Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

🔴 ಅಡ್ಮಿಷನ್ ಓಪನ್

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ

2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)

ಸಂಪೂರ್ಣ ಮಾಹಿತಿ & ದಾಖಲಾತಿಗಾಗಿ ಕ್ಲಿಕ್ ಮಾಡಿ ➔
---Advertisement---

ದೇಶ ಪ್ರಗತಿ ಹೊಂದಿರುವುದು ಕಾಯಕ ಜೀವಿಗಳಿಂದಲೇ ಹೊರೆತು ರಾಜಕಾರಣಿಗಳಿಂದಲ್ಲ : ಬಸವಪ್ರಭು ಸ್ವಾಮೀಜಿ

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ, ಜೂನ್.30 :
ನಮ್ಮ ದೇಶ ಪ್ರಗತಿಯನ್ನು ಹೊಂದಿರುವುದು ಕಾಯಕ ಜೀವಿಗಳಿಂದಲೇ ಹೊರೆತು ರಾಜಕಾರಣಿಗಳಿಂದ ಅಲ್ಲ ಎಂದು ಮುರುಘಾರಾಜೇಂದ್ರ ಬೃಹನ್ಮಠದ ಉಸ್ತುವಾರಿ ಶ್ರೀಗಳಾದ ಬಸವಪ್ರಭು ಶ್ರೀಗಳು ತಿಳಿಸಿದರು.

ನಗರದ ಮೆಜೆಸ್ಟಿಕ್ ಕಟ್ಟಡದಲ್ಲಿ ಭಾನುವಾರ ನೂತನವಾಗಿ ಪ್ರಾರಂಭಿಸಲಾದ ಶ್ರಮಜೀವಿ ಕಟ್ಟಡ ಮತ್ತು ಕೂಲಿ ಕಾರ್ಮಿಕ ಸೇವಾ ಪಡೆಯ ರಾಜ್ಯ ಸಮಿತಿಯ ಸಂಘದ ನೂತನ ಕಚೇರಿಯ ಉದ್ಘಾಟನೆ, ಶಾಸಕರಾದ ಕೆ.ಸಿ.ವಿರೇಂದ್ರ ಪಪ್ಪಿಯವರ 50ನೇ ಹುಟ್ಟು ಹಬ್ಬ ಹಾಗೂ ಆದಿ ಜಾಂಬವ ಅಭೀವೃದ್ದಿ ನಿಗಮಕ್ಕೆ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜಿ.ಎಸ್.ಮಂಜುನಾಥ್‍ರವರಿಗೆ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಕೂಲಿ ಕಾರ್ಮಿಕರು ಶ್ರಮ ಜೀವಿಗಳಾಗಿದ್ದಾರೆ. ಕಾಯಕದ ಮೇಲೆ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. 12ನೇ ಶತಮಾನದಲ್ಲಿ ಬಸವಣ್ಣರವರು ಕಾಯಕ ಜನರನ್ನು ಕೂಡಿಸಿಕೊಂಡು ಅನುಭವ ಮಂಟಪವನ್ನು ನಿರ್ಮಾಣ ಮಾಡಿದರು. ದಿನ ನಿತ್ಯದ ಕಾಯಕದ ನಂತರ ಸಭೆಯನ್ನು ನಡೆಸಿದ ಶರಣರು ತಮ್ಮ ಅನುಭವನ್ನು ಮಂಟಪದಲ್ಲಿ ಹಂಚುವುದರ ಮೂಲಕ ವಚನಗಳನ್ನು ಬರೆದಿದ್ದಾರೆ. ಇಂದಿನ ಸಂವಿಧಾನ 12ನೇ ಶತಮಾನದ ಅನುಭವ ಮಂಟಪವಾಗಿದೆ ಅಲ್ಲಿ ಎಲ್ಲಾ ಜಾತಿಯವರು ಎಲ್ಲಾ ಕೆಲಸವನ್ನು ಮಾಡುವವರು ಸಹಾ ಇದು ಅವರಿಗೆ ಸಮಾನತೆಯನ್ನು ನೀಡಲಾಗಿತು. ಅಂದಿನ ಸರ್ವರಿಗೂ ಸಮಪಾಲು ಸಮಬಾಳು ಎಂಬ ಇಂದಿನ ವಾಕ್ಯ 12ನೇ ಶತಮಾನದಲ್ಲಿಯೇ ಇತ್ತು ಎಂದರು.

ಬಸವಣ್ಣರವರು ಹುಟ್ಟಿದಕ್ಕಿಂತ ಸಮಾಜದಲ್ಲಿ ಅಷ್ಠಾಗಿ ಸರಿಯಿರಲಿಲ್ಲ, ದಲಿತರು ರಸ್ತೆಯಲ್ಲಿ ಓಡಾಡುವ ಹಾಗೇ ಇರಲ್ಲಿಲ್ಲ. ಓಡಾಡಿದರು ಸಹಾ ಹಿಂದೆ ಕಸವರಿಕೆಯನ್ನು ಕಟ್ಟಿಕೊಂಡು ಕೈಯಲ್ಲಿ ಮಡಿಕೆಯನ್ನು ಇಟ್ಟುಕೊಂಡು ಹೋಗಬೇಕಿತ್ತು, ಬಸವಣ್ಣರವರು ಬಂದ ಮೇಲೆ ಇದಕ್ಕೆ ಮುಕ್ತಿಯನ್ನು ಹಾಡಲಾಯಿತು, ಶ್ರಮ ಜೀವಿಗಳಿಗೆ ಮಾನತ್ಯೆಯನ್ನು ನೀಡಲಾಯಿತು. ಒಂದು ಜಾತಿಯವರು ಶ್ರೇಷ್ಠ ಉಳಿದವರು ಕನಿಷ್ಠ ಎಂಬ ಭಾವನೆ ಮೂಡಿತ್ತು. ಸಮಾನತೆ ಇರಲಿಲ್ಲ, ವರ್ಗ, ವರ್ಣ ಬೇದ ಇತ್ತು ಇದನ್ನು ಹೋಗಲಾಡಿಸಲಿ ಬಸವಣ್ಣ ರವರು ಶ್ರಮವನ್ನು ಹಾಕಿದ ಪರಿಣಾಮ ಇಂದು ನಾವುಗಳು ಆರಾಮದ ಜೀವನವನ್ನು ಸಾಗಿಸುತ್ತಿದೆವೆ ಎಂದು ಶ್ರೀಗಳು ತಿಳಿಸಿದರು.

ಬಸವಣ್ಣರವರ ತತ್ವ ಆದರ್ಶಗಳನ್ನು ಬದುಕಿನಲ್ಲಿ ಆಳವಡಿಸಿಕೊಳ್ಳದಿದ್ದರೆ ಆವುಗಳನ್ನು ಆಚರಣೆಗೆ ತರಾದಿದ್ದರೆ ಉದ್ದಾರವಾಗಲು ಸಾಧ್ಯವಿಲ್ಲ, ಕಾಯಕದಿಂದಲೇ ಲಕ್ಷ್ಮೀ ಒಲಿಯುತ್ತಾಳೆ ಬೇರೆ ಕೆಟ್ಟ ಮಾರ್ಗಗಳಿಂದ ಆಕೆ ಒಲಿಯುವುದಿಲ್ಲ, ಕಾಯಕದಿಂದ ಮಾತ್ರ ಜೀವನ ಪ್ರಗತಿಯನ್ನು ಕಾಣಲು ಸಾಧ್ಯವಿದೆ. ದುಡಿದ ಹಣದಲ್ಲಿ ಪ್ರಸಾದವನ್ನು ನೀಡಿ ಬೇರೆಯವರಿಗೆ ದಾನವನ್ನು ಮಾಡುವುದರ ಮೂಲಕ ಬದುಕನ್ನು ಸಾರ್ಥಕ ಮಾಡಿಕೊಳ್ಳಿ ಎಂದ ಅವರು, ಸರ್ಕಾರವೂ ಸಹಾ ಶ್ರಮ ಜೀವಿಗಳ ಕಡೆಗೆ ನೋಡಬೇಕಿದೆ ಅವರಿಗೆ ಅಗತ್ಯವಾದ ಸೌಲಭ್ಯಗಳನ್ನು ನೀಡಬೇಕಿದೆ, ಸಹಾಯವನ್ನು ಮಾಡುವುದರ ಮೂಲಕ ಅವರು ಆರ್ಥೀಕ ಮಟ್ಟವನ್ನು ಸುಧಾರಿಸಬೇಕಿದೆ ಎಂದು ಬಸವಪ್ರಭು ಶ್ರೀಗಳು ತಿಳಿಸಿದರು.

ಸಮಾರಂಭದ ಸಾನಿಧ್ಯವನ್ನು ಬಸವನಾಗ್ತಿದೇವ ಶ್ರೀಗಳು, ಸರ್ದಾರ್ ಸೇವಾಲಾಲ್ ಶ್ರೀಗಳು, ಸಂಗಾಮನಂದ ಶ್ರೀಗಳು ವಹಿಸಿದ್ದರು. ಈ ಕಾರ್ಯಕ್ರಮವನ್ನು ಶ್ರಮಜೀವಿ ಕಟ್ಟಡ ಮತ್ತು ಕೂಲಿ ಕಾರ್ಮಿಕ ಸೇವಾ ಪಡೆಯ ರಾಜ್ಯಾಧ್ಯಕ್ಷರಾದ ಮಲ್ಲಿಕಾರ್ಜನ್, ಉಪಾಧ್ಯಕ್ಷರಾದ ತಿಪ್ಪೇಸ್ವಾಮಿ, ಕಾರ್ಯದರ್ಶಿ ಶಿವಕುಮಾರ್ ಸಹ ಕಾರ್ಯದರ್ಶಿ ನಾಗರಾಜ್, ನಿರ್ದೇಶಕರಾದ ಸೋಮಶೇಖರ್, ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಲಲಿತಾ ಕೃಷ್ಣಮೂರ್ತಿ, ಭಾಗವಹಿಸಿದ್ದರು.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...