ಬೆಂಗಳೂರು: ಈಗಷ್ಟೇ ಬೇಸಿಗೆ ಕಾಲ ಶುರುವಾಗಿತ್ತು. ಆರಂಭದಲ್ಲಿಯೇ ಧಗೆಯ ವಾತಾವರಣ ಜೋರಾಗಿತ್ತು. ಇದರಿಂದ ಜನ ಸುಸ್ತಾಗಿ ಹೋಗಿದ್ದರು. ಸದ್ಯ ಮಳೆರಾಯ ತಂಪೆರೆದಿದ್ದು, ಭೂಮಿಯೂ ಸ್ವಲ್ಪ ಕೂಲ್ ಆಗಿದೆ. ನಿನ್ನೆ ಅಂತು ರಾಜ್ಯದ ಹಲವೆಡೆ ಆಲಿಕಲ್ಲಿನ ಮಳೆಯಾಗಿದೆ. ಬಿಸಿಲಿನ ಬಿಸಿಗೆ ಬೆಂದಿದ್ದ ಜನ, ವರ್ಷದ ಮೊದಲ ಮಳೆಗೆ ಮೈಯೊಡ್ಡಿ ಖುಷಿ ಪಟ್ಟಿದ್ದಾರೆ. ಇಂದು ಕೂಡ ರಾಜ್ಯದ ಹಲವೆಡೆ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇಂದು ಬೆಳಗ್ಗೆಯಿಂದ ಅಷ್ಟೊಂದು ಬಿಸಿಯ ವಾತಾವರಣ ಇಲ್ಲ ಬದಲಿಗೆ ಮೋಡಕವಿದ ವಾತಾವರಣದಂತೆ ಇದೆ. ಉತ್ತರ ಕರ್ನಾಟಕ ಮತ್ತು ದಕ್ಷಿಣದ ಹಲವು ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಹೆಚ್ಚಾಗಲಿದೆ. ಉಳಿದಂತೆ ವಿಜಯಪುರ, ಬಾಗಲಕೋಟೆ, ಧಾರವಾಡ, ಬೆಳಗಾವಿ, ಬಳ್ಳಾರಿ, ವಿಜಯನಗರ, ಕೊಪ್ಪಳ ಮತ್ತು ಹಾವೇರಿ ಜಿಲ್ಲೆಗಳಲ್ಲಿ ವರುಣನ ಪ್ರಭಾವ ಕಂಡು ಬರಲಿದೆ. ಈ ಭಾಗದ ಕೆಲವು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆ ನೀಡಲಾಗಿದ್ದು, ಕೃಷಿ ಚಟುವಟಿಕೆಗಳಿಗೆ ಇದು ಸಹಕಾರಿಯಾಗುವ ಸಾಧ್ಯತೆಯಿದೆ. ಬೆಂಗಳೂರು ನಗರ ಹಾಗೂ ಗ್ರಾಮಾಂತರ ಭಾಗದಲ್ಲೂ ಜೋರು ಮಳೆಯ ಮುನ್ಸೂಚನೆಯನ್ನು ನೀಡಲಾಗಿದೆ.
ಬೇಸಿಗೆಯ ಬಿಸಿಲಿನ ತಾಪ ಹೆಚ್ಚಾಗಿರುವ ಕಾರಣ, ಮಳೆಯ ನಿರೀಲ್ಚೆಯನ್ನ ಯಾರು ಮಾಡಿರಲ್ಲ. ಆದರೆ ಯಾವಾಗ ಬೇಕಾದರು ಮಳೆ ಬರಬಹುದಾದಂತ ಪರಿಸ್ಥಿತಿ ಇರುವ ಕಾರಣ, ವಾಹನ ಸವಾರರು ಕೂಡ ಎಚ್ಚರಿಕೆಯಿಂದ ಇರಬೇಕಾದ ಅನಿವಾರ್ಯತೆ ಇದೆ. ಸ್ವಲ್ಪ ಸಮಯ ಮಳೆ ಬಂದಿರುವುದಕ್ಕೇನೆ ತಣ್ಣನೆಯ ಗಾಳಿ ಬೀಸುತ್ತಾ ಇದೆ. ಬಿಸಿ ಗಾಳಿಯನ್ನೇ ಸೇವಿಸಿತ್ತಿದ್ದವರಿಗೆ ಈ ವಾತಾವರಣ ಒಂಥರ ಖುಷಿ ಕೊಟ್ಟಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.









