ಭಾರತ್ ಜೋಡೋ ಯಾಕೆಂದು ಕೇಳುತ್ತಿದ್ದವರಿಗೆ ರಾಹುಲ್ ಗಾಂಧಿ ಉತ್ತರ

 

ಬಳ್ಳಾರಿ: ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಬಳ್ಳಾರಿಯಲ್ಲಿದೆ. ಇಂದು ಬೃಹತ್ ಸಮಾವೇಶವನ್ನು ನಡೆಸುತ್ತಿದೆ. ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆಗೆ ಕಾಂಗ್ರೆಸ್ ಯಾತ್ರೆ ಅಂತ ಹೆಸರಿಡಬಹುದು ಎಂದು ಬಿಜೆಪಿಯ ಹಲವು ನಾಯಕರು ಹರಿಹಾಯ್ದಿದ್ದರು. ಈ ಬಗ್ಗೆ ಆ ಯಾತ್ರೆಗೆ ಭಾರತ್ ಜೋಡೋ ಅಂತಾನೆ ಹೆಸರಿಟ್ಟಿದ್ದು ಯಾಕೆ ಎಂಬುದನ್ನು ವಿವರಿಸಿದ್ದಾರೆ.

ಇಂದು ಬಳ್ಳಾರಿಯಲ್ಲಿ ಭಾರತ್ ಜೋಡೋ ಯಾತ್ರೆಯ ಬೃಹತ್ ಸಮಾವೇಶ ನಡೆದಿದೆ. ಈ ಸಮಾವೇಶದಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ನಾವೂ ನಮ್ಮ ಯಾತ್ರೆಗೆ ಭಾರತ್ ಜೋಡೋ ಯಾತ್ರೆ ಎಂದು ಹೆಸರಿಟ್ಟಿದ್ದೇವೆ. ಬಿಜೆಪಿ ಮತ್ತು ಆರ್ಎಸ್ಎಸ್ ಸಿದ್ದಾಂತದಿಂದ ದೇಶ ಒಡೆಯುತ್ತಿದೆ ಎಂಬ ಭಾವನೆ ಸಾವಿರಾರು ಜನರಲ್ಲಿ ಮೂಡಿದೆ. ಹೀಗಾಗಿ ನಾವೂ ದೇಶ ಒಡೆಯುವುದಕ್ಕೆ ಬಿಡಲ್ಲ ಎಂಬ ಸಂದೇಶವನ್ನು ಸಾರುವುದಕ್ಕೋಸ್ಕರ ಈ ಐಕ್ಯತಾ ಯಾತ್ರೆಗೆ ಭಾರತ್ ಜೋಡೋ ಅಂತ ಹೆಸರಿಟ್ಟಿದ್ದೇವೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *