Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ರಮೇಶ್ ಜಾರಕಿಹೊಳಿ ಸಿಡಿ ವಿಚಾರ : ಮೂವರನ್ನು ಅರೆಸ್ಟ್ ಮಾಡಲು ಒತ್ತಾಯ..!

Facebook
Twitter
Telegram
WhatsApp

 

ಬೆಳಗಾವಿ: ರಮೇಶ್ ಜಾರಕಿಹೊಳಿ ಸಿಡಿ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಮತ್ತೆ ಆ ಸಿಡಿ ವಿಚಾರವನ್ನು ರಮೇಶ್ ಜಾರಕಹೊಳಿ ಅವರೇ ತೆಗೆದಿದ್ದಾರೆ. ಈ ಸಂಬಂಧ ಮಹಾನಾಯಕನ ಆಡಿಯೋ ರಿಲೀಸ್ ಮಾಡಲು ಸುದ್ದಿಗೋಷ್ಠಿ ನಡೆಸಿದ್ದಾರೆ.

ಒಂದೂವರೆ ವರ್ಷದಿಂದ ಸಮಾಧಾನದಿಂದ ಕೂತಿದ್ದೆ. ನನ್ನ ವಿರೋಧ ಮಾಡುವವರು ನಾನು ಹೆದರಿದ್ದೇನೆ ಅಂದುಕೊಂಡಿದ್ದರು. ನಂಗೆ ಹೊಡೆದಂತೆ ನಾನು ಸಮಯ ನೋಡಿ ಹೊಡೆಯಬೇಕು ಅಂತ ಇದ್ದೆ. ಈಗ ಚುನಾವಣೆ ಸಮಯ ಅದಕ್ಕೆ ಈಗ ಬಹಿರಂಗ ಪಡಿಸುತ್ತಿದ್ದೇನೆ.

ಮಿಸ್ಟರ್ ಡಿ.ಕೆ. ಶಿವಕುಮಾರ್ ರಾಜಕೀಯ ಮಾಡುವುದಕ್ಕೆ ಲಾಯಕ್ಕು ಇಲ್ಲ. ಈ ರೀತಿ ವೈಯಕ್ತಿಕವಾಗಿ ಮಾಡಬಾರದು. ರಾಜಕಾರಣದಲ್ಲಿ ಷಡ್ಯಂತ್ರ ಮಾಡಿ, ವೈಯಕ್ತಿಕ ಜೀವನ ಹಾಳು ಮಾಡಿದ್ರೆ ಅವನು ರಾಜಕಾರಣಕ್ಕೆ ನಾಲಾಯಕ್ಕು. ಸಿಡಿ ವಿಚಾರದಲ್ಲಿ ನನ್ನ ಬಳಿ ಎವಿಡೆನ್ಸ್ ಇದೆ. ಮಾಧ್ಯಮದಲ್ಲಿ ಬಿಡಲ್ಲ. ನೇರವಾಗಿ ಸಿಐಡಿಗೆ ಕೊಡ್ತೀನಿ. ಡಿಕೆ ಶಿವಕುಮಾರ್ ಗೆ ಸಂಬಂಧಿಸಿದ ಸಣ್ಣ ಝಲಕ್ ತೋರಿಸುತ್ತೇನೆ. ಇದೊಂದು ಕ್ರಿಮಿನಲ್ ಕೇಸ್. ಈಗ ಎವಿಡೆನ್ಸ್ ಬಿಡುಗಡೆ ಮಾಡಿದ್ರೆ ಅವರು ಅಲರ್ಟ್ ಆಗುತ್ತಾರೆ. ಡಿಕೆ ಶಿವಕುಮಾರ್ ಅವರು ಮಹಿಳೆ ಮೂಲಕ ನನ್ನ ತೇಜೋವಧೆ ಮಾಡಿದ್ದಾರೆ. ನಾನು ತಪ್ಪು ಮಾಡದೆ ಹೋದರೂ ನಾನೇ ಮಾಡಿದೆ ಅಂತ ಹೇಳಬೇಕಾಯಿತು. ಆದರೆ ನನ್ನ ವ್ಯಕ್ತಿತ್ವ ಏನು ಅನ್ನೋದು ಇಡೀ ಜನತೆಗೆ ಗೊತ್ತು. ನನ್ನ ಮಂದಿಗೆ, ಮನೆಯವರಿಗೆ ಗೊತ್ತು.

ಡಿಕೆ ಶಿವಕುಮಾರ್ ಆಗರ್ಭ ಶ್ರೀಮಂತರಾಗಿದ್ದಾನೆ. ಆದ್ರೆ 85ರಲ್ಲಿ ಹರಿದ ಚಪ್ಪಲಿ ಹಾಕುತ್ತಿದ್ದ. ಈಗ ಲೂಟಿ ಮಾಡಿ ಶ್ರೀಮಂತನಾಗಿದ್ದಾನೆ. ಈಗ ಸಿಡಿ ಕೇಸ್ ನಲ್ಲಿ ಆ ಹುಡುಗಿಯನ್ನು ಅರೆಸ್ಟ್ ಮಾಡಬೇಕು. ಆ ಇಬ್ಬರು ಹುಡುಗರು ಶ್ರವಣ್ ಮತ್ತು ನರೇಶ್ ನನ್ನು ಅರೆಸ್ಟ್ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ದಿನಪತ್ರಿಕೆಗಳಲ್ಲಿ ಕಟ್ಟಿಕೊಡುವ ಬಿಸಿ ತಿಂಡಿ ತಿಂದ್ರೆ ಕ್ಯಾನ್ಸರ್ ಬರುತ್ತೆ ಎಚ್ಚರ..!

ಪ್ಲಾಸ್ಟಿಕ್ ಕವರ್ ಅನ್ನು ಬ್ಯಾನ್ ಮಾಡಿ ಬಹಳ ವರ್ಷಗಳೇ ಕಳೆದಿವೆ. ಪ್ಲಾಸ್ಟಿಕ್ ಬಳಕೆ ಮಾಡುವುದರಿಂದ ಮನುಷ್ಯನ ಆರೋಗ್ಯಕ್ಕೆ ಖಂಡಿತ ಕುತ್ತು ಬರಲಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಹೊಟೇಲ್ ಗಳಲ್ಲಿ ಪ್ಲಾಸ್ಟಿಕ್ ಕವರ್ ಗಳನ್ನು

ಈ ರಾಶಿಯವರ ವೃತ್ತಿ ಕ್ಷೇತ್ರದಲ್ಲಿ ಯಾರೋ ಮಾಡಿರೋ ತಪ್ಪಿಗೆ ನೀವೇ ನೇರ ಹೊಣೆಗಾರಿಕೆ

ಈ ರಾಶಿಯವರ ವೃತ್ತಿ ಕ್ಷೇತ್ರದಲ್ಲಿ ಯಾರೋ ಮಾಡಿರೋ ತಪ್ಪಿಗೆ ನೀವೇ ನೇರ ಹೊಣೆಗಾರಿಕೆ, ಈ ಪಂಚ ರಾಶಿಗಳ ಮದುವೆ ವಿಳಂಬವೇ? ಶನಿವಾರ ರಾಶಿ ಭವಿಷ್ಯ -ಏಪ್ರಿಲ್-27,2024 ಸೂರ್ಯೋದಯ: 05:56, ಸೂರ್ಯಾಸ್ತ : 06:31 ಶಾಲಿವಾಹನ

ಆ ಕುಗ್ರಾಮ ಒಂದರಲ್ಲೇ 100% ಮತದಾನ : ಎಲ್ಲಿ, ಎಷ್ಟೆಷ್ಟು ಮತದಾನವಾಗಿದೆ..?

ಬೆಂಗಳೂರು: ಇಂದು ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ ನಡೆದಿದೆ. ಬೆಳಗ್ಗೆ 7 ಗಂಟೆಗೆ ಶುರುವಾದ ಮತದಾನ ಸಂಜೆ 5 ಗಂಟೆಗೆ ಮುಕ್ತಾಯವಾಗಿದೆ. ಬೇಸರದ ಸಂಗತಿ ಎಂದರೆ ಈ ಬಾರಿಯೂ ಸಂಪೂರ್ಣ ಮತದಾನವಾಗಿಲ್ಲ. ಪ್ರತಿ

error: Content is protected !!