನನ್ನ ಮತ್ತು ಡಿಕೆಶಿ ಸಂಬಂಧ ಹಾಳಾಗುವುದಕ್ಕೆ ಗ್ರಾಮೀಣ ಶಾಸಕಿಯೇ ಕಾರಣ ಎಂದಿದ್ದಾರೆ.

ಅಂದು ಅಧಿವೇಶನದಲ್ಲಿ ಇದ್ದೆ. ಆಗ ಒಬ್ಬ ಕರೆ ಮಾಡಿ ಗ್ರಾಮೀಣ ಶಾಸಕಿ ಆಡಿದ್ದ ಮಾತನ್ನು ಹೇಳಿದ. ಕಿತ್ತೂರು ರಾಣಿ ಚನ್ನಮ್ಮ ಬಗ್ಗೆ ಈ ಯಮ್ಮಾ ಮಾತಾಡ್ತಾರೆ. ಅವರ ಬಗ್ಗೆ ಹೀಗೆಲ್ಲಾ ಮಾತಾಡ್ತಾ ಅಂದ. ಆಗ ನಾನು ಕೆಟ್ಟ ಶಬ್ದ ಮಾತಾನಾಡಿದೆ. ಆ ಶಾಸಕಿಗೆ ಮಾತನಾಡಿದೆ. ಅದೇ ಆಡಿಯೋವನ್ನು ಜೋಡಿಸಿ, ಕಿತ್ತೂರು ರಾಣಿ ಚನ್ನಮ್ಮ ಬಗ್ಗೆ ಜೋಡಿಸಿ, ಕಿತ್ತೂರು ರಾಣಿ ಚನ್ನಮ್ಮ ಬಗ್ಗೆ ಅವಹೇಳನ ಮಾಡಿದ್ದಾರೆ ಅಂತ ಕಟ್ ಅಂಡ್ ಪೇಸ್ಟ್ ಮಾಡಿ ಚುನಾವಣೆ ಸಂದರ್ಭದಲ್ಲಿ ರಿಲೀಸ್ ಮಾಡಲು ಪ್ಲ್ಯಾನ್ ಮಾಡಿದ್ದಾರೆ.

ಆ ಆಡಿಯೋ ರಿಲೀಸ್ ಮಾಡಿ ಸಂಘರ್ಷ ಆದ್ರೆ ನೇರ ಹೊಣೆ ಗ್ರಾಮೀಣ ಶಾಸಕಿ ಹಾಗೂ ಡಿಕೆ ಶಿವಕುಮಾರ್. ನಾನು ಮಾತನಾಡಿದ್ದೀನಿ ಸತ್ಯ. ಆದ್ರೆ ಅದು ಆ ಗ್ರಾಮೀಣ ಶಾಸಕಿಗೆ ಮಾತನಾಡಿರುವುದು. ಡಿಕೆಶಿ ಹಾಗೂ ನನ್ನ ಸಂಬಂಧ ಹಾಳಾಗಿದ್ದೆ ಆ ಶಾಸಕಿಯಿಂದ.

ಕಿತ್ತೂರು ರಾಣಿ ಚೆನ್ನಮ್ಮ ಎಂಥಾ ಮಹಿಳೆ. ಅವರಿಗೆ ಹೋಲಿಕೆ ಮಾಡಿ ಲಿಂಗಾಯತ ಸಮುದಾಯದ ನಾಯಕ ಮಾತನಾಡಿದ್ದ. ಆಗ ನಾನು ಡ್ಯಾಶ್ ಡ್ಯಾಶ್ ಎಂದು ಬೈದಿದ್ದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಹರಿಹಾಯ್ದಿದ್ದಾರೆ. ಮುಂದೆ ಕಾಂಗ್ರೆಸ್ ಹಾಳಾಗುವುದಕ್ಕೆ ಕಾರಣ ಡಿಕೆಶಿ ಕಂಪನಿ ಹಾಗೂ ವಿಷಕನ್ಯೆ ಕಾರಣ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಬಿ ಎನ್ ಚಂದ್ರಪ್ಪ ಪರ ಮತಯಾಚನೆ ಮಾಡಿ, ಮೋದಿ, ಅಮಿತ್ ಶಾ ವಿರುದ್ಧ ಗುಡುಗಿದ ಸಿದ್ದರಾಮಯ್ಯ

ಚಿತ್ರದುರ್ಗ: ಈ ತಿಂಗಳ 26 ಕ್ಕೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಅಭ್ಯರ್ಥಿ ಬಿಎನ್ ಚಂದ್ರಪ್ಪ ರನ್ನ ಹೆಚ್ಚು ಮತಗಳಿಂದ ಗೆಲ್ಲಿಸಿಕೊಡಬೇಕು ಎಂದು ಮನವಿ ಮಾಡ್ತೀನಿ. ಕಳೆದ 10 ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿದೆ ಮೋದಿಯವರು ಪ್ರಧಾನಿಯಾಗಿದ್ದಾರೆ.

ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಬರುತ್ತಿದ್ದಂತೆ ಕಾಡುಗೊಲ್ಲ ಸಮುದಾಯವನ್ನು ST ಗೆ ಸೇರಿಸುತ್ತೇವೆ: ಪ್ರಿಯಾಂಕಾಗಾಂಧಿ ಭರವಸೆ

ಚಿತ್ರದುರ್ಗ ಏ 23: ಕಾಡುಗೊಲ್ಲ ಸಮುದಾಯವನ್ನು ST ಗೆ ಸೇರಿಸಲು ಮೇಲದ ಮೇಲೆ ನಾವು ಕೇಂದ್ರಕ್ಕೆ ಕೇಳುತ್ತಲೇ ಇದ್ದೇವೆ. ಆದರೂ ಇದುವರೆಗೂ ಏಕೆ ಸ್ಪಂದಿಸುತ್ತಿಲ್ಲ ಮೋದಿಯವರೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಖಾರವಾಗಿ ಪ್ರಶ್ನಿಸಿದರು. ಇಲ್ಲಿ

ಪ್ರತೀ ಬಾರಿ ಭಾರತೀಯರನ್ನು ನಂಬಿಸಿ ಮೋಸ ಮಾಡೋದು ಮೋದಿಯವರಿಗೆ ರೂಢಿಯಾಗಿದೆ: ಸಿ.ಎಂ. ಸಿದ್ದರಾಮಯ್ಯ

ಚಿತ್ರದುರ್ಗ ಏ 23: ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿ ಇಡಿ ದೇಶದ ರೈತರ 76 ಸಾವಿರ ಕೋಟಿ ಸಾಲ ಮನ್ನಾ ಮಾಡಿದರು. ಮೋದಿ ಪ್ರಧಾನಿಯಾಗಿ ಅತ್ಯಂತ ಶ್ರೀಮಂತರ 16 ಲಕ್ಷ ಕೋಟಿ ಸಾಲ ಮನ್ನಾ

error: Content is protected !!