ಬಿಗ್ ಬಾಸ್ ಶೋ ಸ್ಥಗಿತಗೊಳಿಸುವಂತೆ ಕನ್ನಡಪರ ಸಂಘಟನೆ ಪ್ರತಿಭಟನೆ : ಅರಣ್ಯ ಇಲಾಖೆಯಿಂದ ನೋಟೀಸ್

1 Min Read

ರಾಮನಗರ: ಬಿಗ್ ಬಾಸ್ ಶೋಗೂ ವಿವಾದಕ್ಕೂ ಕೆಲ ಸೀಸನ್ ಗಳಿಂದ ಅವಿನಾಭಾವ ಸಂಬಂಧ ಎನಿಸುತ್ತದೆ. ಕೆಲ ಸೀಸನ್ ಗಳಿಂದ ಬಿಗ್ ಬಾಸ್ ಆರಂಭವಾದ ಮೇಲೆ ನಿಲ್ಲಿಸಿ ಎಂಬ ಕುಇಗು, ಪ್ರತಿಭಟನೆಗಳು ಹಲವು ಕಾರಣಗಳಿಂದ ನಡೆಯುತ್ತಲೇ ಇರುತ್ತವೆ. ಸೀಸನ್ 12 ಶುರುವಾಗಿ ಎರಡನೇ ವಾರದತ್ತ ಸಾಗುತ್ತಿದೆ. ಈಗ ನೋಡಿದ್ರೆ ಬಿಗ್ ಬಾಸ್ ಸ್ಥಗಿತಗೊಳಿಸಿ ಎಂದು ಕನ್ನಡಪರ ಸಂಘಟನೆಗಳಯ ಪ್ರತಿಭಟನೆ ನಡೆಸುತ್ತಿವೆ.

ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಪ್ರತಿಭಟನೆಯನ್ನ ನಡೆಸಿದೆ. ರಿಯಾಲಿಟಿ ಶೋನ ಕೂಡಲೇ ಸ್ಥಗಿತಗೊಳಿಸುವಂತೆ ಸೂಚನೆ ನೀಡಿದೆ. ಇದರ ಬೆನ್ನಲ್ಲೇ ಅರಣ್ಯ ಇಲಾಖೆ ನೋಟೀಸ್ ಒಂದನ್ನ ನೀಡಿದೆ. ಜಾಲಿವುಡ್ ಸ್ಟುಡಿಯೋ ಹಾಗೂ ಬಿಗ್ ಬಾಸ್ ಮನೆ ಇರುವ ಜಾಗದಲ್ಲಿ ಕಾನೂನು ಉಲ್ಲಂಘನೆಯಾಗಿದೆ ಎಂಬ ಕಾರಣದಿಂದ ನೋಟೀಸ್ ನೀಡಲಾಗಿದೆ. ಸಚಿವ ಈಶ್ವರ್ ಖಂಡ್ರೆ ಅವರು ಕೂಡ ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂಬ ಮಾತನ್ನು ಹೇಳಿದ್ದಾರೆ.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೋಟೀಸ್ ಬಿಗ್ ಬಾಸ್ ಸಂಬಂಧಿಸಿದವರಿಗೆ ನೋಟೀಸ್ ನೀಡಿದೆ. ತ್ಯಾಜ್ಯ ವಿಲೇವಾರಿ ಹಾಗೂ ಎಸ್ಟಿಪಿ ನೀರು ಸೂಕ್ತ ನಿರ್ವಹಣೆ ಆಗ್ತಿಲ್ಲ ಎಂದು ನೋಟೀಸ್ ನಲ್ಲಿ ಉಲ್ಲೇಖ ಮಾಡಲಾಗಿದೆ. ಈ ಸಂಬಂಧ ರಾಮನಗರ ಡಿಸಿ ಹಾಗೂ ಬೆಸ್ಕಾಂ ಅಧಿಕಾರಿಗಳಿಗೆ KSPCB ಈ ಮೊದಲೇ ಎಚ್ಚರಿಕೆಯನ್ನು ನೀಡಿತ್ತು. ನೀರು ಹಾಗೂ ಕರೆಂಟ್ ಕಟ್ ಮಾಡುವಂತೆ ಒಂದು ತಿಂಗಳ ಹಿಂದೆಯೇ ಸೂಚನೆ ನೀಡಿತ್ತು. ಆದರೂ ವೇಲ್ಸ್ ಎಂಟರ್ಟೈನ್ಮೆಂಟ್ ಸಂಸ್ಥೆ ಎಚ್ಚೆತ್ತುಕೊಂಡಿರಲಿಲ್ಲ.‌ ಇದೀಗ ಮತ್ತೆ ನೋಟೀಸ್ ನಿಡೀದೆ. ಈ ಕಡೆ ಪ್ರತಿಭಟನೆಯೂ ನಡೆಯುತ್ತಿದೆ.

Share This Article
Enable Notifications OK No thanks