ಬೆಂಗಳೂರು: ತಮಿಳುನಾಡಿಗೆ ಹೋಗುವಾಗ ದಾರಿ ಮಧ್ಯೆ ಮೈಸೂರು ವಿಮಾನ ನಿಲ್ದಾಣದಲ್ಲಿ ರಾಹುಲ್ ಗಾಂಧಿ ಅವರು ಇಳಿದಿದ್ದರು. ಸಿಎಂ ಹಾಗೂ ಡಿಸಿಎಂ ಗ್ಯಾಪ್ ನಲ್ಲಿ ಭೇಟಿಯಾಗಿ ಮಾತು ಕಥೆಯನ್ ನಡೆಸಿದ್ದಾರೆ. ಈ ಸಂಬಂಧ ಗೃಹ ಸಚಿವ ಜಿ ಪರಮೇಶ್ವರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಮುಖ್ಯಮಂತ್ರಿಗಳು ಮತ್ತು ಅಧ್ಯಕ್ಷರು ಮಾತನ್ನಾಡಿದ್ದು ಅವರೇ. ಅವರೇ ಈ ಬಗ್ಗೆ ಹೇಳಬೇಕು. ನೀವೂ ನಮ್ಮನ್ನ ಕೇಳಿದರೆ ಹೇಗೆ ಹೇಳೋದು ಎಂದು ಹೇಳುತ್ತಲೇ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ್ದಾರೆ. ಅಲ್ಲಿ ಚರ್ಚೆ ಏನು ಮಾಡಿದಂತೆ ಕಾಣಿಸಲಿಲ್ಲ. ಉಭಯ ಕುಶಲೋಪರಿ ಇದ್ದಂತೆ ಇತ್ತು. ಆ ಬಗ್ಗೆ ನಾನೇನು ಹೇಳುವುದಕ್ಕೆ ಆಗಲ್ಲ ಎಂದಿದ್ದಾರೆ.
ಹೈಕಮಾಂಡ್ ಒಂದು ಕ್ಲಾರಿಟಿ ಕೊಡಲಿ ಎಂಬ ರಾಜಣ್ಣ ಅವರ ಹೇಳಿಕೆ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದಾರೆ. ಅದನ್ನ ಎಲ್ಲರು ಬಯಸ್ತಾ ಇದ್ದಾರೆ. ರಾಜಣ್ಣ ಅವರು ಹೇಳುವುದು ಒಂದು ಅರ್ಥದಲ್ಲಿ ಸರಿ ಇದೆ. ಈ ಗೊಂದಲ ಇರಬಾರದು ಎಂಬುದು ಎಲ್ಲರ ಅಭಿಪ್ರಾಯವಾಗಿದೆ. ರಾಜಣ್ಣ ಅವರು ಓಪನ್ ಆಗಿ ಹೇಳಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಬಳ್ಳಾರಿ ಕೇಸಲ್ಲಿ ಭರತ್ ರೆಡ್ಡಿ ಅರೆಸ್ಟ್ ಆಗದೆ ಇರುವುದಕ್ಕೆ ಬಿಜೆಪಿ ಗರಂ ಆಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ತನಿಖೆ ಮಾಡ್ತಾ ಇದ್ದಾರೆ. ದಿನನಿತ್ಯ ವಿರೋಧ ಪಕ್ಷದವರನ್ನ ಕೇಳಿಕೊಂಡು, ಕಾಂಗ್ರೆಸ್ ನವರನ್ನ ಕೇಳಿಕೊಂಡು ಮಾಡಲ್ಲ ಪೊಲೀಸವರು. ನಿರ್ದಿಷ್ಟವಾದಂತ ತನಿಖೆ ಮಾಡೋದಕ್ಕೆ ಹೇಳಿರ್ತಾರೆ ಅವರು ಮಾಡ್ತಾರೆ. ಯಾರನ್ನ ಅರೆಸ್ಟ್ ಮಾಡಬೇಕು, ಯಾವಾಗ ಮಾಡಬೇಕು ಎಂಬುದು ಪೊಲೀಸರಿಗೆ ಗೊತ್ತಿದೆ ಎಂದಿದ್ದಾರೆ.

