ಕಲ್ಲು ಹೊಡೆಯಬಾರದು ಅಂತ ರಮೇಶ್ ಜಾರಕಿಹೊಳಿಗೆ ಚಾಕಲೇಟ್ ತಿನ್ನಿಸುತ್ತಿದ್ದಾರೆ : ಸತೀಶ್ ಜಾರಕಿಹೊಳಿ

1 Min Read

ಬೆಳಗಾವಿ: ಈ ಹಿಂದಿನ ಸರ್ಕಾರ ಕೆಡವಿದ ರಮೇಶ್ ಜಾರಕಿಹೊಳಿಗೆ ಈ ಸರ್ಕಾರ ಕೆಡವುದು ಕಷ್ಟವೇನು ಅಲ್ಲ. ಅದಕ್ಕಾಗಿಯೇ ರಮೇಶ್ ಜಾರಕಿಹೊಳಿಗೆ ತಿಂಗಳಿಗೊಮ್ಮೆ ಚಾಕಲೇಟ್ ನೀಡುತ್ತಿದ್ದಾರೆ.

ಬಿಜೆಪಿಗರಿಗೆ ರಮೇಶ್ ಜಾರಕಿಹೊಳಿ ಬಗ್ಗೆ ಭಯವಿದೆ. ಇದಕ್ಕೆ ಹೊಡೆಯುವ ಬದಲಿಗೆ ಚಾಕಲೇಟ್ ನೀಡುತ್ತಿದ್ದಾರೆ. ಬಿಜೆಪಿಗರಿಗೆ ಪಕ್ಷ ಕಟ್ಟಿದ ಯಡಿಯೂರಪ್ಪ ಅವರಿಗೆ ನೆರತೃತ್ವ ನೀಡಲಿಲ್ಲ. ಅವರನ್ನೇ ಸೈಡ್ ಲೈನ್ ಮಾಡಿದರು. ಇನ್ನು ರಮರೆಶ್ ಜಾರಕಿಹೊಳಿ ಯಾವ ಲೆಕ್ಕ. ರಮೇಶ್ ಜಾರಕಿಹೊಳಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ. ಮಂತ್ರಿಗಾಗಿ ಕಾದು ಕುಳಿತಿರುವ ರಮೇಶ್ ಜಾರಕಿಹೊಳಿಗೆ ಚಾಕಲೇಟ್ ನೀಡುತ್ತಿದ್ದಾರೆ.

ಒಂದು ಬಾರಿ ಬೈಪಾಸ್ ಸರ್ಜರಿ ಮಾಡಿದವನಿಗೆ ಎರಡನೇ ಬಾರಿ ಬೈಪಾಸ್ ಸರ್ಜರಿ ಮಾಡುವುದು ಕಷ್ಟವೇನು ಅಲ್ಲ. ಸಂಪುಟ ವಿಸ್ತರಣೆ ಸಿಎಂ ಬೊಮ್ಮಾಯಿ ಹೈಕಮಾಂಡ್ ಭೇಟಿ ಮಾಡುತ್ತಲೇ ಇದ್ದಾರೆ. ಹೈಕಮಾಂಡ್ ಗುಜರಾತ್ ಚುನಾವಣೆಯಲ್ಲಿ ಬ್ಯುಸಿ ಇದೆ. ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಬೆಳಗಾವಿ ಚುನಾವಣೆ ನಡೆಸುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *