ಪ್ರಿಯಾಂಕ್ ಖರ್ಗೆ ಮಹಿಳೆಯರ ಕ್ಷಮೆ ಕೇಳಬೇಕು : ಶ್ರೀರಾಮುಲು

1 Min Read

 

ಬಳ್ಳಾರಿ: ಪ್ರಿಯಾಂಕ ಖರ್ಗೆ ಹೇಳಿಕೆಗೆ ಸಚಿವ ಶ್ರೀರಾಮುಲು ತಿರುಗೇಟು ನೀಡಿದ್ದಾರೆ. ಲಂಚ ಮಂಚ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದಾರೆ. ಪ್ರಿಯಾಂಕ್ ಖರ್ಗೆ ಸಂಸ್ಕಾರವಂತ ಎಂದುಕೊಂಡಿದ್ದೆ ಎಂದಿದ್ದಾರೆ.

ಲಂಚ ಮಂಚ ಅನ್ನೋದು ಹೀನಾಯ ಸಂಸ್ಕೃತಿ ತೋರಿಸುತ್ತಿದೆ. ಕಾಂಗ್ರೆಸ್ ಪಕ್ಷದ ಹೀನಾಯ ಸಂಸ್ಕೃತಿಯನ್ನು ತೋರಿಸುತ್ತಿದೆ. ಪ್ರಿಯಾಂಕ್ ಖರ್ಗೆ ಅವರ ತಂದೆಯನ್ನು ನೋಡಿ ಕಲಿಯಲಿ ಎಂದಿದ್ದಾರೆ.

ಶಕ್ತಿ ಇದ್ದರೆ ಮುಂದಿನ ಚುನವಾಣೆಯಲ್ಲಿ ಗೆಲ್ಲಲಿ. ಮಹಿಳೆಯರ ವಿರುದ್ಧ ಈ ಮಾತು ಬಳಕೆ ಮಾಡಬಾರದು. ಪ್ರಿಯಾಂಕ್ ಖರ್ಗೆ ಮಹಿಳೆಯರ ಕ್ಷಮೆ ಕೇಳಬೇಕು ಎಂದಿದ್ದಾರೆ.

ಇತ್ತೀಚೆಗೆ ಶಾಸಕ ಪ್ರಿಯಾಂಕ್ ಖರ್ಗೆ ಯುವಕರು ಕೆಲಸ ಬೇಕು ಎಂದರೆ ಲಂಚ ಕೊಡಬೇಕು, ಮಹಿಳೆಯರು ಮಂಚ ಹತ್ತಬೇಕು ಎಂದಿದ್ದರು. ಇದೀಗ ಆ ವಿಚಾರ ವೈರಲ್ ಆಗುತ್ತಿದ್ದು, ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *