ತಪ್ಪೇ‌ ಮಾಡಿಲ್ಲದ ಮಗಳಿಗೆ ಶಿಕ್ಷೆ : ಚೈತ್ರಾ ಕುಂದಾಪುರ ಬಗ್ಗೆ ತಾಯಿಯ ಫಸ್ಟ್ ರಿಯಾಕ್ಷನ್

suddionenews
1 Min Read

ಎಂಎಲ್ಎ ಟಿಕೆಟ್ ಕೊಡಿಸುತ್ತೇನೆ ಎಂದು ಹೇಳಿ ಉದ್ಯಮಿ ಗೋವಿಂದ ಪೂಜಾರ್ ಅವರಿಗೆ 7 ಕೋಟಿ ಮೋಸ ಮಾಡಿದ ಆರೋಪದ ಮೇಲೆ ಚೈತ್ರಾ ಕುಂದಾಪುರ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇದೀಗ ಮಗಳ‌ ಬಂಧನದ ಬಗ್ಗೆ ತಾಯಿ ರೋಹಿಣಿ ಅವರು ಫಸ್ಟ್ ರಿಯಾಕ್ಷನ್ ಕೊಟ್ಟಿದ್ದಾರೆ.

ನನ್ನ ಮಗಳನ್ನು ಬಳಸಿಕೊಂಡು ಈ ಸ್ಥಿತಿಗೆ ತರಲಾಗಿದೆ. ಆದರೆ‌ ನನ್ನ ಮಗಳು ಯಾವುದೇ ಥರವಾದ ತಪ್ಪು ಮಾಡಿಲ್ಲ. ಮಗಳನ್ನು ವಶಕ್ಕೆ ಪಡೆದ ದಿನವೇ ಪೊಲೀಸರು ಕರೆ ಮಾಡಿದ್ದರು. ಮಗಳನ್ನು ವಶಕ್ಕೆ ಪಡೆದ ಮಾಹಿತಿ ಹಂಚಿಕೊಂಡರು. ಜೊತೆಗೆ ಮಗಳು ಕೂಡ ಫೋನ್ ನಲ್ಲಿಯೇ ಮಾತನಾಡಿದಳು.

ಮಗಳು ಫೋನ್ ನಲ್ಲಿಯೇ ಧೈರ್ಯ ತುಂಬಿದ್ದಾಳೆ‌. ನಾನು ಎಲ್ಲವನ್ನು ನೋಡಿಕೊಳ್ಳುತ್ತೇನೆ ಎಂದಿದ್ದಾಳೆ. ನನ್ನ ಮಗಳನ್ನು ಬಳಸಿಕೊಂಡು ಈ ಸ್ಥಿತಿಗೆ ತರಲಾಗಿದೆ. ತನ್ನ ಕೈಯಿಂದ ಹಣ ಹೋದರು ಬೇರೊಬ್ಬರ ಹಣಕ್ಕೆ ಆಸೆ ಪಟ್ಟವಳಲ್ಲ ನನ್ನ ಮಗಳು. ನಮಗೆ ಯಾವ ಚಿಂತೆಯನ್ನು ಕೊಡಲ್ಲ, ಎಲ್ಲವನ್ನು ಅವಲೇ ನಿಭಾಯಿಸುತ್ತಾಳೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *