ಹುಬ್ಬಳ್ಳಿ – ಧಾರವಾಡಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮಾ ಭೇಟಿ : ಐಐಟಿ ಉದ್ಘಾಟನೆಯಲ್ಲಿ ಭಾಗಿ

suddionenews
1 Min Read

 

ದಸರಾ ಉದ್ಘಾಟನೆಯ ಬಳಿಕ ರಾಷ್ಟ್ರಪತಿ ದ್ರೌಪತಿ ಮುರ್ಮಾ ಹುಬ್ಬಳ್ಳಿಗೆ ಪ್ರಯಾಣ ಬೆಳೆಸಿದ್ದಾರೆ. ಸಿಎಂ ಬಸವರಾಜ್ ಬೊಮ್ಮಾಯಿ ಅವರು ಕೂಡ ದ್ರೌಪದಿ ಮುರ್ಮಾ ಅಅವರ ಜೊತೆ ತೆರಳಿದ್ದಾರೆ. ಕೇಂದ್ರ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಕೂಡ ಪ್ರಯಾಣ ಬೆಳೆಸಿದ್ದಾರೆ.

ಇನ್ನು ರಾಷ್ಟ್ರಪತಿ ದ್ರೌಪದಿ ಮುರ್ಮಾ ಆಗಮನದ ಹಿನ್ನೆಲೆ ಹುಬ್ಬಳ್ಳಿ ಧಾರವಾಡ ಪಾಲಿಕೆ ವತಿಯಿಂದ ಮುರ್ಮಾ ಅವರಿಗೆ ಸನ್ಮಾನಿಸಲಾಗುತ್ತಿದೆ. ಪೌರಸನ್ಮಾನ ಸ್ವೀಕರಿಸಲು ಮುರ್ಮಾ ಅವರು ಹುಬ್ಬಳ್ಳಿಗೆ ಪ್ರಯಾಣ ಬೆಳೆಸಿದ್ದಾರೆ.

ಬಳಿಕ ಧಾರವಾಡಕ್ಕೂ ಭೇಟಿ ನೀಡಲಿರುವ ದ್ರೌಪತಿ ಮುರ್ಮಾ IIT ಉದ್ಘಾಟನೆಯಲ್ಲಿ ಭಾಗಿಯಾಗಲಿದ್ದಾರೆ. ಹುಬ್ಬಳ್ಳಿಯಲ್ಲಿ ಪೌರ ಸನ್ಮಾನದ ಬಳಿಕ ಧಾರವಾಡಕ್ಕೆ ಆಗಮಿಸಲಿದ್ದಾರೆ. ಮಧ್ಯಾಹ್ನ 1.40 ಧಾರವಾಡದ ಐಐಟಿ ಕ್ಯಾಂಪಸ್ ತಲುಪಲಿದ್ದಾರೆ. ಅಲ್ಲಿಯೇ ಮಧ್ಯಾಹ್ನದ ಭೋಜನ ಕೂಡ ಸವಿಯಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *