Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ आध्यात्मिक अन्य

---Advertisement---

ಅಣ್ಣನಿಗೆ ಹಾರ್ಟ್ ಅಟ್ಯಾಕ್ ಎಂದ ಕೂಡಲೇ ಓಡೋಡಿ ಬಂದ ರಜನೀಕಾಂತ್ : ಮುಂದೇನಾಯ್ತು..?

---Advertisement---

ಬೆಂಗಳೂರು: ತಮಿಳಿನ ಸೂಪರ್ ಸ್ಟಾರ್ ರಜನೀಕಾಂತ್ ಬೆಂಗಳೂರಿಗೆ ಬಂದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೆಲ್ಲಾ ಸದ್ಯ ಇದೇ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗ್ತಾ ಇದೆ. ರಜನೀಕಾಂತ್ ಗೆ ಅಣ್ಣ ಎಂದರೆ ಎಷ್ಟು ಪ್ರೀತಿ ಅನ್ನೋದು ಇದರಿಂದಾನೇ ಅರ್ಥ ಆಗುತ್ತೆ. ಅಣ್ಣನ ಆರೋಗ್ಯ ವಿಚಾರಿಸುವುದಕ್ಕೋಸ್ಕರ ಚೆನ್ನೈನಿಂದ ಬೆಂಗಳೂರಿಗೆ ಓಡೋಡಿ ಬಂದಿದ್ದಾರೆ.

ರಜನೀಕಾಂತ್ ಅವರ ಸಹೋದರ ಸತ್ಯನಾರಾಯಣ್ ರಾವ್ ಗಾಯಕ್ವಾಡ ಬೆಂಗಳೂರಿನಲ್ಲಿಯೇ ನೆಲೆಸಿದ್ದಾರೆ. ಹೀಗಾಗಿ ಅವರನ್ನು ನೋಡುವುದಕ್ಕೆ ಆಗಾಗ ರಜನಿಕಾಂತ್ ಅವರು ಕೂಡ ಬೆಂಗಳೂರಿಗೆ ಬಂದು ಹೋಗೋದು ಮಾಡ್ತಾ ಇರ್ತಾರೆ. ಆದರೆ ಬರುವಾಗ ಹೋಗುವಾಗ ಯಾರಿಗೂ ಗೊತ್ತಾಗದಂತೆ ನೋಡಿಕೊಳ್ಳುತ್ತಾರೆ. ಯಾಕಂದ್ರೆ ರಜನಿಕಾಂತ್ ಅವರು ಬೆಂಗಳೂರಿಗೆ ಬಂದಿದ್ದಾರೆ ಎಂದು ಗೊತ್ತಾದ್ರೆ ಸಾಕು ಅಭಿಮಾನಿಗಳು ಅವರ ಮನೆಯ ಮುಂದೆ ಕ್ಯೂ ನಿಂತು ಬಿಡುತ್ತಾರೆ. ಅವರನ್ನ ತಡೆಯುವುದಕ್ಕೇನೆ ಕಷ್ಟವಾಗುತ್ತದೆ. ಹೀಗಾಗಿಯೇ ಸೀಕ್ರೇಟ್ ಆಗಿ ಬಂದು ಸೀಕ್ರೇಟ್ ಆಗಿ ಮತ್ತೆ ಚೆನ್ನೈಗೆ ಹೋಗಿ ಬಿಡುತ್ತಾರೆ.

ಈಗ ಬೆಂಗಳೂರಿಗೆ ಬಂದ ಕಾರಣ ಅವರ ಅಣ್ಣನಿಗೆ ಹೃದಯಾಘಾತವಾಗಿತ್ತು. ಆಸ್ಪತ್ರೆಗೆ ಹೋಗೋಣಾ ಎಂದರೆ ಬರೋದಿಲ್ಲ ಎಂದು ಮಕ್ಕಳಂತೆ ಹಠ ಹಿಡಿದಿದ್ದರಂತೆ. ಹೀಗಾಗಿಯೇ ರಜನಿಕಾಂತ್ ಅವರು ಬೆಂಗಳೂರಿಗೆ ಬಂದು, ಅಣ್ಣನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ವೈದ್ಯರಿಂದ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ವೈದ್ಯರು ಎರಡು ದಿನ ಸರಿಯಾಗಿ ವಿಶ್ರಾಂತಿ ಪಡೆಯುವುದಕ್ಕೆ ಹೇಳಿದ್ದಾರೆ. ಅಣ್ಣನಿಗೂ ಬುದ್ದಿ ಹೇಳಿ, ವಿಶ್ರಾಂತಿ ಪಡೆಯಲು ಹೇಳಿದ್ದಾರೆ. ಆರೋಗ್ಯ ಚೆನ್ನಾಗಿ ನೋಡಿಕೊಳ್ಳಲು ಹೇಳಿದ್ದು, ನಂತರ ಚೆನ್ನೈಗೆ ವಾಪಾಸ್ ಆಗಿದ್ದಾರೆ. ರಜನಿಕಾಂತ್ ಅವರ ಅಣ್ಣ ಸತ್ಯನಾರಾಯಣ್ ರಾವ್ ಅವರ ಆರೋಗ್ಯದಲ್ಲಿ ಸದ್ಯ ಚೇತರಿಕೆ ಕಂಡಿದೆ.

Join WhatsApp

Join Now

Join Telegram

Join Now