ಮಾರಿ ಕಣ್ಣು ಹೋರಿ ಮ್ಯಾಗೆ : ಸಿದ್ದರಾಮಯ್ಯ ವಿಚಾರಕ್ಕೆ ವ್ಯಂಗ್ಯವಾಡಿದ ಸಚಿವ ಆರ್ ಅಶೋಕ್..!

suddionenews
1 Min Read

ಚಿಕ್ಕಬಳ್ಳಾಪುರ: ಹಿಜಬ್ ಹಾಗೂ ಕೇಸರಿ ಶಾಲು ವಿಚಾರವಾಗಿ ಕಾಂಗ್ರೆಸ್ ವಿರುದ್ಧ ಸಚಿವ ಆರ್ ಅಶೋಕ್ ಕಿಡಿಕಾರಿದ್ದಾರೆ. ವಿದ್ಯಾರ್ಥಿಗಳು ಶಾಲಾ ಕಾಲೇಜಿನಲ್ಲಿ ಹಿಜಬ್ ಮತ್ತು ಕೇಸರಿ ಶಾಲು ಧರಿಸಿ ಬರುವುದೇ ತಪ್ಪು. ಸಮವಸ್ತ್ರ ಧರಿಸಿ ಬರಲಿ ಎಂದಿದ್ದಾರೆ.

ಇದೇ ವಿಚಾರವಾಗಿ ಕಾಂಗ್ರೆಸ್ ಮೇಲೆ ಹರಿಹಾಯ್ದ ಸಚಿವ ಅಶೋಕ್, ಮಾರಿ ಕಣ್ಣು ಹೋರಿ ಮ್ಯಾಗೆ ಎಂಬಂತೆ ಸಿದ್ದರಾಮಯ್ಯ ಅವರ ಕಣ್ಣು ಅಲ್ಪಸಂಖ್ಯಾತರ ಮೇಲೆ ಬಿದ್ದಿದೆ. ಕಾಂಗ್ರೆಸ್ ನವರು ವಿನಾಕಾರಣ ವಿವಾದ ಸೃಷ್ಟಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರು ವೋಟ್ ಬ್ಯಾಂಕ್ ಪಾಲಿಟಿಕ್ಸ್ ಅನುಸರಿಸುತ್ತಿದ್ದಾರೆ. ವಿಧಾನಸಭಾ ಚುನಾವಣೆ ಹತ್ತಿರ ಬರ್ತಾ ಇದೆಯಲ್ಲ ಅದ್ಕೆ ವಿವಾದ ಸೃಷ್ಟಿಸುತ್ತಿದೆ.

ಕಾಂಗ್ರೆಸ್ ಈ ಮುಂಚೆಯೂ ಸದಾ ಒಲೈಕೆ ರಾಜಕಾರಣ ಮಾಡಿಕೊಂಡೆ ಬಂದವರು. ದೇಶದಲ್ಲಿ ಕೋಮು ಸಂಘರ್ಷ ಮಾಡುವ ಕೆಲಸವನ್ನ ಕಾಂಗ್ರೆಸ್ ಬಿಡಬೇಕು. ಇದು ಭಾರತ ದೇಶ ಇಸ್ಲಾಮಿಕ್ ರಾಜ್ಯವಲ್ಲ. ಭಾರತ ಸಂಸ್ಕೃತಿ, ಇತಿಹಾಸದ ಪ್ರಕಾರ ನಡೆದುಕೊಂಡು ಹೋಗಬೇಕು. ಕೇಸರಿ ಶಾಲು-ಹಿಜಬ್ ವಿವಾದವೇ ಅಲ್ಲ. ಸರ್ಕಾರ ಯಾರ ಪರವೂ ಅಲ್ಲ. ಸಮವಸ್ತ್ರ ಧರಿಸಿ ಶಾಲಾ-ಕಾಲೇಜಿಗೆ ಬರಬೇಕು ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *