ಅಪ್ಪು ಇಲ್ಲದ 2 ತಿಂಗಳು : ನೇತ್ರದಾನಕ್ಕೆ ಒತ್ತು ನೀಡಲು ರಾಘಣ್ಣ ಮನವಿ..!

suddionenews
1 Min Read

 

ಬೆಂಗಳೂರು: ಕರ್ನಾಟಕ ರತ್ನ, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಗಲಿ ಇಂದಿಗೆ 2 ತಿಂಗಳು. ಒಂದು ಕಡೆ ಭಜರಂಗಿ ಸಿನಿಮಾ ರಿಲೀಸ್ ಆಗಿದ್ದ ಖುಷಿ. ಎಲ್ಲರೂ ಆ ಸಂತಸದಲ್ಲಿ ತೇಲುತ್ತಿರುವಾಗ್ಲೆ, ಶಿಳ್ಳೆ ಚಪ್ಪಾಳೆ ಹೊಡೆದು ಎಂಜಾಯ್ ಮಾಡುತ್ತಿರುವಾಗ್ಲೇ ಎಲ್ಲರ ಮನಸ್ಸಿಗೂ ಸಿಡಿಲು ಬಡಿದಂತ ಸುದ್ದಿ ಬಂದಿದ್ದು. ಅದು ಅಪ್ಪು ಸಾವಿನ ಸುದ್ದಿ.

ಅಕ್ಷರಶಃ ಇಡೀ ಕರುನಾಡೇ ಶಾಕ್ ನಲ್ಲಿತ್ತು. ಯಾರಲ್ಲಿಯೂ ಆ ವಿಚಾರವನ್ನ ನಂಬೋದಕ್ಕೆ ಆಗ್ತಿರಲಿಲ್ಲ. ಬಳಿಕ ಸತ್ಯವನ್ನ ಯಾರಿಗೂ ಅರಗಿಸಿಕೊಳ್ಳೋದಕ್ಕೂ ಆಗಿರಲಿಲ್ಲ. ಇಂದಿಗೂ ಅಪ್ಪು ನಮ್ಮ ಜೊತೆ ಇಲ್ಲ ಅನ್ನೋ ಆ ಕಹಿ ಸತ್ಯವನ್ನ ಒಪ್ಪಿಕೊಳ್ಳಲು ಯಾರಿಗೂ ಮನಸ್ಸಿಲ್ಲ. ಅವರನ್ನ ಕೋಟ್ಯಾಂತರ ಜನ ಮಿಸ್ ಮಾಡಿಕೊಳ್ಳುತ್ತಿದ್ದಾರೆ.

ಇಂದು ಅವರ 2 ತಿಂಗಳ ಪುಣ್ಯ ಸ್ಮರಣೆ. ಹೀಗಾಗಿ ಕುಟುಂಬ ಸದಸ್ಯರೆಲ್ಲ ಸಮಾಧಿ ಬಳಿ ಬಂದು ಪೂಜೆ ಸಲ್ಲಿಸಿದ್ದಾರೆ. ಪ್ರತಿದಿನ ಬಂದಂತೆ ಇವತ್ತು ಕೂಡ ಅಭಿಮಾನಿಗಳು ಸಾಗಾರೋಪಾದಿಯಲ್ಲೇ ಹರಿದು ಬಂದಿದ್ದಾರೆ.

ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್‍ಕುಮಾರ್, ಮಕ್ಕಳು, ರಾಘಣ್ಣ, ಅಪ್ಪು ಸಹೋದರಿಯರು ಸೇರಿದಂತೆ ಕುಟುಂಬಸ್ಥರೆಲ್ಲಾ ಸೇರಿ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಮಾತನಾಡಿದ ರಾಘಣ್ಣ, ಪುನೀತ್ ನಿಧನದ ಬಳಿಕ ನೇತ್ರದಾನದ ಬಗ್ಗೆ ಅರಿವು ಹೆಚ್ಚಾಗಿದೆ. ನೋಂದಣಿ ಮಾಡಿಕೊಳ್ಳುವವರ ಸಂಖ್ಯೆಯೂ ಹೆಚ್ಚಾಗಿದೆ. ಜೊತೆಗೆ ಈಗ ತುಂಬಾ ಸುಲಭವಾಗಿದೆ. 8884018800 ನಂಬರ್ ಗೆ ಮಿಸ್ಡ್ ಕಾಲ್ ಮಾಡಿದ್ರು ಸಾಕು, ಆ ಫಾರ್ಮ್ ಮೊಬೈಲ್ ಗೆ ಬರುತ್ತೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *