ಬೆಂಗಳೂರು: ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುವ ಮಕ್ಕಳಿಗೆ ಗೊತ್ತು ಆ ಟೆನ್ಶನ್ ಏನು ಅಂತ. ನಾಳೆ ಇನ್ನೇನು ಫಲಿತಾಂಶ ಹೊರ ಬೀಳುತ್ತೆ, ನಮ್ಮ ಮುಂದಿನ ಭವಿಷ್ಯದ ಯೋಚನೆಗೆ ನಾಂದಿ ಹಾಡುತ್ತೆ ಎನ್ನುವಾಗಲೇ ಬೇಸರ ತರಿಸಿದೆ. ನಾಳೆ ಘೋಷಣೆ ಆಗಬೇಕಿದ್ದ ರಿಸಲ್ಟ್ ಪ್ರಕಟವಾಗ್ತಾ ಇಲ್ಲ. ಇವತ್ತು ಸಂಜೆ ತನಕ ಪೋಷಕರು ಕೂಡ ಕಾದಿದ್ದಾರೆ. ನಾಳೆ ಫಲಿತಾಂಶ ಪ್ರಕಟದ ಬಗ್ಗೆ ಏನಾದ್ರೂ ನಿರ್ಧಾರ ತೆಗೆದುಕೊಳ್ಳಬಹುದು ಎಂದು. ಆದರೆ ಸರ್ಕಾರದಿಂದ ಯಾವುದೇ ಮಾಹಿತಿ ಸಿಕ್ಕಿಲ್ಲ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಮೊದಲ ವಾರದಲ್ಲಿಯೇ ಫಲಿತಾಂಶ ಪ್ರಕಟ ಮಾಡುವುದರ ಬಗ್ಗೆ ಮಾತನ್ನಾಡಿದ್ದರು.
ಹೀಗಾಗಿ ನಾಳೆ ಮಕ್ಕಳ ಫಲಿತಾಂಶ ಬರಬಹುದು ಎಂದು ವಿದ್ಯಾರ್ಥಿಗಳು ಮಾತ್ರವಲ್ಲ ಪೋಷಕರು ಕೂಡ ಕಾಯ್ತಾ ಇದ್ದರು. ಆದರೆ ನಿರಾಸೆಯಾಗಿದೆ. ನಾಳೆ ಫಲಿತಾಂಶ ಪ್ರಕಟವಾಗುವುದಿಲ್ಲ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷ ಪ್ರಕಾಶ್ ನಿಟ್ಟಾಲಿ ಅವರು ತಿಳಿಸಿದ್ದಾರೆ.
ಈ ಬಾರಿ ಕಳೆದ ವರ್ಷಕ್ಕಿಂತ ಬೇಗನೇ ಫಲಿತಾಂಶ ಬರಲಿದೆ ಎಂದೇ ವಿದ್ಯಾರ್ಥಿಗಳು ಖುಷಿ ಪಟ್ಟಿದ್ದರು. ಮಾರ್ಚ್ನಲ್ಲಿ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆಗೆ ರಾಜ್ಯಾದ್ಯಂತ ಸುಮಾರು 7 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಹಾಜರಾಗಿದ್ದರು. ಪರೀಕ್ಷೆ ಮುಗಿದ ಬೆನ್ನಲ್ಲೇ ಮೌಲ್ಯಮಾಪನ ಕಾರ್ಯ ಚುರುಕಿನಿಂದ ಸಾಗಿತ್ತು. ಆದರೆ, ಈಗ ಕೊನೆಯ ಕ್ಷಣದಲ್ಲಿ ಮೌಲ್ಯಮಾಪನ ಪ್ರಕ್ರಿಯೆಯ ಸಣ್ಣ ಪುಟ್ಟ ಕೆಲಸಗಳು ಬಾಕಿ ಇರುವುದರಿಂದ ಫಲಿತಾಂಶದ ದಿನಾಂಕ ಮುಂದೂಡಲ್ಪಟ್ಟಿದ್ದು, ಇನ್ನೆರಡು ದಿನ ವಿಳಂಬವಾಗುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ. ಇನ್ನು ಫಲಿತಾಂಶ ಯಾವಾಗ? ಏನು ಅಂತ ಶಿಕ್ಷಣ ಇಲಾಖೆ ಯಾವುದೇ ಮಾಹಿತಿ ನೀಡಿಲ್ಲ.















