ಸಂತೋಷ್ ಸಾವಿಗೆ ರಮೇಶ್ ಜಾರಕಿಹೊಳಿ ಕೂಡ ಕಾರಣ ಇರಬಹುದು : ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್

suddionenews
1 Min Read

ಬೆಳಗಾವಿ: ಗುತ್ತುಗೆದಾರ ಸಂತೋಷ್ ಪಾಟೀಲ್ ಸಾವಿಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕೂಡ ಕಾರಣ ಇರಬಹುದು ಅಂತ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೊಸದಾಗಿ ಆರೋಪ ಮಾಡಿದ್ದಾರೆ.

ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಸಂತೋಷ್ ಸಾವಿಗೆ ರಮೇಶ್ ಜಾರಕಿ ಹೊಳಿ ಕಾರಣವಾಗಿರಬಹುದು. ಯಾಕೋ ಈ ಕೊಲೆ ಹಿಂದೆ ಜಾರಕಿಹೊಳಿ ಕಾರಣ ಆಗಿರಬಹುದು ಎಂಬ ಸಂಶಯ ಮೂಡುತ್ತಿದೆ. ಹಿಟ್ ಅಂಡ್ ರನ್ ಕೇಸ್ ನವರು. ಯಾಕೆ ಸೋಮವಾರದವರೆಗೆ ಕಾಯಬೇಕು. ಈಗಲೇ ರಾಜ್ಯದ ಜನತೆಗೆ ಮುಂದೆ ಹೇಳಬೇಕು ಅಲ್ವಾ. ನಾನು ಜಾಸ್ತಿ ಮಾತನಾಡುವುದಕ್ಕೆ ಆಗಲ್ಲ. ಅವರೇ ನಿನ್ನೆ ಹೇಳಿದ್ದರು ಒಳ್ಳೆ ಸಂಬಂಧ ಇತ್ತು ನನ್ನ ಜೊತೆ ಅಂತ. ಹೀಗಾಗಿ ಅವರು ಸಂತೋಷ್ ಸಾವಿಗೆ ಕಾರಣ ಆದರೇನೋ ಎಂಬ ಸಂಶಯ ಬರುತ್ತಾ ಇದೆ ಎಂದಿದ್ದಾರೆ.

ನಿನ್ನೆ ಸಂತೋಷ್ ಅಂತ್ಯಕ್ರಿಯೆ ಬಳಿಕ ಮಾತನಾಡಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ನನ್ನ ಸಿಡಿ ಕೇಸ್ ಹಿಂದೆ ಇರುವವ ಮಹಾನಾಯಕ, ನಾಯಕಿಯೇ ಇದರಲ್ಲೂ ಇರಬಹುದು. ಎಲ್ಲವನ್ನು ಸೋಮವಾರ ಪ್ರೆಸ್ ಮೀಟ್ ಹೇಳುತ್ತೇನೆ. ನನ್ನ ಕೇಸ್ ಜೊತೆಗೆ ಈಶ್ವರಪ್ಪ ಕೇಸನ್ನು ಸಿಬಿಐಗೆ ವಹಿಸಬೇಕು ಎಂಬುದಾಗಿ ಹೊಸ ಬಾಂಬ್ ಸಿಡಿಸಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಲಕ್ಷ್ಮೀ ಹೆಬ್ಬಾಳ್ಕರ್ ಸೋಮವಾರ ಯಾಕೆ ಈಗಲೇ ಹೇಳಲಿ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *