ಬಿಜೆಪಿಯಿಂದ ‘ಜನಾಕ್ರೋಶ’.. ಜೆಡಿಎಸ್ ನಿಂದ ‘ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ’ ; ಹೇಗಿದೆ ನಿಖಿಲ್ ನೇತೃತ್ವದ ಪ್ರತಿಭಟನೆ..?

suddionenews
1 Min Read

ಬೆಲೆ ಏರಿಕೆ ಹೆಚ್ಚಳದ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಬೇರೆ ಬೇರೆಯಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈಗಾಗಲೇ ಬಿಜೆಪಿಯಿಂದ ಜನಾಕ್ರೋಶ ಯಾತ್ರೆ ಶುರುವಾಗಿದ್ದು, ಇದೀಗ ಜೆಡಿಎಸ್ ನಿಂದಾನೂ ಸಪರೇಟ್ ಪ್ರತಿಭಟನೆ ಆರಂಭವಾಗಿದೆ. ‘ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ’ ಎಂಬ ವಾಕ್ಯದಡಿ ಪ್ರತಿಭಟನೆ ಆರಂಭ ಮಾಡಿದೆ. ಇದರ ನೇತೃತ್ವವನ್ನು ಯುವ ಜನತಾದಳದ ರಾಜ್ಯಾಧ್ಯಕ್ಷ ವಹಿಸಿಕೊಂಡಿದ್ದಾರೆ.

ಅಷ್ಟೇ ಅಲ್ಲ ಸಾಕಪ್ಪ ಸಾಕು ಅನ್ನೋ ವೆಬ್ಸೈಟ್ ಕೂಡ ಆರಂಭಿಸಿದ್ದಾರೆ. ಈ ವೆಬ್ ಮಾಡಿರುವ ಉದ್ದೇಶವೇನೆಂದರೆ ರಾಜ್ಯದ ಮೂಲೆ ಮೂಲೆಯಿಂದ ಯಾರೂ ಬೇಕಾದರೂ ರಿಜಿಸ್ಟರ್ ಆಗುವ ಮೂಲಕ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬಹುದು. ಈ ಬಗ್ಗೆ ಇಂದ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ನಿಖಿಲ್ ಕುಮಾರಸ್ವಾಮಿ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದಲೂ ಜನರ ಮೇಲೆ ಬೆಲೆ ಏರಿಕೆ ಬರೆ ಎಳೆಯುತ್ತಿದೆ. ಆರ್ಥಿಕವಾಗಿ ರಾಜ್ಯವನ್ನು ವಿಕೋಪಕ್ಕೆ ತಳ್ಳಿರುವ ಕಾಂಗ್ರೆಸ್ ಸರ್ಕಾರವೂ ರಾಜ್ಯದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ಸೃಷ್ಟಿಸಿದೆ.

ಜನರು ಇದರಿಂದ ರೋಸಿ ಹೋಗಿದ್ದಾರೆ. ಇನ್ನೆಷ್ಟು ದಿನ ಇದನ್ನು ಸಹಿಸಿಕೊಳ್ಳಬೇಕು, ಅದಕ್ಕೆ ನಾವೂ ಹೋರಾಟಕ್ಕೆ ಧುಮುಕ್ಕಿದ್ದೇವೆ. ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ ಸಾಕು ಎಂಬ ಹೋರಾಟಕ್ಕೆ ಧುಮುಕ್ಕಿದ್ದೇವೆ ಎಂಬ ಅಭಿಯಾನ ಶುರು ಮಾಡಿದ್ದೇವೆ. ಏಪ್ರಿಲ್ 12ರಂದು ಫ್ರೀಡಂ ಪಾರ್ಕ್ ನಲ್ಲಿ ಜೆಡಿಎಸ್ ಬೃಹತ್ ಪ್ರತಿಭಟನೆ ಮಾಡಲಿದೆ. ಕುಮಾರಸ್ವಾಮಿ ಅವರು ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗ್ತಾರೆ. ಜೆಡಿಎಸ್ ನಿಂದ ನಿರಂತರವಾಗಿ ಈ ಪ್ರತಿಭಟನೆ ನಡೆಯುತ್ತೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಮಾಹಿತಿ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks